ಬೆಂಗಳೂರು:ದೇಶದೆಲ್ಲೆಡೆ ಕೆಂಪು ಹಣ್ಣಿನ ಹವಾ ಜೋರಾಗಿದೆ. ಟೊಮ್ಯಾಟೋ ಬೆಲೆ ಕೇಳಿದ್ರೆ ಸಾಕು ತಲೆ ತಿರುಗಿ ಬೀಳುವಂತಾಗಿದೆ. ಟೊಮ್ಯಾಟೋ ಬೆಳೆದವರಿಗೆ ಒಳ್ಳೆಯ ಸಮಯ ಬಂದಿದ್ದರೆ, ಅದನ್ನು ಖರೀದಿಸುವ ಗ್ರಾಹಕರು ಇದೀಗ ಕಣ್ಣೀರಿಡುವಂತಾಗಿದೆ. ಮಳೆಗಾಲದ ನಡುವೆ ಟೊಮ್ಯಾಟೋ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಕೆಲ ದಿನಗಳಿಂದ 79 ರಿಂದ 90 ರೂಪಾಯಿ ಒಳಗೆ ಏರಿಳಿತ ಕಾಣುತ್ತಿದ್ದ ಟೊಮ್ಯಾಟೋ ಬೆಲೆ ಇದೀಗ ಆನ್​ಲೈನ್​ ಮಾರ್ಕೆಟ್​ನಲ್ಲಿ ಶತಕದ ಗಡಿ ದಾಟಿದೆ.
ಟೊಮ್ಯಾಟೋ ಹೆಚ್ಚಾಗಿ ಬೆಳೆಯುವ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಟೊಮ್ಯಾಟೋ ಬೆಲೆಯಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆಯ ತಜ್ಞರು ಅಂದಾಜಿಸಿದ್ದಾರೆ. ಭಾರಿ ಮಳೆಯ ಜತೆಗೆ ರೋಗಗಳು ಮತ್ತು ಕಡಿಮೆ ಇಳುವರಿ ಕೂಡ ಟೊಮ್ಯಾಟೋ ಬೆಲೆ ಏರಿಕೆಗೆ ಕಾರಣವಾಗಿದೆ. ಕೆಲ ಆನ್​ಲೈನ್​ ಡೆಲಿವರಿ ಪ್ಲಾಟ್​ಫಾರ್ಮ್​ಗಳಲ್ಲಿ ಪ್ರತಿ ಕೆಜಿ ಟೊಮ್ಯಾಟೋ 100 ರಿಂದ 104 ರೂಪಾಯಿಗೆ ಮಾರಾಟವಾಗುತ್ತಿದ್ದರೆ, ಚಿಲ್ಲರೆ ಅಂಗಡಿಗಳಲ್ಲಿಯೂ ಸಹ ನೂರರ ಗಡಿ ಸಮೀಪ ತಲುಪಿದೆ.
ಕರ್ನಾಟಕದಲ್ಲಿ ಕೋಲಾರವು ಅತಿದೊಡ್ಡ ಟೊಮ್ಯಾಟೋ ಉತ್ಪಾದಕ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿದೆ. ಈ ಜಿಲ್ಲೆಯಲ್ಲಿ ಸುಮಾರು 15 ಸಾವಿರ ಎಕರೆಯಲ್ಲಿ ಟೊಮ್ಯಾಟೋ ಉತ್ಪಾದನೆ ಮಾಡಲಾಗುತ್ತದೆ. ಕೋಲಾರದಿಂದ ಉತ್ತರ ಭಾರತ ಮತ್ತು ಬಾಂಗ್ಲಾದೇಶದಂತಹ ನೆರೆಯ ರಾಷ್ಟ್ರಗಳಿಗೂ ರಫ್ತಾಗುತ್ತದೆ. ಶೇ. 90ರಷ್ಟು ಟೊಮ್ಯಾಟೋ ಇಲ್ಲಿಂದ ರಫ್ತಾಗುತ್ತದೆ. ಆದರೆ, ಎಲ್ಲೆಡೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳೆ ಸಂಪೂರ್ಣ ನಾಶವಾಗಿದೆ. ಇದರ ನಡುವೆ ಟೊಮ್ಯಾಟೋಗೆ ಭಾರಿ ಬೇಡಿಕೆ ಬರುತ್ತಿದೆ ಎಂದು ಕೋಲಾರ ಎಪಿಎಂಸಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನು ಈ ವರ್ಷ ಬೆಳೆ ಕೂಡ ತುಂಬಾ ಕಡಿಮೆ ಇದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ. 25 ರಷ್ಟು ಮಾತ್ರ ಬೆಳೆ ಇದೆ. ಸಾಮಾನ್ಯವಾಗಿ ಒಂದು ಎಕರೆಗೆ 4 ಸಾವಿರ ಬಾಕ್ಸ್​ ಉತ್ಪಾದನೆ ಆಗುತ್ತಿತ್ತು. ಆದರೆ, ಈ ವರ್ಷ ಕೇವಲ 1 ಸಾವಿರ ಬಾಕ್ಸ್​ ಉತ್ಪಾದನೆಯಾಗಿದೆ. ಇನ್ನು ಕೆಲ ರೈತರು ಕಳೆದ ವರ್ಷದಲ್ಲಿ ಟೊಮ್ಯಾಟೋ ಬೆಳೆಯಿಂದ ಉಂಟಾದ ನಷ್ಟದ ಕಾರಣದಿಂದಾಗಿ ಈ ವರ್ಷ ಬೆಳೆ ಬೆಳೆಯದಿರುವುದು ಕೂಡ ಉತ್ಪಾದನೆ ಕುಂಠಿತಕ್ಕೆ ಕಾರಣವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಟೊಮ್ಯಾಟೋ ಬೆಲೆಯಲ್ಲಿ ಇನ್ನಷ್ಟು ಬೆಲೆ ಏರಿಕೆಯಾದರೆ ಅಚ್ಚರಿ ಪಡಬೇಕಾಗಿಲ್ಲ.(ಏಜೆನ್ಸೀಸ್​)
ನಟ ದರ್ಶನ್​​​​​ ಸಹವಾಸದಿಂದ ಮಗ ಜೈಲು ಪಾಲು: ಕೊರಗಿನಲ್ಲೇ ಪ್ರಾಣಬಿಟ್ಟ ಆರೋಪಿ ರಘು ತಾಯಿ

ಕೊನೆಗೂ ಹಾರ್ದಿಕ್​ ಪಾಂಡ್ಯ-ನತಾಶಾ ಡಿವೋರ್ಸ್​ ಹಿಂದಿನ ಅಸಲಿ ಕಾರಣ ಬಯಲು! ಆಪ್ತರು ಬಿಚ್ಚಿಟ್ಟ ರಹಸ್ಯವಿದು…

ಪೊಲೀಸರ ಕೈ ಸೇರಿದ ರೇಣುಕಾಸ್ವಾಮಿ ಮರಣೋತ್ತರ ವರದಿಯಲ್ಲಿ ಆಘಾತಕಾರಿ ಸಂಗತಿ ಬಯಲು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 − six =
Remember me
