ಬೆಂಗಳೂರು:ಪರಿಸರ ದಿನಾಚರಣೆ ಅಂಗವಾಗಿ ಅಖಿಲ ಕರ್ನಾಟಕ ಮಕ್ಕಳ ಕೂಟ ಸಹಯೋಗ ಮತ್ತು ಚಾಮರಾಜಪೇಟೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಕಾರದಲ್ಲಿ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ ನ್ಯೂಸ್’ ಚಾನಲ್ ವತಿಯಿಂದ ಭಾನುವಾರ (ಜೂ. 4) ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮತ್ತು ಕಾಳಜಿ ಬೆಳೆಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. 7ರಿಂದ 16 ವರ್ಷದ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ.
ಸ್ಪರ್ಧೆಗೆ ನೋಂದಣಿ ಉಚಿತ ವಾಗಿರಲಿದೆ. ಆಸಕ್ತ ಮಕ್ಕಳು ದೂ: 88844 32666ಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು ಅಥವಾ ಜೂ. 4ರಂದು ಸ್ಥಳದಲ್ಲೇ ಹೆಸರು ನೋಂದಣಿ ಮಾಡಬಹುದು.

* ಡ್ರಾಯಿಂಗ್ ಶೀಟ್​ಗಳನ್ನು ನಾವೇ ಕೊಡುತ್ತೇವೆ. ಪ್ಯಾಡು, ಪೆನ್ಸಿಲ್, ಸ್ಕೆಚ್ ಪೆನ್, ಸ್ಕೇಲು ಸೇರಿ ಇತರ ಬರವಣಿಗೆ ಸಾಮಗ್ರಿಗಳನ್ನು ಮಕ್ಕಳೇ ತರಬೇಕು.* ಕೊಟ್ಟಿರುವ ಸ್ಪರ್ಧಾ ವಿಷಯ ಬಿಟ್ಟು ಬೇರೆ ಚಿತ್ರ ಬರೆಯಬಾರದು.* ಚಿತ್ರವನ್ನು ಪೂರ್ಣಪ್ರಮಾಣದಲ್ಲಿ ಬಿಡಿಸಿರಬೇಕು.* 2,3,4ನೇ ತರಗತಿ ಹಾಗೂ 5,6,7ನೇ ತರಗತಿ ವಿದ್ಯಾರ್ಥಿಗಳು ವಾಟರ್ ಕಲರ್, ಮಿಕ್ಸ್ ಮೀಡಿಯಾ, ಕಲರ್ ಪೆನ್, ಸ್ಕೆಚ್ ಪೆನ್, ಪೆನ್ಸಿಲ್ ಯಾವುದಾದರೂ ಬಳಸಬಹುದು.* 8, 9ನೇ ತರಗತಿ ವಿದ್ಯಾರ್ಥಿಗಳು ವಾಟರ್ ಕಲರ್ ಮತ್ತು ಪೋಶೋ ಕಲರ್ ಮಾತ್ರ ಬಳಸಬೇಕು.
1. ವಿಭಾಗ-1: 2,3 ಮತ್ತು 4ನೇ ತರಗತಿ ವಿದ್ಯಾರ್ಥಿಗಳು (ಸಬ್ ಜೂನಿಯರ್)2. ವಿಭಾಗ-2: 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳು (ಜೂನಿಯರ್)3. ವಿಭಾಗ-3: 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳು (ಸೀನಿಯರ್)
ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಮಕ್ಕಳು ಓದುತ್ತಿರುವ ಶಾಲೆಯ ಐಡಿ ಕಾರ್ಡ್ ಅಥವಾ ಅಧಿಕೃತ ಗುರುತಿನ ಚೀಟಿ ಹಾಗೂ ಎರಡು ಪಾಸ್​ಪೋರ್ಟ್ ಫೋಟೋ ಕಡ್ಡಾಯವಾಗಿ ತರಬೇಕು.
ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿ ರುವ ಮಕ್ಕಳ ಕೂಟ ಆವರಣ. ಭಾನುವಾರ (ಜೂ.4) ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆವರೆಗೆ
* ಪ್ರಥಮ- 3,000 ರೂಪಾಯಿ* ದ್ವಿತೀಯ- 2,000 ರೂಪಾಯಿ* ತೃತೀಯ- 1,000 ರೂಪಾಯಿ* ತಲಾ ಒಬ್ಬರಿಗೆ ಸಮಾಧಾನಕರ ಬಹುಮಾನ* ಭಾಗವಹಿಸಿದ ಎಲ್ಲರಿಗೂ ಪ್ರಶಂಸಾ ಪತ್ರ ವಿತರಣೆ
ರಾಮನಗರ, ಬಂಡೀಪುರದಲ್ಲಿ ಆನೆ ದಾಳಿಯಿಂದ 2 ಸಾವು: ಅರಣ್ಯ ಸಚಿವ ಈಶ್ವರ ಖಂಡ್ರೆ ಸಂತಾಪ

50ನೇ ವಿವಾಹ ವಾರ್ಷಿಕೋತ್ಸವ: ಬ್ಲಾಗ್​ನಲ್ಲಿ ಖುಷಿ ಹಂಚಿಕೊಂಡ ಬಿಗ್​ಬಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
