ಬೆಂಗಳೂರು:ಮುರುಗೇಶ್ ಪಾಳ್ಯ ಬಳಿಯ ನವರತನ್ ಜುವೆಲ್ಲರಿ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಯುವಕ-ಯುವತಿ ಮಾಡಬಾರದ್ದನ್ನು ಮಾಡಿ ಮಾಲೀಕರ ಕಣ್ಣೆದುರೇ ಸಿನಿಮೀಯ ರೀತಿ ಎಸ್ಕೇಪ್​ ಆಗಿದ್ದಾರೆ.
ನ. 10ರಂದು ಚಿನ್ನದ ಸರ ಖರೀದಿಸುವ ನೆಪದಲ್ಲಿ ಆಭರಣ ಮಳಿಗೆಗೆ ಚಾಲಾಕಿ ಜೋಡಿ ಬಂದಿತ್ತು. ಟ್ರಯಲ್ ನೋಡುವ ನೆಪದಲ್ಲಿ 40 ಗ್ರಾಂ ತೂಕದ ಚಿನ್ನದ ಸರವನ್ನು ಯುವತಿ ಕೊರಳಿಗೆ ಹಾಕಿಕೊಂಡು ಮಿರರ್​ ಮುಂದೆ ನಿಂತು ಕೆಲ ಕ್ಷಣ ನೋಡಿದಳು. ನಂತರ ಬ್ಯಾಗ್​ನಿಂದ ಹಣ ತೆಗೆದು ಅಂಗಡಿಯವನ ಮುಂದೆ ಎಣಿಸಿ ಕಡಿಮೆ ಇದೆ ಎಂದ ಆಕೆ, ಬಾಕಿ ಹಣಕ್ಕೆ ಎಟಿಎಂ ಕಾರ್ಡ್ ಸ್ವೈಪ್ ಮಾಡ್ತೀರಾ? ಎಂದೂ ಕೇಳಿದಳು.
ಯುವತಿ ಜತೆ ಬಂದಿದ್ದ ಯುವಕ ಬೈಕ್​ನ ಡಿಕ್ಕಿಯಲ್ಲಿ ಎಟಿಎಂ ಕಾರ್ಡ್ ಇದೆ. ಅದನ್ನು ತರುವೆ ಎಂದು ಅಂಗಡಿಯಿಂದ ಹೊರ ಬಂದ. ಈ ವೇಳೆ ಇನ್ನೊಂದು ಸರ ತೋರಿಸಿ ಎಂದ ಆಕೆ, ಅಂಗಡಿಯವನ ಗಮನ ಬೇರೆಡೆ ಸೆಳೆಯುತ್ತಿದ್ದಳು. ಅಷ್ಟೊತ್ತಿಗೆ ಎಟಿಎಂ ಕಾರ್ಡ್ ತರಲು ಹೋದ ವ್ಯಕ್ತಿ ಅಂಗಡಿ ಹೊರಗೆ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಟ್ರಯಲ್​ಗೆ ಪಡೆದ 40 ಗ್ರಾಂ ಚಿನ್ನದ ಸರದ ಜತೆ ಅಂಗಡಿಯಿಂದ ಹೊರ ಹೋದ ಯುವತಿ ಬೈಕ್​ ಹತ್ತಿ ಎಸ್ಕೇಪ್ ಆದಳು.
ಆಕೆ ಬೈಕ್​ ಹತ್ತಿ ಹೋಗುತ್ತಿದ್ದಂತೆ ಎಚ್ಚೆತ್ತ ಅಂಗಡಿಯವ ಹೊರ ಹೋಡಿದರೂ ಚಾಲಾಕಿ ಕಳ್ಳ ಜೋಡಿ ಸಿಗಲಿಲ್ಲ. ಆರೋಪಿಗಳ ಸಂಪೂರ್ಣ ಕೃತ್ಯ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜುವೆಲ್ಲರಿ ಶಾಪ್ ಮಾಲೀಕ ಜೀವನ್ ಭೀಮಾನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಘಟನೆ ಸಂಬಂಧ ಅರೋಪಿ ರಾಘವೇಂದ್ರ ಎಂಬಾತನನ್ನು ಬಂಧಿಸಲಾಗಿದೆ.
ರಾತ್ರೋರಾತ್ರಿ ಮನೆಯಲ್ಲೇ ಪತ್ನಿಯನ್ನು ಕೊಚ್ಚಿ ಹಾಕಿದ ಭೂಪ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ತಂಗಿ ಗಂಡನಿಂದಲೇ ನಡೆಯಿತು ಘೋರ ಕೃತ್ಯ, ರಕ್ತದ ಮಡುವಲ್ಲಿ ಒದ್ದಾಡುತ್ತಾ ಪ್ರಾಣಬಿಟ್ಟ ಅತ್ತಿಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + seventeen =
Remember me
