| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಕನ್ನಡಿಗರು ಕನ್ನಡಕ್ಕಿಂತಲೂ ಪೆಟ್ರೋಲ್ ಹೆಚ್ಚು ಬಳಸುತ್ತಾರೆಂಬ ವ್ಯಂಗ್ಯದ ಮಾತನ್ನು ಸುಳ್ಳಾಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿರುವ ರಾಜ್ಯ ಸರ್ಕಾರ ಸಾರ್ವಜನಿಕರಲ್ಲಿ ಕನ್ನಡ ಬಳಕೆ ಹೆಚ್ಚಿಸುವಂತೆ ಮನವೊಲಿಸಲು ತೀರ್ವನಿಸಿದೆ. ಈ ಉದ್ದೇಶಕ್ಕಾಗಿ ಸಂಹಿತೆ ರೂಪಿಸಿ ಕನ್ನಡ ಕಾಯಕ ಪಡೆ ಯನ್ನು ರಚಿಸಲು ಮುಂದಾಗಿದೆ.
ಕನ್ನಡ ಕಾಯಕ ವರ್ಷ ಆಚರಿಸುತ್ತಿರುವ ಸರ್ಕಾರ ಆ ಕಾರ್ಯಕ್ಕೆ ವಿವಿಧ ಇಲಾಖೆಗಳ ಜತೆಗೆ ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳನ್ನು ಒಳಗೊಳ್ಳುವಂತೆ ಮಾಡಲು 21 ಸೂತ್ರ ರಚಿಸಿದೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಜನರ ಮನವೊಲಿಸುವ ಕಾರ್ಯಕ್ಕಾಗಿ ಕನ್ನಡ ಕಾಯಕ ಪಡೆ ರಚಿಸುವ ಜವಾಬ್ದಾರಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ್ದಾಗಿದೆ. ಪಡೆ ರಚನೆಗೆ ಈಗಾಗಲೇ ಸಿಎಂ ಅನುಮತಿ ನೀಡಿದ್ದು, ಪ್ರಾಧಿಕಾರದ ವೆಬ್​ಸೈಟ್​ನಲ್ಲಿ ಯಾರು ಬೇಕಾದರೂ ನೋಂದಾಯಿಸಿಕೊಳ್ಳಬಹುದು. ಅಂತಹವರಿಗೆ ಕಾಯಕ ಪಡೆಯ ಸದಸ್ಯ ಎಂಬ ನೇಮಕಾತಿ ಪತ್ರ ಸಿಗುತ್ತದೆ.
ಜಾಗೃತ ಸಮಿತಿ:ಕನ್ನಡ ಬಳಕೆ ಹೆಚ್ಚಿಸುವ ಕುರಿತಂತೆ ಪ್ರತಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಜಾಗೃತ ಸಮಿತಿಗಳನ್ನು ರಚಿಸಲಾಗುತ್ತದೆ. ಜಿಲ್ಲಾ ಹಾಗೂ ತಾಲೂಕು ಜಾಗೃತ ಸಮಿತಿಗೆ ತಲಾ ಐವರು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 6 ಜನರ ಸಮಿತಿ ಇರುತ್ತದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಿಗೆ ಕೆಲವು ಜಿಲ್ಲೆಗಳ ಉಸ್ತುವಾರಿ ನೀಡಲಾಗುತ್ತದೆ. ಸದಸ್ಯರು ಜಾಗೃತ ಸಮಿತಿಯ ಜತೆಗೆ ಕನ್ನಡ ಅನುಷ್ಠಾನ ಕುರಿತಂತೆ ಕಾರ್ಯಕ್ರಮ ಮಾಡಬಹುದು. ಕಾಯಕ ಪಡೆಯ ಸದಸ್ಯರ ಮೇಲೂ ನಿಗಾ ವಹಿಸಬೇಕು. ಜಾಗೃತ ಸಮಿತಿಗೆ ನೇಮಕಾತಿ ಒಂದೆರಡು ದಿನಗಳಲ್ಲಿ ಮುಗಿಯಲಿದೆ.
ಕನ್ನಡ ಕಟ್ಟುವ ಕಾಯಕದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತೆ ಕಾರ್ಯಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ಕಾಯಕ ಪಡೆ ರಚಿಸಲಾಗುತ್ತದೆ.
|ಟಿ.ಎಸ್. ನಾಗಾಭರಣಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಸಾರ್ವಜನಿಕರಲ್ಲಿ ಕನ್ನಡ ಬಳಕೆ ಹೆಚ್ಚಾಗಬೇಕು. ಯಾವುದೇ ಕೀಳರಿಮೆ ಇಲ್ಲದೆ ಎಲ್ಲ ಕಡೆ ಕನ್ನಡ ಬಳಸುವಂತಾಗಬೇಕು. ಅದಕ್ಕಾಗಿ ಯೋಜನೆ ಸಿದ್ಧವಾಗಿದ್ದು, ಮುಖ್ಯಮಂತ್ರಿ ಅನುಮೋದಿಸಿದ್ದಾರೆ.
|ಡಾ. ಕೆ. ಮುರಳೀಧರಕಾರ್ಯದರ್ಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ









ParagraphShortcodesFormats
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:eight − seven =
Remember me
