ಕೊಡಗು:ಎರಡು ತಲೆ ಹಾವನ್ನು ಅಕ್ರಮವಾಗಿ ಮಾರಾಟ ಮಾಡುವುದಕ್ಕೆ ಯತ್ನಿಸುತ್ತಿದ್ದವನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. ವಿರಾಜಪೇಟೆ ತಾಲೂಕಿನ ಸಿದ್ಧಾಪುರ ಸಮೀಪದ ಆನಂದಪುರದಲ್ಲಿ ಹಾವು ಮಾರಾಟ ಮಾಡುವುದಕ್ಕೆ ಆತ ಪ್ರಯತ್ನಿಸಿದ್ದ.
ಬಂಧಿತನನ್ನು ಮೈಸೂರಿನ ಶಾಂತಿನಗರದ ಸೈಯದ್ ಮೊಮಿನ್(22) ಎಂದು ಗುರುತಿಸಲಾಗಿದೆ. ಕಡುನೀಲಿ ಮತ್ತು ಹಳದಿ ಬಣ್ಣದ ಏರ್ ಬ್ಯಾಗಿನಲ್ಲಿ ಹಾವನ್ನು ತುಂಬಿಕೊಂಡು ತಂದಿದ್ದ. ಆನಂದಪುರ ಬಸ್​ ನಿಲ್ದಾಣದ ಸಮೀಪ ಈ ಬ್ಯಾಗನ್ನು ಹಿಡಿದುಕೊಂಡು ಗಿರಾಕಿಗಾಗಿ ಕಾಯುತ್ತಿದ್ದ. ಒಂದು ಕೋಟಿ ರೂಪಾಯಿ ಬೆಲೆಗೆ ಹಾವನ್ನು ಮಾರಾಟ ಮಾಡಲು ಮುಂದಾಗಿದ್ದ ಆತ.
ಇದನ್ನೂ ಓದಿ:ಕೆಂಪಿರುವೆ-ಚಿಟ್ಟೆಹುಳು ಸಹಬಾಳ್ವೆ!, ಉಡುಪಿಯಲ್ಲಿ ಪ್ರಕೃತಿ ವಿಸ್ಮಯ ಗುರುತಿಸಿದ ಚಿಟ್ಟೆ ಅಧ್ಯಯನಕಾರರು
ಹಾವು ಮಾರಾಟ ಮಾಡುವುದಕ್ಕೆ ಪ್ರಯತ್ನಿಸುತ್ತಿರುವ ಖಚಿತ ಮಾಹಿತಿ ಸಿಕ್ಕ ಕಾರಣ, ಅರಣ್ಯ ಸಂಚಾರಿ ದಳದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಸೈಯದ್ ಬಳಿ ತೆರಳಿ ಹಾವು ಬ್ಯಾಗ್​ನಲ್ಲಿ ಇರುವುದನ್ನು ಖಚಿತಪಡಿಸಿಕೊಂಡು, ಆತನನ್ನು ಬಂಧಿಸಿದ್ದಾರೆ. ಅಲ್ಲದೆ, ಆತನ ಬಳಿ ಇದ್ದ ಹಾವನ್ನು ರಕ್ಷಿಸಲಾಗಿದೆ. (ದಿಗ್ವಿಜಯ ನ್ಯೂಸ್)
ಭೀಕರ ರಸ್ತೆ ಅಪಘಾತ: ಟ್ರ್ಯಾಕ್ಟರ್ ಮತ್ತು 108 ಆಂಬುಲೆನ್ಸ್ ಪರಸ್ಪರ ಡಿಕ್ಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 9 =
Remember me
