ಬೆಂಗಳೂರು:ಸಾರಿಗೆ ನೌಕರರ ಮುಷ್ಕರಕ್ಕೆ ಕುಮ್ಮಕ್ಕು ನೀಡಿದ್ದು ಕೋಡಿಹಳ್ಳಿ ಚಂದ್ರಶೇಖರ್​ ಎನ್ನುವ ಅಂಶ ಎದ್ದುಕಾಣುತ್ತಿದ್ದು, ಅವರ ಒಣಪ್ರತಿಷ್ಠೆಗೆ, ಮೊಂಡುತನಕ್ಕೆ ಸಾರಿಗೆ ನೌಕರರನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳತೊಡಗಿದೆ. ಎಐಟಿಯುಸಿ ನೇತಾರ ಅನಂತ ಸುಬ್ಬಾರಾವ್ ಅವರು ದಿಗ್ವಿಜಯ ನ್ಯೂಸ್​ಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನೇರವಾಗಿ ಕೋಡಿಹಳ್ಳಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಮಾತಿನ ಸಾರ ಹೀಗಿದೆ-
ಅನಂತ ಸುಬ್ಬಾರಾವ್​ ಅವರದ್ದೇನು ಮೊನೊಪೊಲೀನಾ ಎಂದು ಪ್ರಶ್ನಿಸಿದ ಕೋಡಿಹಳ್ಳಿ ಚಂದ್ರಶೇಖರ್, ಪ್ರತಿಭಟನೆ ಮಾಡಲು ಹೊರಟ ನೌಕರರ ದಾರಿ ತಪ್ಪಿಸಿ ಅವರಿಂದ ದಿಢೀರ್ ಮುಷ್ಕರ ಮಾಡಿಸಿದ್ದಾರೆ. ಸಂಘಟನೆ ಕಟ್ಟಿ ಬೆಳೆಸೋದು ಸಾಮಾನ್ಯ ಸಂಗತಿಯಲ್ಲಿ. ಅನೇಕರ ಬಲಿದಾನ ಇದೆ ಈ ಸಂಘಟನೆಯ ಹಿಂದೆ. ಅವರು ಎಂದಾದರೂ ಕಾರ್ಮಿಕ ಸಂಘಟನೆಗಳನ್ನು ಮುನ್ನಡೆಸಿದ್ದಾರಾ? ಕಾರ್ಮಿಕ ಕಾನೂನುಗಳ ಬಗ್ಗೆ ಅವರಿಗೇನು ಗೊತ್ತು?
ಇದನ್ನೂ ಓದಿ:ಸಾರಿಗೆ ನೌಕರರ ಮುಷ್ಕರ, ನಿರ್ಣಾಯಕ ಹಂತಕ್ಕೆ ತಲುಪಿದ ಮಾತುಕತೆ
ಅಗತ್ಯ ಸೇವೆಗಳ ನೌಕರಿಯಲ್ಲಿರುವವರು ಮುಷ್ಕರ ಮಾಡಬೇಕಾದರೆ 22 ದಿನ ಮುಂಚಿತವಾಗಿ ಸರ್ಕಾರಕ್ಕೆ ನೋಟಿಸ್ ನೀಡಬೇಕು. ಇದೇ ರೀತಿ ಇತರೆ ಸೇವೆಗಳವರು 15 ದಿನ ಮುಂಚಿತವಾಗಿ ಸರ್ಕಾರಕ್ಕೆ ನೋಟಿಸ್ ನೀಡಬೇಕು. ಇದು ಯಾಕೆ ಅಂದರೆ, ಯಾರಿಗೂ ತೊಂದರೆಯಾಗದಂತೆ ನೌಕರರ ಬೇಡಿಕೆ ಆಲಿಸಿ ಮಾತುಕತೆ ನಡೆಸಿ ಬಿಕ್ಕಟ್ಟು ಇತ್ಯರ್ಥಗೊಳಿಸುವುದಕ್ಕೆ ಸರ್ಕಾರಕ್ಕೆ ನೀಡಲಾಗುತ್ತಿರುವ ಕಾಲಾವಕಾಶ ಇದು. ಇದನ್ನು ಈ ಮುಷ್ಕರದಲ್ಲಿ ಪಾಲಿಸಲಾಗಿಲ್ಲ.
ಇದನ್ನೂ ಓದಿ:ಸಾರಿಗೆ ನೌಕರರ ಮುಷ್ಕರ ಇಂದಿಗೆ ಅಂತ್ಯ? ಏನೆಂತಾರೆ ಸಾರಿಗೆ ಸಚಿವರು?
ಕೋಡಿಹಳ್ಳಿಯವರ ಹಿನ್ನೆಲೆ, ಅವರ ಗುರುಗಳ ಹಿನ್ನೆಲೆ ನೋಡಿ. ಅವರು ಎಲ್ಲರೂ ಖಾಸಗಿ ಪರ ಇದ್ದವರೇ ಹೊರತು, ಸಾರ್ವಜನಿಕ ಸಂಸ್ಥೆಗಳ ಪರ ಇದ್ದವರಲ್ಲ. ಖಾಸಗಿ ಲಾಬಿಯ ಪರ ಕೆಲಸ ಮಾಡುತ್ತಿರುವಂತೆ ಕಾಣುತ್ತದೆ. ಕೋಡಿಹಳ್ಳಿ ಇಂತಹ ಡೀಲ್ ಮಾಡುವ ಡೀಲರ್ ಕೆಲಸ ಬಿಟ್ಟು ಲೀಡರ್ ಆಗಿ ಕೆಲಸ ಮಾಡಲಿ. ಈ ಮುಷ್ಕರದ ಹಿಂದೆಯೂ ಅಂಥದ್ದೇನಾದರೂ ಅಜೆಂಡಾ ಇಟ್ಟುಕೊಂಡಿದ್ದರಾ ಎಂಬ ಸಂದೇಹವಿದೆ. ಅವರ ಒಣಪ್ರತಿಷ್ಠೆಗೆ ಮೊಂಡುತನಕ್ಕೆ ಸಾರಿಗೆ ನೌಕರರು ಬಲಿಯಾಗಬೇಕಾಗಿದೆ ಈಗ.
ಇದನ್ನೂ ಓದಿ:ಸಾರಿಗೆ ನೌಕರರ ‘ಸರ್ಕಾರಿ’ ಬೇಡಿಕೆಗೆ ತೊಡಕು
ನಿನ್ನೆಯೇ ಸರ್ಕಾರದ ಸುತ್ತೋಲೆ ಸೇರಿಸಿ ನಮ್ಮ ಸಂಘಟನೆಯ ಸದಸ್ಯರಿಗೆ ಇಂದು ಕೆಲಸ ಮಾಡುವಂತೆ ಸೂಚಿಸಲಾಗಿದೆ. ಅಕಸ್ಮಾತ್ ಅವರು ಅದನ್ನು ಧಿಕ್ಕರಿಸಿ ಕೋಡಿಹಳ್ಳಿ ಮಾತು ಕಟ್ಟಿಕೊಂಡು ಮುಷ್ಕರ ಮುಂದುವರಿಸಿದ್ರೆ ಸರ್ಕಾರ ಕೈಗೊಳ್ಳುವ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅನಂತ ಸುಬ್ಬಾರಾವ್ ತಿಳಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಜನಾಕ್ರೋಶಕ್ಕೆ ಬೆದರಿದ್ರು ಕೋಡಿಹಳ್ಳಿ – ಸಾರ್ವಜನಿಕ ಹಿತ ಮುಖ್ಯ ಎನ್ನುತ್ತ, ಮುಷ್ಕರ ಮಾಡುವ ನೌಕರರಿಗೆ ಆಸೆ, ನಿರಾಸೆ ಸಾಮಾನ್ಯ ಅಂದ್ರು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × two =
Remember me
