ಬೆಂಗಳೂರು:ಬೆಂಗಳೂರು ಕಮಿಷನರೇಟ್​ನಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸರ ಜಿಲ್ಲಾ ವರ್ಗಾವಣೆಗೆ ಸಂಬಂಧಿಸಿದಂತೆ ನೆನಪೋಲೆ ಪ್ರಕಟಿಸಿದೆ. ಕಡ್ಡಾಯವಾಗಿ 7 ವರ್ಷ ಸೇವೆ ಪೂರೈಸಿರುವವರಿಗಷ್ಟೇ ಕೋರಿಕೆ ಮೇರೆಗೆ ಅಂತರ ಜಿಲ್ಲಾ ವರ್ಗಾವಣೆಗೆ ಪರಿಗಣಿಸಬೇಕು ಎಂದು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
ಬೆಂಗಳೂರು ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕೋರಿಕೆ ಮೇರೆಗೆ ಸೇವಾ ಜ್ಯೇಷ್ಠತೆ ಬಿಟ್ಟುಕೊಡುವ ಷರತ್ತಿಗೊಳಪಟ್ಟು ಇತರೆ ಜಿಲ್ಲೆ ಹಾಗೂ ನಗರಗಳಿಗೆ ವರ್ಗಾವಣೆಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ, ನಿಯಮಾವಳಿ ಅನುಸರಿಸದೆ ವರ್ಗಾವಣೆ ಕೋರಿ ಪ್ರಧಾನ ಪೊಲೀಸ್ ಕಚೇರಿಗೆ ಅರ್ಜಿಗಳನ್ನು ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಮರುಆದೇಶ ಹೊರಡಿಸಿದ್ದಾರೆ.
ಜಿಲ್ಲಾ ವರ್ಗಾವಣೆಗೆ ಕೋರುವ ಸಿಬ್ಬಂದಿ ಬೆಂ. ನಗರ ಘಟಕದ ಕಾನ್​ಸ್ಟೆಬಲ್ ಹುದ್ದೆಗೆ ನೇಮಕಾತಿ ಹೊಂದಿ 7 ವರ್ಷ ಮತ್ತು ಮೇಲ್ಪಟ್ಟು ಸೇವೆ ಸಲ್ಲಿಸಿರಬೇಕು. ಜತೆಗೆ ಸಶಸ್ತ್ರ ಮೀಸಲು ಪಡೆಯ ಎಪಿಸಿ ಹುದ್ದೆಯಿಂದ ಅಥವಾ ಕೆಎಸ್​ಐಎಸ್​ಎಫ್ ಘಟಕದಿಂದ ಕಾನೂನು ಸುವ್ಯವಸ್ಥೆ ವಿಭಾಗದ ಸಿಪಿಸಿ ಹುದ್ದೆಗೆ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಜಿಲ್ಲಾ ವರ್ಗಾವಣೆಗೆ ಅರ್ಜಿ ಸಲ್ಲಿಸಿದರೆ ಹಿಂದಿನ ಹುದ್ದೆಯ ಸೇವಾವಧಿಯನ್ನು ಪರಿಗಣಿಸದಂತೆ ಸೂಚಿಸಲಾಗಿದೆ.
ಸಿಪಿಸಿ ಹುದ್ದೆಗೆ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವರ್ಗಾವಣೆಗೆ ಎನ್​ಒಸಿ ಕೋರಿ ಘಟಕದ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸಿದರೆ ಸೇವಾ ಪುಸ್ತಕ ಪರಿಶೀಲಿಸಿ ಎನ್​ಒಸಿ ವಿತರಿಸಬೇಕು. ಅರ್ಹರಾಗಿರದಿದ್ದಲ್ಲಿ ಪ್ರಧಾನ ಕಚೇರಿಗೆ ಅರ್ಜಿ ಕಳುಹಿಸದೆ ತಮ್ಮ ಹಂತದಲ್ಲೇ ತಿರಸ್ಕೃತಗೊಳಿಸಲು ಆದೇಶಿಸಲಾಗಿದೆ.
ಯಾರಿಗೆಲ್ಲ ಸಿಗಲಿದೆ ವಿನಾಯ್ತಿ?
2019ರಲ್ಲಿ ಸೇವಾಮಿತಿ ಏರಿಕೆ
ವರ್ಗಾವಣೆಗೆ ಕನಿಷ್ಠ 3 ವರ್ಷಗಳ ಸೇವಾವಧಿ ಮಿತಿ ನಿಗದಿಗೊಳಿಸಲಾಗಿತ್ತು. ನಂತರ 5 ವರ್ಷಗಳ ಅವಧಿಗೆ ಏರಿಸಲಾಗಿತ್ತು. 2019ರಲ್ಲಿ ನಿಯಮವನ್ನು ಭಾಗಶಃ ಮಾರ್ಪಾಡುಗೊಳಿಸಿ ತರಬೇತಿ ಅವಧಿ (1 ವರ್ಷ ಮೂಲಬುನಾದಿ ತರಬೇತಿ ಮತ್ತು 1 ವರ್ಷ ಪ್ರಾಯೋಗಿಕ ತರಬೇತಿ) ಪೂರೈಸಿದ ನಂತರ 5 ವರ್ಷ ಪೂರೈಸಿದ ಅಂದರೆ ಒಟ್ಟು 7 ವರ್ಷ ಸೇವೆ ಪೂರೈಸಿದ ಅಧಿಕಾರಿ/ ಸಿಬ್ಬಂದಿಯನ್ನು ಮಾತ್ರ ಅಂತರ ಜಿಲ್ಲಾ ವರ್ಗಾವಣೆಗೆ ಪರಿಗಣಿಸುವಂತೆ ಆದೇಶಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − nine =
Remember me
