ಬೆಂಗಳೂರು:ʻಆದಿತ್ಯ ಬಿರ್ಲಾ ಎಜುಕೇಶನ್ ಟ್ರಸ್ಟ್‌ʼನ ಉಪಕ್ರಮವಾದ ʻಉಜಾಸ್ʼ, ಋತುಚಕ್ರ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ತನ್ನ ಧ್ಯೇಯದಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿದೆ.
ʻಉಜಾಸ್ʼ ಸ್ಥಾಪಕರಾದ ಶ್ರೀಮತಿ ಅದ್ವೈತ ಬಿರ್ಲಾ ಅವರ ದೃಷ್ಟಿಕೋನದಿಂದ ಮಾರ್ಗದರ್ಶನ ಪಡೆದ ಈ ಉಪಕ್ರಮವು ಕರ್ನಾಟಕ ರಾಜ್ಯದಲ್ಲಿ ಸಕಾರಾತ್ಮಕ ಬದಲಾವಣೆ ಮತ್ತು ಸಬಲೀಕರಣವನ್ನು ತರಲು ಸಜ್ಜಾಗಿದೆ. ಗೌರವಾನ್ವಿತ ಸ್ಥಳೀಯ ʻಎನ್‌ಜಿಒʼ ಪಾಲುದಾರ ಸಂಸ್ಥೆಯಾದ ʻಆಕ್ಷನ್ ಇನಿಶಿಯೇಟಿವ್ ಫಾರ್ ಡೆವಲಪ್ಮೆಂಟ್ʼ(ಎಐಡಿ) ಸಹಯೋಗದೊಂದಿಗೆ, ʻಉಜಾಸ್ʼ ತನ್ನ ಮೊದಲ ಹಂತದ ಕಾರ್ಯವನ್ನು ಪ್ರಾರಂಭಿಸಿದೆ. ಸ್ಥಳೀಯ ಶಾಲೆಗಳು, ಅನಾಥಾಶ್ರಮಗಳು ಮತ್ತು ಸರ್ಕಾರಿ ಕಾಲೇಜುಗಳು, ಬಾಲಕಿಯರ ಹಾಸ್ಟೆಲ್ ಮತ್ತು ಸ್ಥಳೀಯ ಸಮುದಾಯಗಳ ಮೂಲಕ ಹದಿಹರೆಯದ ಹುಡುಗಿಯರು ಮತ್ತು ಮಹಿಳೆಯರನ್ನು ಸಮಗ್ರವಾಗಿ ತಲುಪಲಿದೆ. ಈ ವ್ಯೂಹಾತ್ಮಕ ಸಹಭಾಗಿತ್ವವು ಒಂದು ವರ್ಷದ ಅಭಿಯಾನದ ಆರಂಭವನ್ನು ಸೂಚಿಸುತ್ತದೆ. ಇದು ಕರ್ನಾಟಕದಲ್ಲಿ ʻಎಐಡಿʼ ಮೂಲಕ ಸಮುದಾಯದೊಂದಿಗೆ ನಿಕಟವಾಗಿ ಕೆಲಸ ಮಾಡುವ ʻಉಜಾಸ್ʼನ ಅಚಲ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಒಟ್ಟಾರೆಯಾಗಿ, ಈ ಸಂಸ್ಥೆಗಳು ಸಕ್ರಿಯವಾಗಿ ಜಾಗೃತಿ ಮೂಡಿಸುವ, ಮೌಢ್ಯಗಳನ್ನು ತೊಡೆದುಹಾಕುವ ಹಾಗೂ ಈ ಪ್ರದೇಶದಾದ್ಯಂತ ಋತುಚಕ್ರ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಸಕಾರಾತ್ಮಕ ಚರ್ಚೆಗಳನ್ನು ಬೆಳೆಸುವ ಗುರಿಯನ್ನು ಹೊಂದಿವೆ. ಅಭಿಯಾನದ ಮೊದಲ ಹಂತದಲ್ಲಿ, ʻಉಜಾಸ್ʼ ತಂಡವು ಋತುಚಕ್ರ ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆಯ ಬಗ್ಗೆ ವಯಸ್ಸಿಗೆ ಅನುಗುಣವಾದ ಜಾಗೃತಿ ಶಿಬಿರಗಳನ್ನು ನಡೆಸಿತು ಮತ್ತು ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ವಿತರಿಸಿತು. ಉಜಾಸ್ ಋತುಚಕ್ರ ಆರೋಗ್ಯ ಎಕ್ಸ್‌ಪ್ರೆಸ್‌’ ಒಂದು ವಿಶಿಷ್ಟ ಉಪಕ್ರಮವಾಗಿದ್ದು, ಭಾರತದಲ್ಲಿ ಇಂತಹ ಮೊದಲ ಪ್ರಯತ್ನವಾಗಿದೆ. 25 ರಾಜ್ಯಗಳು ಮತ್ತು 107 ನಗರಗಳ ಮೂಲಕ ರಸ್ತೆ ಮಾರ್ಗವಾಗಿ 20,000 ಕಿಲೋಮೀಟರ್ ಪ್ರಯಾಣ ಗುರಿಯೊಂದಿಗೆಇದನ್ನು ವಿನ್ಯಾಸಗೊಳಿಸಲಾಗಿದೆ.
ಈ ಉಪಕ್ರಮದ ಬಗ್ಗೆ ಮಾತನಾಡಿದ ʻಉಜಾಸ್ʼ ಸಂಸ್ಥಾಪಕಿ ಶ್ರೀಮತಿ ಅದ್ವೈತ ಬಿರ್ಲಾ, ಅವರು “ಉಜಾಸ್ ಋತುಚಕ್ರ ಆರೋಗ್ಯ ಎಕ್ಸ್‌ಪ್ರೆಸ್‌ ಕೇವಲ ವ್ಯಾನ್ ಅಲ್ಲ, ಅದೊಂದು ಬದಲಾವಣೆಯ ಸಂಕೇತವಾಗಿದೆ. ಅಡೆತಡೆಗಳನ್ನು ನಿವಾರಿಸುವುದರ ಜೊತೆಗೆ ʻಋತುಚಕ್ರ ಆರೋಗ್ಯವನ್ನು ಒಂದು ನಿಷೇಧವಾಗಿ ಅಲ್ಲದೆ, ಒಂದು ಹಕ್ಕಾಗಿ ಹೊಂದಿರುವ ಸಮಾಜವನ್ನು ಬೆಳೆಸುತ್ತದೆ. ಕರ್ನಾಟಕ ರಾಜ್ಯದಲ್ಲಿ, ತರಬೇತಿ ಪಡೆದ ವೃತ್ತಿಪರರು ನೀಡಿದ ಮಾಹಿತಿಯುಕ್ತ, ವಯಸ್ಸಿಗೆ ಅನುಗುಣವಾದ ಜಾಗೃತಿ ಕಾರ್ಯಾಗಾರಗಳ ಮೂಲಕ ನಾವು ಶಾಲೆಗಳು, ಹಾಸ್ಟೆಲ್ ಗಳು, ಸರ್ಕಾರಿ ಕಾಲೇಜುಗಳು ಮತ್ತು ಸ್ಥಳೀಯ ಸಮುದಾಯಗಳನ್ನು ತಲುಪಿ, ಅಲ್ಲಿ ಋತುಚಕ್ರ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಿದ್ದೇವೆ ಎಂದರು.
ದರ್ಶನ್​​ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ವಿರುದ್ಧ ಫ್ಯಾನ್ಸ್​ ಗರಂ! ಹಳೆಯದ್ದನ್ನು ಕೆದಕಿದ ಅಭಿಮಾನಿಗಳು

ಕಪ್​ ಮಿಸ್​ ಆಗಿದ್ದಕ್ಕೂ ಬಳೆಗೂ ಸಂಬಂಧ ಇಲ್ಲ.. ಮಹಿಳೆಯರನ್ನು ದುರ್ಬಲರು ಎನ್ನುವ ಮುಟ್ಟಾಳ ನಾನಲ್ಲ ಎಂದ್ರು ವಿನಯ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
