ಬೆಂಗಳೂರು:ಬಿಇಎಂಎಲ್ ಉತ್ಪಾದಿಸಿರುವ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಅನಾವರಣಗೊಳಿಸಿದರು.
ಭಾರತದ ಮೊದಲ ವಂದೇ ಭಾರತ್ ಮಾದರಿಯ ಸ್ಲೀಪರ್ ರೈಲು ಎಂಬ ಹೆಗ್ಗಳಿಕೆ ಹೊಂದಿರುವ ರೈಲಿನ ಬೋಗಿಯನ್ನು ಸಚಿವರು ಖುದ್ದು ವೀಕ್ಷಣೆ ಮಾಡಿ,ರೈಲಿನ ವಿನ್ಯಾಸ ಮತ್ತು ಸೌಲಭ್ಯಗಳನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಅಶ್ವಿನಿ ವೈಷ್ಣವ್,ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳನ್ನು ಹಳಿಯ ಮೇಲೆ ಓಡಿಸುವ ಮುನ್ನ10ದಿನಗಳು ಪರೀಕ್ಷಾರ್ಥ ಸಂಚಾರ ನಡೆಸಲಾಗುವುದು.ಇನ್ನು ಮೂರು ತಿಂಗಳಲ್ಲಿ ಈ ರೈಲುಗಳು ಪ್ರಯಾಣಿಕರ ಬಳಕೆಗೆ ದೊರೆಯುವ ಸಾಧ್ಯತೆ ಇದೆ ಎಂದು ಹೇಳಿದರು.
ಜಗತ್ತಿನ ಅತ್ಯುತ್ತಮ ರೈಲುಗಳೊಂದಿಗೆ ಹೋಲಿಸಬಹುದಾದ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಸಣ್ಣ ಸಣ್ಣ ವಿಷಯಗಳಿಗೂ ಒತ್ತು ನೀಡಿ ಡಿಸೈನ್ ಮಾಡಲಾಗಿದೆ.ಲೊಕೊ ಪೈಲಟ್‌ಗಳು,ನಿರ್ವಹಣಾ ಸಿಬ್ಬಂದಿಗಳ ಅಗತ್ಯತೆಗಳಿಗೂ ಆದ್ಯತೆ ನೀಡಲಾಗಿದೆ.ಶೌಚಾಲಯವನ್ನು ವಿಶೇಷವಾಗಿ ಡಿಸೈನ್ ಮಾಡಲಾಗಿದೆ.
ಟಿಕೆಟ್ ದರ ಸಾಮಾನ್ಯ ಪ್ರಯಾಣಿಕರ ಕೈಗೆಟುಕುವಂತಿರಲಿದ್ದು,ಮಧ್ಯಮ ವರ್ಗದವರೂ ಕೂಡ ಪ್ರಯಾಣಿಸಬಹುದಾಗಿದೆ.ಸುರಕ್ಷತೆಗೆ ಹೆಚ್ಚಿನ ಗಮನ ನೀಡಿರುವುದು ಈ ರೈಲಿನ ವಿಶೇಷ.ಎಂದು ಅಶ್ವಿನಿ ವೈಷ್ಣವ್ ವಿವರಿಸಿದರು.
ರೈಲು ಅನಾವರಣದ ನಂತರ ನಡೆದ ಪರೀಕ್ಷಾರ್ಥ ಸಂಚಾರದಲ್ಲಿ ಅಶ್ವಿನಿ ವೈಷ್ಣವ್‌ರವರಿಗೆ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಸಾಥ್ ನೀಡಿದರು.ಈ ಸಂದರ್ಭದಲ್ಲಿ ರೈಲ್ವೇ ಮಂಡಳಿ ಅಧ್ಯಕ್ಷ ಸತೀಶ್ ಕುಮಾರ್,ಬಿಇಎಂಎಲ್ ಸಿಎಂಡಿ ಶಂತನು ರಾಯ್ ಹಾಗೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ವೇಳೆ ರೈಲ್ವೇ ತರಭೇತಿ ಸಂಸ್ಥೆಗೆ ಭೇಟಿ ನೀಡಿದ ಅಶ್ವಿನಿ ವೈಷ್ಣವ್ ಶಿಕ್ಷಣಾರ್ಥಿಗಳೊಂದಿಗೆ ಚರ್ಚೆ ನಡೆಸಿ ಅವರ ಬಹುದಿನಗಳ ಬೇಡಿಕೆಗಳನ್ನು ಪೂರೈಸಲು ಕ್ರಮಕೈಗೊಂಡರು.
ವಂದೇ ಭಾರತ್ ಸ್ಲೀಪರ್ ಕೋಚ್‌ನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮೊಬೈಲ್ ಹೋಲ್ಡರ್,ಪ್ರತ್ಯೇಕ ಚಾರ್ಜಿಂಗ್ ಪಾಯಿಂಟ್,ಸ್ನ್ಯಾಕ್ಸೃ್ ಟೇಬಲ್,ಅಪಘಾತ ನಿಯಂತ್ರಕ ಕವಚ,ಉಕ್ಕಿನಿಂದ ನಿರ್ಮಿಸಲಾದ ಕೋಚ್‌ಗಳು,ಜಿಎಫ್‌ಆರ್‌ಪಿ ಬಳಸಿ ನಿರ್ಮಿಸಿದ ಆಂತರಿಕ ಫಲಕ,ಅಗ್ನಿ ಅವಘಡ ನಿಯಂತ್ರಣಕ್ಕೆ ಪ್ರತ್ಯೆಕ ತಂತ್ರಜ್ಞಾನ,ಸ್ವಯಂ ಚಾಲಿತ ಬಾಗಿಲುಗಳನ್ನು ಅಳವಡಿಸಲಾಗಿದೆ.
ಗಂಟೆಗೆ160ಕಿ.ಮೀ.ವೇಗದಲ್ಲಿ ಚಲಿಸಲಿರುವ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಒಟ್ಟು16ಬೋಗಿಗಳಿದ್ದು, 823ಬರ್ತ್‌ಗಳಿವೆ.
ಪ್ರಥಮ ದರ್ಜೆ ಎಸಿ1ಬೋಗಿ,ದ್ವಿತೀಯ ದರ್ಜೆ ಎಸಿ4ಬೋಗಿ ಹಾಗೂ ತೃತೀಯ ದರ್ಜೆ ಎಸಿ11ಬೋಗಿಗಳು ಈ ರೈಲಿನಲ್ಲಿವೆ.
ವಂದೇ ಭಾರತ್ ಸ್ಲೀಪರ್ ಕೋಚ್‌ಗಳು ಬೆಂಗಳೂರಿನಲ್ಲಿರುವ ಬಿಇಎಂಎಲ್ ಉತ್ಪಾದನಾ ಘಟಕದಲ್ಲಿ ತಯಾರಾಗುತ್ತಿದ್ದು,ಇಂದು ಅನಾವರಣಗೊಂಡ ರೈಲು ಬೋಗಿ ಕೇವಲ9ತಿಂಗಳಲ್ಲಿ ತಯಾರಿಸುವ ಮೂಲಕ ಬಿಇಎಂಎಲ್ ಗಮನಾರ್ಹ ಸಾಧನೆ ಮಾಡಿದೆ.
ವಂದೇ ಭಾರತ್ ಸ್ಲೀಪರ್ ರೈಲು ಉತ್ಪಾದನೆ ಭಾರತದ ಸಾರಿಗೆ ಕ್ಷೇತ್ರದ ಮೈಲುಗಲ್ಲು.ಈ ಕಾರ್ಯವನ್ನು ಮಾಡಿರುವ ಬಿಇಎಂಎಲ್ ಈ ಮೂಲಕ ತನ್ನ6ದಶಕದ ಕಾರ್ಯಕ್ಷಮತೆಯನ್ನು ವಿಶ್ವಮಟ್ಟದಲ್ಲಿ ಸಾಭೀತು ಪಡಿಸಿದೆ.ನೂತನ ಮಾದರಿಯ ರೈಲು ಬೋಗಿ ಉತ್ಪಾದನೆಯಲ್ಲಿ ಬಿಇಎಂಎಲ್ ಗುಣಮಟ್ಟ ಮತ್ತು ನಿಖರತೆಗೆ ವಿಶೇಷ ಒತ್ತು ನೀಡಿದೆ.
–ಶಂತನು ರಾಯ್,ಬಿಇಎಂಎಲ್ ಸಿಎಂಡಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
