ಬೆಂಗಳೂರು:ಕೋವಿಡ್-19ರ ಸೋಂಕು ಬೆಕ್ಕುಗಳಿಂದ ಬರಲಿದೆ ಎಂಬ ವಿಚಾರಕ್ಕೆ ಅಕ್ಕಪಕ್ಕದ ಮನೆಯವರಿಗೆ ಜಗಳವಾಗಿದ್ದು, ಪ್ರಕರಣವೀಗ ಪುಲಿಕೇಶಿನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಫ್ರೇಜರ್​ಟೌನ್​ನ ಕೋಲಿಸ್ ರಸ್ತೆಯ ಫಾರೂಖ್ ಅಹ್ಮದ್ ಮತ್ತು ಸಂದೀಪ್ ಆಚಾರ್ಯ ಎಂಬುವರ ನಡುವೆ ಜಗಳವಾಗಿದೆ.
ಒಂದೇ ಅಪಾರ್ಟ್​ವೆುಂಟ್​ನಲ್ಲಿ ಈ ಇಬ್ಬರು ನೆಲೆಸಿದ್ದಾರೆ. ದಾರಿ ತಪ್ಪಿ ಬರುವ ಬೆಕ್ಕುಗಳಿಗೆ ಸಂದೀಪ್ ಆಚಾರ್ಯ ಹಾಲು, ಅನ್ನ ಹಾಕುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಲಾಕ್​ಡೌನ್ ಸಮಯದಲ್ಲಿಯೂ ಆಹಾರ ಹಾಕುತ್ತಿದ್ದರು. ಇದನ್ನು ಗಮನಿಸಿದ ಅಪಾರ್ಟ್​ವೆುಂಟ್ ನಿವಾಸಿಗಳು, ಬೆಕ್ಕಿನಿಂದಲೂ ಕರೊನಾ ಬರುವ ಸಾಧ್ಯತೆ ಇದೆ. ಅದಕ್ಕಾಗಿ ಊಟ ಹಾಕದಂತೆ ಮನವಿ ಮಾಡಿದ್ದರು.
ಏ.23ರ ಸಂಜೆ 7.15ರಲ್ಲಿ ಸಂದೀಪ್ ಬೆಕ್ಕುಗಳಿಗೆ ಆಹಾರ ಹಾಕಿದ್ದರು. ಅದೇ ಸಮಯಕ್ಕೆ ವಾಯು ವಿಹಾರಕ್ಕೆ ಹೊರಬಂದ ಫಾರೂಖ್ ಪ್ರಶ್ನೆ ಮಾಡಿದ್ದರು. ಆಗ ಫಾರೂಖ್ ಮೇಲೆ ಸಂದೀಪ್ ಹಲ್ಲೆ ನಡೆಸಿದ್ದಾರೆ. ಫಾರೂಖ್ ನೀಡಿರುವ ದೂರಿನ ಸಂಬಂಧ ಕ್ರಮ ತೆಗೆದುಕೊಂಡಿರುವುದಾಗಿ ಪುಲಿಕೇಶಿನಗರ ಪೊಲೀಸರು ತಿಳಿಸಿದ್ದಾರೆ.
ಸಿಬಿಎಸ್​ಇ ಪರೀಕ್ಷೆಗಳಲ್ಲಿ ಬದಲಾವಣೆಯಾಗಿದೆಯಾ? ಗೊಂದಲಗಳಿಗೆ ಕೇಂದ್ರ ಸಚಿವರೇ ನೀಡಿದ್ದಾರೆ ಸ್ಪಷ್ಟನೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve + one =
Remember me
