ಬೆಂಗಳೂರು: ಕರೊನಾ ವೈರಸ್ ಸೋಂಕು ಹರಡುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಬದುಕು ಹೇಗಿರಬೇಕು ಎಂಬ ಬಗ್ಗೆ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನಿತ್ಯವೂ ವಿವರಣೆ ನೀಡುತ್ತಿದ್ದಾರೆ. ಈ ಕಾರ್ಯಕ್ರಮವು ದಿಗ್ವಿಜಯ 24X7 ನ್ಯೂಸ್​ನಲ್ಲಿ ಬೆಳಗ್ಗೆ ಶ್ರೀ ಗುರುವಾಣಿ- ಕರೊನಾ ಸಾಂತ್ವನ ಎಂಬ ಹೆಸರಿನಲ್ಲಿ ಪ್ರಸಾರವಾಗುತ್ತಿದೆ. ಇಂದಿನ ಎಪಿಸೋಡಿನಲ್ಲಿ ಅವರು, ಆರೋಗ್ಯಕರ ಬದುಕಿನ ಬಗ್ಗೆ ವಿವರಣೆ ನೀಡಿದ್ದಾರೆ.
ಇದನ್ನೂ ಓದಿ:VIDEO: ಹೆಲ್ಮೆಟ್​ ಹಾಕದಿದ್ರೆ ದಂಡ ಕಟ್ಟಬಹುದು, ಆದರೆ ಕರೊನಾ ಬಂದರೆ ಪ್ರಾಣ ಕಟ್ಟಬೇಕಾಗತ್ತೆ, ಹುಷಾರಾಗಿರಿ: ಶ್ರೀಗುರುವಾಣಿಯಲ್ಲಿದೆ ವಿವರಣೆ ವೀಕ್ಷಿಸಿ
ಶ್ಲೇಷ್ಮಕ್ಕೂ ದುರ್ಜನರಿಗೂ ಹತ್ತಿರದ ಹೋಲಿಕೆ ಇದೆ. ಸಿಹಿ ಪದಾರ್ಥಗಳನ್ನು ತಿಂದರೆ ಶ್ಲೇಷ್ಮ ಅಂದರೆ ಕಫ ಜಾಸ್ತಿಯಾಗುತ್ತದೆ. ಸಿಹಿಯಾಗಿ ಮಾತನಾಡಿದರೆ ದುರ್ಜನರು ಇನ್ನಷ್ಟು ರೊಚ್ಚಿಗೇಳುತ್ತಾರೆ. ಕಟುವಾಗಿ ಮಾತನಾಡಿದರೆ ದುರ್ಜನರು ಮೆತ್ತಗಾಗುತ್ತಾರೆ. ಮೆತ್ತಗೆ ಇರುವ ಮೇಕೆಯನ್ನು ಬಲಿ ಕೊಡುತ್ತಾರೆಯೇ ಹೊರತು ಘರ್ಜಿಸುವ ಹುಲಿಯನ್ನು ಬಲಿಕೊಡುವುದಿಲ್ಲ. ಈ ಮಾತು ಈಗಿನ ಕಾಲಕ್ಕೂ ಅನ್ವಯ ಎಂಬುದನ್ನು ಸ್ವಾಮೀಜಿ ನೆನಪಿಸಿದರು.
ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆ ಪೆಟ್ಟು ಅಂತ ಒಂದು ಮಾತಿದೆ. ಹಸುಗಳಾದರೂ ದೊಣ್ಣೆ ಪೆಟ್ಟಿಗೆ ಬಗ್ಗಬಹುದೇನೋ ಆದರೆ, ದುರ್ಜನರು ಬಗ್ಗಲ್ಲ. ದುರ್ಜನರು ದುರ್ಗುಣಗಳ ರಾಶಿಯಿಂದ ಕೂಡಿರುತ್ತಾರೆ. ಕಬ್ಬಿಣದ ಮೇಲಿನ ತುಕ್ಕು ಬಿಡಬೇಕಾದರೆ ಹುಳಿರಸ ಬೀಳಬೇಕು. ಕಟು ಮಾತಿನಲ್ಲಿ ದುರ್ಜನರಿಗೆ ಬುದ್ಧಿ ಹೇಳಬೇಕಾಗುತ್ತದೆ ಎಂಬುದನ್ನು ಸ್ವಾಮೀಜಿ ವಿವರಿಸಿದ್ದಾರೆ.
ಇದನ್ನೂ ಓದಿ:ವ್ಯಕ್ತಿಗತ ಶುಚಿತ್ವ ಪಾಲನೆ ಹೇಗೆ ಮತ್ತು ಎಷ್ಟು ಅನಿವಾರ್ಯ- ಕರೊನಾ ಸಾಂತ್ವನದ ನುಡಿ ಶ್ರೀಗುರುವಾಣಿಯಲ್ಲಿ ಇಂದು..
ಆರೋಗ್ಯದ ವಿಷಯದಲ್ಲಿ ಎಲ್ಲರೂ ಕಾಳಜಿ ವಹಿಸಬೇಕು. ಆಹಾರ ಸೇವನೆಯಲ್ಲೂ ಹಿರಿಯರು ಪಾಲಿಸುತ್ತಿದ್ದ ನಿಯಮಗಳನ್ನು ಈಗಲೂ ಪಾಲಿಸಬೇಕು. ಬಿಸಿ ನೀರು ಕುಡಿಯಬೇಕು. ಬೇರೊಬ್ಬರ ಜತೆ ಮಾತನಾಡುವಾಗ ಬಾಯಿಗೆ ಕೈ ಅಡ್ಡ ಹಿಡಿದುಕೊಳ್ಳಬೇಕು. ಇದು ಸಾಮಾಜಿಕ ಆರೋಗ್ಯ ಕಾಪಾಡಲು ಅಗತ್ಯ ಎಂಬುದನ್ನು ಸ್ವಾಮೀಜಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಪ್ರವಚನದ ಪೂರ್ಣ ವಿವರಕ್ಕಾಗಿ ಕೆಳಗಿನ ವಿಡಿಯೋ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 11 =
Remember me
