ಗದಗ:ನೆರೆ ಸಂತ್ರಸ್ತರಿಗೆಂದು ಸರ್ಕಾರ ನೀಡಿದ ಉಚಿತ ಆಹಾರ ಕಿಟ್​ಗಳು ಅಧಿಕಾರಿಗಳ ಎಡವಟ್ಟಿನಿಂದ ಹುಳುಗಳ ಪಾಲಾಗಿವೆ.
ಪ್ರವಾಹ ಬಂದು 10 ತಿಂಗಳು ಕಳೆದರೂ ರೋಣ ತಾಲೂಕಿನ ಮೆಣಸಿಗಿ ನವಗ್ರಾಮದ ಪಶು ಆಸ್ಪತ್ರೆಯ ಕೊಠಡಿಯಲ್ಲಿ ಆಹಾರ ಕಿಟ್​ಗಳು ಕೊಳೆಯುತ್ತ ಬಿದ್ದಿವೆ. ಸುಮಾರು 380 ಆಹಾರ ಕಿಟ್​ಗಳು, ನೂರಾರು ಸೀಮೆಎಣ್ಣೆ ಕ್ಯಾನ್​ಗಳು ಹಾಳಾಗಿವೆ. ನೆರೆ ಸಂತ್ರಸ್ತರಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಆಹಾರ ಕಿಟ್ ವಿತರಣೆ ಮಾಡುವಲ್ಲಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.
ಇದನ್ನೂ ಓದಿರಿವಕೀಲ ನೌಷಾದ್​ಗೆ ಗುಂಡಿಕ್ಕಿದ್ದು ಭೂಗತ ಪಾತಕಿ ರವಿ ಪೂಜಾರಿ?
ಪ್ರವಾಹ ಸಂಭವಿಸಿದ ಬಳಿಕ ಅದೆಷ್ಟೋ ಕುಟುಂಬಗಳು ಅನ್ನ ನೀರಿಗಾಗಿ ಪರದಾಡಿದವು. ಆ ವೇಳೆ ಸಂತ್ರಸ್ತರಿಗಾಗಿ ರಾಜ್ಯ ಸರ್ಕಾರ ಆಹಾರ ಕಿಟ್​ಗಳನ್ನು ನೀಡಿತ್ತು. ಆ ಕಿಟ್​ಗಳನ್ನು ಪಶು ಆಸ್ಪತ್ರೆಯಲ್ಲಿ ದಾಸ್ತಾನು ಮಾಡಿದ ಜಿಲ್ಲಾಡಳಿತ ಮತ್ತು ಗ್ರಾಪಂ ಅಧಿಕಾರಿಗಳು ಜನರಿಗೆ ವಿತರಿಸದೆ ಬೇಜವಾಬ್ದಾರಿ ತೋರಿದ್ದಾರೆ.
ಪ್ರತಿ ಕಿಟ್​ನಲ್ಲಿ 10 ಕೆಜಿ ಅಕ್ಕಿ, ಅಡುಗೆ ಎಣ್ಣೆ ಪಾಕೇಟ್, ಉಪ್ಪು, ತೊಗರಿ ಬೇಳೆ, ಕುಟುಂಬಕ್ಕೆ ಬೇಕಾಗುವ ಅಗತ್ಯ ವಸ್ತುಗಳು ಇವೆ. ಅಡುಗೆ ಎಣ್ಣೆ ಅವಧಿ ಮುಗಿದು 5 ತಿಂಗಳು ಗತಿಸಿದ್ದು, ನೆರೆ ಸಂತ್ರಸ್ತರ ಹೊಟ್ಟೆ ಸೇರಬೇಕಿದ್ದ ಆಹಾರ ಧಾನ್ಯಗಳು ಹುಳುಗಳ ಪಾಲಾಗಿವೆ. ಬೇಜವಾಬ್ದಾರಿಗೆ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆರೆ ಸಂತ್ರಸ್ತರು ಆಗ್ರಹಿಸಿದ್ದಾರೆ.
ಇದನ್ನೂ ಓದಿರಿvideo/ ಮಳೆ ಸುರಿಯುತ್ತಿದ್ದರೂ ಪೊಲೀಸ್​ ಠಾಣೆ ಎದುರಲ್ಲೇ ಧರಣಿ ಕುಳಿತ ಮಹಿಳೆ, ಕ್ಯಾರೆ ಎನ್ನದ ಸಿಬ್ಬಂದಿ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
