
ಇಂದು ದೇಶದ ಅತ್ಯಂತ ಹೆಚ್ಚು ದನ ಸಾಗಾಣಿಕೆ ಮತ್ತು ಕಡಿಯುವಿಕೆ ನಡೆಯುವಂತಹ ಜಾಗಗಳಲ್ಲಿ ಮೇವಾತ್ ಒಂದು. ದಿನಬೆಳಗಾದರೆ ಲೂಟಿ, ದರೋಡೆ, ಅಪಹರಣ, ಕೊಲೆಗಳ ಒಂದಾದರೂ ಪ್ರಕರಣ ಮೇವಾತ್​ನಲ್ಲಿ ನಡೆಯದೇ ಇರುವುದಿಲ್ಲ.
ನಿಖಿತಾ ತೋಮರ್ ಬಿ.ಕಾಂ ಮುಗಿಸಿ ಐಎಎಸ್ ಪರೀಕ್ಷೆಗೆ ಸಿದ್ಧವಾಗಬೇಕೆಂದು ಕನಸು ಕಟ್ಟಿದ್ದವಳು. ತನ್ನ ಪರೀಕ್ಷಾ ಫಲಿತಾಂಶವನ್ನು ಸ್ವೀಕರಿಸಿ ಮನೆಗೆ ಬರುವ ದಾರಿಯಲ್ಲಿ ತೌಸೀಫ್​ನ ಗುಂಡಿಗೆ ಬಲಿಯಾಗಿ ಹೆಣವಾಗಿಹೋದಳು. ತಾರುಣ್ಯದಲ್ಲಿದ್ದ ಈ ಮಗುವನ್ನು ಕಳೆದುಕೊಂಡ ತಂದೆ-ತಾಯಂದಿರ ರೋದನ ಮುಗಿಲುಮುಟ್ಟಿದೆ. ಅತ್ತ ತೌಸೀಫ್ ಪರವಾಗಿ ವಾದಿಸುತ್ತಿರುವ ಅಯೋಗ್ಯರೊಂದಷ್ಟು ಜನ ಇನ್ನು ಹೆಮ್ಮೆಯಿಂದ ತಿರುಗಾಡುತ್ತಿದ್ದಾರೆಂಬುದೇ ದುರಂತಕಾರಿ ಸಂಗತಿ. ಇಷ್ಟಕ್ಕೂ ತೌಸೀಫ್ ಹರಿಯಾಣದ ಮೇವಾತ್ ಪ್ರದೇಶಕ್ಕೆ ಸೇರಿದವನು. ಸಾಮಾನ್ಯ ಕುಟುಂಬದವನೇನಲ್ಲ. ತಾತ ಕಬೀರ್ ಅಹ್ಮದ್ ಕಾಂಗ್ರೆಸ್ಸಿನ ಪ್ರಖ್ಯಾತ ಶಾಸಕರು. ಚಿಕ್ಕಪ್ಪ ಖುರ್ಷೀದ್ ಅಹ್ಮದ್​ಖಾನ್ ಕೂಡ ಕಾಂಗ್ರೆಸ್ಸಿನ ಶಾಸಕರಾಗಿದ್ದವರೇ. ಆತ ಇಂದಿರಾ ಗಾಂಧಿಗೆ ಬಲು ಹತ್ತಿರದಲ್ಲಿ ಇದ್ದವನು ಎಂದು ಹೇಳಲಾಗುತ್ತದೆ. ಆತನ ಮಗ ಅಂದರೆ ತೌಸೀಫ್​ನ ಅಣ್ಣ ಈಗಿನ ಆ ಭಾಗದ ಕಾಂಗ್ರೆಸ್ ಶಾಸಕ. ಈತ ಸೋನಿಯಾ ಮತ್ತು ರಾಹುಲ್​ರಿಗೆ ಆಪ್ತನೆಂಬುದು ಅವನ ಸಾಮಾಜಿಕ ಜಾಲತಾಣಗಳನ್ನು ಗಮನಿಸಿದ ಎಂಥವನಿಗೂ ಅರಿವಾಗುತ್ತದೆ. ತೌಸೀಫ್​ನ ಮತ್ತೊಬ್ಬ ಚಿಕ್ಕಪ್ಪ ಜಾವೇದ್ ಅಹ್ಮದ್ ಬಹುಜನ ಸಮಾಜ ಪಾರ್ಟಿಯಿಂದ ಚುನಾವಣೆಗೆ ನಿಂತು ಸೋತವರು. ತೌಸೀಫನ ತಂಗಿ ಹರಿಯಾಣದ ಬಿಎಸ್​ಪಿ ನಾಯಕ ತಾರೀಕ್ ಹುಸೇನ್​ರಿಗೆ ಮದುವೆ ಮಾಡಿಕೊಡಲ್ಪಟ್ಟಿದ್ದಾಳೆ. ಇಷ್ಟನ್ನೂ ಏಕೆ ವಿವರಿಸಬೇಕಾಯ್ತೆಂದರೆ ಹತ್ರಾಸ್ ಘಟನೆ ನಡೆದೊಡನೆ ಪ್ರಿಯಾಂಕಾ, ರಾಹುಲ್ ಕೋವಿಡ್​ನ ಎಲ್ಲ ನಿಯಮಗಳನ್ನೂ ಮೀರಿ ಮುಗಿಬೀಳಲೆಂದು ಧಾವಿಸಿದರಲ್ಲ; ಇಡಿಯ ಪ್ರಕರಣವನ್ನು ಕೌಟುಂಬಿಕ ಜಗಳದಿಂದ ಅತ್ಯಾಚಾರವಾಗಿ ಪರಿವರ್ತಿಸುವ ದೊಡ್ಡ ಸಾಹಸ ನಡೆಸಿದರಲ್ಲ, ಇಲ್ಲಿ ಮಾತ್ರ ಅವರು ಯಾವ ಕದನಕ್ಕಿಳಿಯದೆ ಶಾಂತರಾಗಿಬಿಟ್ಟಿದ್ದಾರೆ. ಕಾರಣ ಎರಡು. ಮೊದಲನೆಯದ್ದು, ಕಾಂಗ್ರೆಸ್ಸಿನದ್ದೇ ಪರಿವಾರದ ಮಂದಿ ಈ ಘಟನೆಗೆ ಕಾರಣರು. ಮತ್ತೊಂದು, ಕೊಲೆಗಡುಕ ಕಾಂಗ್ರೆಸ್ಸಿನ ದೊಡ್ಡ ವೋಟ್​ಬ್ಯಾಂಕಿಗೆ ಸೇರಿದವ ಎಂಬುದು!
ಮೇವಾತ್ ಹರಿಯಾಣದ ಒಂದು ಭಾಗ. ಹತ್ತುಲಕ್ಷ ಜನಸಂಖ್ಯೆ ಇರುವ ಈ ಭಾಗದಲ್ಲಿ ಕನಿಷ್ಠಪಕ್ಷ ಅರ್ಧದಷ್ಟು ಜನಕ್ಕೆ ಓದಲು, ಬರೆಯಲು ಬರುವುದಿಲ್ಲವೆಂದು 2011ರ ಜನಗಣತಿ ಹೇಳಿದೆ. ನೀತಿ ಆಯೋಗವಂತೂ ಹಿಂದುಳಿದ ಮೇವಾತನ್ನು ಬದಲಾಯಿಸಲು ಯೋಜನೆಗಳನ್ನೇ ರೂಪಿಸಿಕೊಂಡು ಕುಳಿತಿದೆ. ಏಕೆಂದರೆ ಬರಿಯ ಮೇವಾತ್ ಒಂದರಲ್ಲೇ ಕನಿಷ್ಠಪಕ್ಷ ನೂರು ಕ್ರಿಮಿನಲ್ ಗ್ಯಾಂಗುಗಳು ಈಗಲೂ ಕ್ರಿಯಾಶೀಲವಾಗಿವೆ. ಲೂಟಿ, ಅಪಹರಣ, ಮಾನಭಂಗ, ಕೊಲೆ ಪ್ರಕರಣಗಳು ಇಲ್ಲಿ ಸಾಮಾನ್ಯ. ಫ್ರಾನ್ಸಿನಲ್ಲಿ ಹತ್ಯೆಯಾದಾಗ ನಾವೆಲ್ಲ ಇಲ್ಲಿ ಕೂಗಾಡಿದೆವಲ್ಲ, ಮೇವಾತಿನ ಮುಸಲ್ಮಾನರು ಪ್ರತಿನಿತ್ಯ ಆ ಭಾಗದ ಹಿಂದೂಗಳನ್ನು ಬದುಕಲು ಸಾಧ್ಯವೇ ಇಲ್ಲವೆಂಬಂತೆ ನಡೆಸಿಕೊಳ್ಳುತ್ತಾರೆ. ನಮ್ಮ ಕಿವಿಗೂ ಅದು ಬೀಳುವುದಿಲ್ಲ. ತನ್ನ ಒಬ್ಬ ಪ್ರಜೆಯ ಕೊಲೆಗೆ ಕಾರಣವಾದ ಮಸೀದಿಯನ್ನೇ ಫ್ರಾನ್ಸ್ ಮುಚ್ಚಿಹಾಕಿತು. ಆಡಳಿತ ಪಕ್ಷ ತೆಗೆದುಕೊಂಡ ನಿರ್ಣಯಕ್ಕೆ ಪ್ರತಿಪಕ್ಷದ ನಾಯಕರು ಮುಲಾಜಿಲ್ಲದೆ ಬೆಂಬಲ ಕೊಟ್ಟು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮುಸಲ್ಮಾನರನ್ನು ಯಾವ ಕಾರಣಕ್ಕೂ ಬಿಡಬೇಡಿ ಎಂಬ ಆಗ್ರಹವನ್ನು ಮಾಡಿದರು.
ನಮ್ಮಲ್ಲಿ ಮಾತ್ರ ಇದಕ್ಕೆ ವ್ಯತಿರಿಕ್ತ ಸ್ಥಿತಿ. ಸ್ವಲ್ಪ ಆಶಾಕಿರಣ ಬಹುಶಃ ಯೋಗಿ ಆದಿತ್ಯನಾಥರೊಬ್ಬರೇ. ಇತ್ತೀಚೆಗೆ ತಮ್ಮ ಭಾಷಣವೊಂದರಲ್ಲಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ, ಹೆಸರು ಬದಲಾಯಿಸಿ ಹಿಂದೂವಂತೆ ನಟಿಸಿ, ಹಿಂದೂ ಹೆಣ್ಣುಮಕ್ಕಳೊಂದಿಗೆ ಲವ್​ಜಿಹಾದ್ ಪ್ರಯೋಗ ಮಾಡಿದರೆ ಎಚ್ಚರ ಎಂದಿದ್ದಾರೆ! ಸಹಿಸಿಕೊಳ್ಳುವುದಕ್ಕೂ ಮಿತಿಯೊಂದಿದೆ. ದಡ್ಡರು, ಅಯೋಗ್ಯರು, ಪಂಚರ್ ಅಂಗಡಿಯವರು, ತಿಳಿಯದವರು, ಅಜ್ಞಾನಿಗಳು, ಇವೆಲ್ಲವೂ ನಿಜವೇ ಆದರೆ, ಇದರೊಟ್ಟಿಗೆ ದುಷ್ಟರೂ, ಕ್ರೂರಿಗಳು, ಕೊಲೆಗಡುಕರು, ಸಮಾಜ ಜೀವನಕ್ಕೆ ಯೋಗ್ಯರಲ್ಲದವರೂ ಆಗಿದ್ದಾರಲ್ಲ, ಅದನ್ನು ಸರಿಪಡಿಸುವವರೆಗೆ ನಮ್ಮವರ ಅದೆಷ್ಟು ಬಲಿದಾನಗಳಾಗಬೇಕು ಹೇಳಿ?
ಗಾಂಧೀಜಿಯ ವಾಕ್ಯ ಅರ್ಥವಾಗಲಿಲ್ಲವೆಂದರೆ, ಭಗತ್ ಸಿಂಗ್ ಮಾತುಗಳ ಪ್ರಯೋಗವಾಗಲೇಬೇಕು. ಅದೊಂದೇ ಸರಳವಾದ ಸಿದ್ಧಾಂತ ಇವರಿಗೆ. ಮೇವಾತ್ ಗುರುಗ್ರಾಮದಿಂದ 60 ಕಿ.ಮೀ. ದೂರದಲ್ಲಿದೆ ಅಷ್ಟೇ. ಇದರ ಸುಮಾರು 80 ಪ್ರತಿಶತ ಜನ ಮುಸಲ್ಮಾನರೇ ಇದ್ದಾರೆ. ಮಿಯೋಸ್ ಎಂದು ಕರೆಯಲ್ಪಡುವ ಈ ಜನಾಂಗವನ್ನು ಮೇವಾತಿಗಳೂ ಎಂದೂ ಕರೆಯುತ್ತಾರೆ. ಇವರ ಜಾನಪದ ಕಥೆಗಳ ಪ್ರಕಾರ ದರಿಯಾ ಖಾನ್ ಎಂಬ ಇವರ ನಾಯಕ ಶಶಿಬದಾನಿ ಮೀನಾ ಎಂಬ ಹಿಂದೂ ಹೆಣ್ಣುಮಗಳನ್ನು ಮತಾಂತರಿಸಿ ಮದುವೆಯಾದ. ಮೀನಾ ಜನಾಂಗದವರು ಈ ಮದುವೆಯನ್ನು ವಿರೋಧಿಸಿ ದರಿಯಾ ಖಾನ್​ನೊಂದಿಗೆ ಕಾದಾಡಿದರು. ದುರಂತಪೂರ್ಣವಾದ ಸೋಲಾಯ್ತು. ಆನಂತರ ಈ ಜನಾಂಗವನ್ನು ತಡೆಯದವರೇ ಇಲ್ಲದಾಯ್ತು. ದೇಶ ವಿಭಜನೆಗೂ ಮುನ್ನ ಈ ಮೇವಾತಿ ಮುಸಲ್ಮಾನರು ತಮ್ಮ ಲೂಟಿ, ಕೊಲೆ ಇವುಗಳಿಗೆ ಸಾಕಷ್ಟು ಹೆಸರುವಾಸಿಯಾಗಿದ್ದರು. ಸ್ವತಃ ಬ್ರಿಟಿಷರು ಈ ಮುಸ್ಲಿಂ ಬುಡಕಟ್ಟನ್ನು ಕ್ರಿಮಿನಲ್ ಬುಡಕಟ್ಟು ಎಂದು 1871ರಲ್ಲೇ ಗುರುತಿಸಿಬಿಟ್ಟಿದ್ದರು. ಈಗ ಇವರ ಆಟಾಟೋಪ ಇನ್ನೂ ತೀವ್ರವಾಗಿತ್ತು. 1947ರಲ್ಲಿ ಆಳ್ವಾರ್​ನ ಮಹಾರಾಜ ಮೇವಾತ್ ಅನ್ನು ಆಳುತ್ತಿದ್ದ. ಆತ ಸರ್ದಾರ್ ಪಟೇಲರ ಮಾತಿಗೆ ಬದ್ಧನಾಗಿ ಭಾರತದೊಂದಿಗೆ ವಿಲೀನವಾಗಲು ಸಿದ್ಧನಾದ. ಅಂದು ಈ ಭಾಗದ ಮುಸಲ್ಮಾನರು ಸ್ವತಂತ್ರ ಮಿಯೋಸ್ತಾನ್ ನಿರ್ವಿುಸಿಕೊಂಡು ಪಾಕಿಸ್ತಾನದೊಂದಿಗೆ ಅದನ್ನು ಜೋಡಿಸಬೇಕೆಂದು ನಿಶ್ಚಯಿಸಿದರು. ಅದಕ್ಕೆ ಪೂರಕವಾಗಿ ತಂಡಗಳನ್ನು ಕಟ್ಟಿಕೊಂಡು ಹಿಂದೂ ದೇವಾಲಯಗಳನ್ನು, ಮನೆಗಳನ್ನು ಲೂಟಿ ಮಾಡಲಾರಂಭಿಸಿದರು. 1947ರ ಆಗಸ್ಟ್ ಮೊದಲ ವಾರದಲ್ಲಿ ಹಿಂದೂಗಳ ನಗರವಾಗಿದ್ದ ತಿಜಾರ ಲೂಟಿ ಮಾಡಿದರು. ಅಲ್ಲದೆ, ಆಳ್ವಾರ್​ನ ಗಡಿಭಾಗದಲ್ಲಿ ನಿಂತು ಆಗಾಗ ರಾಜ್ಯದ ಮೇಲೆ ದಾಳಿಗೈಯ್ಯುತ್ತಿದ್ದರು. ಅದಕ್ಕೆ ಪ್ರತಿಯಾಗಿ ಹಿಂದೂಗಳು ಸೂಕ್ತವಾಗಿ ಪ್ರತಿದಾಳಿ ಮಾಡಲಾರಂಭಿಸಿದಾಗ ಈ ಮುಸಲ್ಮಾನರಿಗೆ ಬದುಕು ಅಸಹನೀಯವಾಗಿತ್ತು. ಬಹುತೇಕರು ರಾಜ್ಯವನ್ನು ಬಿಟ್ಟು ಪಾಕಿಸ್ತಾನಕ್ಕೆ ಓಡಿಹೋದರು. ಮುಸಲ್ಮಾನರು ಹಿಂದೂಗಳ ಮೇಲೆ ಆಕ್ರಮಣ ಮಾಡುವಾಗ ಬಾಯ್ಮುಚ್ಚಿಕೊಂಡಿದ್ದ ಕಾಂಗ್ರೆಸ್ಸು ಈಗ ಬಾಲ ಬಿಚ್ಚಿತಲ್ಲದೆ ಆಳ್ವಾರಿನ ರಾಜನಿಗೆ ಎಚ್ಚರಿಕೆ ಕೊಟ್ಟು ಮುಸಲ್ಮಾನರನ್ನು ರಕ್ಷಿಸುವಂತೆ ಕೇಳಿಕೊಂಡಿತು. ಈ ಹೊತ್ತಿನಲ್ಲಿ ಗಾಂಧೀಜಿ ಮೇವಾತಿನ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗುವುದನ್ನು ಆಕ್ರೋಶದಿಂದ ಕಂಡರಲ್ಲದೆ ಅವರನ್ನು ಮರಳುವಂತೆ ಮಾಡಬೇಕೆಂದು ಆಗ್ರಹಿಸಿದರೂ ಕೂಡ! ಅವರ ಕ್ರಿಮಿನಲ್ ಬುದ್ಧಿಯನ್ನು ರಾಜ ವಿವರಿಸಿದಾಗ ಎಂದಿನಂತೆ ಗಾಂಧೀಜಿ ‘ಅವರ ಮನಸ್ಸಿನ ಪರಿವರ್ತನೆಗೆ ನಾವು ಶ್ರಮಿಸಬೇಕು’ ಎಂದರು. ಗಾಂಧೀಜಿ ಬಲು ಎತ್ತರದಲ್ಲಿ ನಿಂತು ಹಾಗೆ ಹೇಳಿದ್ದರೇನೋ ನಿಜ, ಆದರೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಆ ದುಷ್ಟರ ಮನಸ್ಸಿನ ಪರಿವರ್ತನೆಯಾಗಲಿಲ್ಲ. ಬದಲಿಗೆ, ಈ ಅಯೋಗ್ಯರ ಕಾಮದಾಹಕ್ಕೆ ಹತ್ತಾರು ಹೆಣ್ಣುಮಕ್ಕಳು ಬಲಿಯಾಗಿಹೋದರು!
ನೆಹರು ಆಪ್ತರಾಗಿದ್ದ ಗೋಪಾಲಸ್ವಾಮಿ ಅಯ್ಯಂಗಾರ್ ಮೇವಾತಿ ಮುಸಲ್ಮಾನರನ್ನು ಪಾಕಿಸ್ತಾನದಿಂದ ಮರಳಿ ಕರೆಸುವಂತೆ ರಾಜನಿಗೆ ಆಗ್ರಹಿಸಿದರು. ರಾಜನ ಪರವಾಗಿ ಮಾತುಕತೆಗೆ ಕುಳಿತಿದ್ದ ಅಧಿಕಾರಿ-‘ನಿಸ್ಸಂಶಯವಾಗಿ ಅವರ ಸ್ವೀಕಾರಕ್ಕೆ ನಾವು ಸಿದ್ಧರಿದ್ದೇವೆ. ಆದರೆ ಆ ಮಂದಿ ನೆಲದ ಕಾನೂನನ್ನು ಮುರಿದಿರುವುದರಿಂದ ಸೂಕ್ತ ಶಿಕ್ಷೆ ಪಡೆಯಲೇಬೇಕು’ ಎಂದಿದ್ದರು. ಕಾಂಗ್ರೆಸ್ಸಿಗೆ ಇದು ಇಷ್ಟವಾಗಲಿಲ್ಲ. ಕಾನೂನು ಮುರಿದು ಹೋಗಿದ್ದರೂ ಅವರನ್ನು ಯಾವ ಷರತ್ತುಗಳಿಲ್ಲದೆ ಸ್ವೀಕರಿಸಬೇಕೆಂಬ ಆಗ್ರಹ ಮಾಡಿತಲ್ಲದೆ, ಅಗತ್ಯಬಿದ್ದರೆ ಸೇನೆಯನ್ನು ಬಳಸಿಯಾದರೂ ಅವರನ್ನು ಆಳ್ವಾರಿನಲ್ಲಿ ನೆಲೆಗೊಳಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಕೊಟ್ಟರು. ಗಾಂಧೀಜಿಯವರಂತೂ ಮೇವಾತಿ ಮುಸಲ್ಮಾನರು ಭಾರತದ ಬೆನ್ನೆಲುಬು ಎಂದೂ ಹೇಳಿಬಿಟ್ಟರು. ಅದೇ ಭಾರತದ ಬೆನ್ನೆಲುಬು ಇಂದು ‘ಮಿನಿ ಪಾಕಿಸ್ತಾನ’ವೆಂದು ಕರೆಯಲ್ಪಡುವ ಮೇವಾತ್ ಅನ್ನು ಸೃಷ್ಟಿ ಮಾಡಿದೆ! ಇಂದು ದೇಶದ ಅತ್ಯಂತ ಹೆಚ್ಚು ದನ ಸಾಗಾಣಿಕೆ ಮತ್ತು ಕಡಿಯುವಿಕೆ ನಡೆಯುವಂತಹ ಜಾಗಗಳಲ್ಲಿ ಮೇವಾತ್ ಒಂದು. ದಿನಬೆಳಗಾದರೆ ಲೂಟಿ, ದರೋಡೆ, ಅಪಹರಣ, ಕೊಲೆಗಳ ಒಂದಾದರೂ ಪ್ರಕರಣ ಮೇವಾತ್​ನಲ್ಲಿ ನಡೆಯದೇ ಇರುವುದಿಲ್ಲ. ಕಳೆದ ಸೆಪ್ಟೆಂಬರ್​ನಲ್ಲಿ ಬೆಳಗ್ಗೆ ಐದು ಗಂಟೆಗೆ ಜಲಬಾಧೆ ತೀರಿಸಿಕೊಳ್ಳಲೆಂದು ಮನೆಯಿಂದ ಹೊರಗೆ ಹೋಗಿದ್ದ 15 ವರ್ಷದ ಹುಡುಗಿಯನ್ನು ಇಸ್ಮಾಯಿಲ್ ಪಕ್ಕದ ಗದ್ದೆಗೆ ಎಳಕೊಂಡು ಹೋಗಿದ್ದ. ಕಬ್ಬಿನ ಜಲ್ಲೆಯಿಂದ ಕೊಸರಾಡುತ್ತಿದ್ದ ಆಕೆಯನ್ನು ಥಳಿಸಿ ಮಾನಭಂಗ ಮಾಡಿದ. ಸ್ವಲ್ಪ ಹೊತ್ತಿನಲ್ಲೇ ತನ್ನ ಮಿತ್ರ ಸಾಹಿರ್​ನನ್ನು ಕರೆಸಿಕೊಂಡ. ಆತನೂ ಮಾನಭಂಗ ಮಾಡಿದನಲ್ಲದೆ ಮತ್ತೊಬ್ಬ ಮಿತ್ರ ಇರ್ಷಾದ್​ನನ್ನು ಕರೆಸಿಕೊಂಡು ಆತನೂ ಹುಡುಗಿಯ ಮೇಲೆ ಮುಗಿಬಿದ್ದ. ಇನ್ನೂ 20 ದಾಟದ ಈ ಪೋರರ ರಾಕ್ಷಸೀ ಕೃತ್ಯದಿಂದ ಗಾಬರಿಗೊಂಡ ಆ ಹೆಣ್ಣುಮಗಳು ಪದೇಪದೆ ಕಾಲಿಗೆ ಬಿದ್ದು ಘಟನೆಯನ್ನು ಯಾರಿಗೂ ಹೇಳುವುದಿಲ್ಲ ಎನ್ನುತ್ತ ಕೊಸರಾಡಿಕೊಂಡು ತಪ್ಪಿಸಿಕೊಂಡು ಮನೆಗೆ ಬಂದು ಎಲ್ಲ ವೃತ್ತಾಂತವನ್ನು ಅರುಹಿದಳು. ಮೂರು ಗಂಟೆಗಳ ಕಾಲ ಆ ಹೆಣ್ಣುಮಗಳ ಮೇಲೆ ನಡೆದ ಈ ಅತ್ಯಾಚಾರದ ವಿವರಗಳು ಭಯಾನಕವಾಗಿವೆ. ಅದೇ ಹೊತ್ತಿನಲ್ಲಿ 17 ವರ್ಷದ ಮತ್ತೊಬ್ಬ ಹುಡುಗಿಯನ್ನು ಇನ್ನೊಂದು ಹಳ್ಳಿಯಲ್ಲಿ ಇದೇ ರೀತಿ ಅಪಹರಿಸಿ ಅತ್ಯಾಚಾರಗೈದಿದ್ದರು. ಕಳೆದ ವರ್ಷ ಆಗಸ್ಟ್​ನಲ್ಲಿ 15 ವರ್ಷದ ಹುಡುಗಿಯೊಬ್ಬಳನ್ನು ಇದೇ ನೂಹ್ ಜಿಲ್ಲೆಯ ಪುನ್ಹಾನಾ ಎಂಬ ಹಳ್ಳಿಯಲ್ಲಿ ಎಳಕೊಂಡು ಹೋಗಿ ರೇಪ್ ಮಾಡಿದ್ದರು. ದುರಂತವೇನು ಗೊತ್ತೇ? ಅವರಿಂದ ಕೊಸರಿಕೊಂಡು ತಪ್ಪಿಸಿಕೊಂಡು ಬಂದ ಆ ಹುಡುಗಿಗೆ ಕಾರ್​ನಲ್ಲಿ ಲಿಫ್ಟ್ ಕೊಡುವ ನೆಪದಲ್ಲಿ ಕರಕೊಂಡು ಹೋದ ಮತ್ತಿಬ್ಬರು ಮತ್ತೆ ರೇಪ್ ಮಾಡಿದರು. ಆಕೆಯ ಪರಿಸ್ಥಿತಿ ಎಂಥದ್ದೆಂದು ಊಹಿಸುವುದೂ ಕಷ್ಟ.
2018ರ ಮೇ ತಿಂಗಳಲ್ಲಿ 16 ವರ್ಷದ ಹುಡುಗಿಯೊಬ್ಬಳು ತನ್ನ ದ್ವಿತೀಯ ಪಿಯುಸಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಆತ್ಮಹತ್ಯೆಗೆ ಶರಣಾಗಿಬಿಟ್ಟಳು. ಏಕೆ ಗೊತ್ತೇ? ಮನೆಯವರೆಲ್ಲರೂ ಸಂಬಂಧಿಗಳ ಮನೆಗೆ ಹೋಗಿದ್ದಾಗ ಒಬ್ಬಳೇ ಇರುವ ಈ ಹೆಣ್ಣುಮಗಳ ಮೇಲೆ ಎರಡು ಬೈಕ್​ಗಳಲ್ಲಿ ಬಂದ ಎಂಟು ಅಯೋಗ್ಯ ತರುಣರು ಸಾಮೂಹಿಕ ಅತ್ಯಾಚಾರ ಮಾಡಿ ಮನೆಯಿಂದ ಹೊರಗೆಸೆದು ಹೋಗಿದ್ದರು. ಈ ಎಂಟೂ ಜನ ಪ್ರಭಾವಿ ಕುಟುಂಬಕ್ಕೆ ಸೇರಿದ್ದು ಅವರನ್ನು ಬಂಧಿಸುವಲ್ಲಿ ಇಲಾಖೆ ಸೋತುಹೋಯ್ತು! ಘಟನೆಗಳು ಒಂದಕ್ಕಿಂತ ಒಂದು ಭಯಾನಕ. ಅಮ್ಮನೊಂದಿಗೆ ಕಿತ್ತಾಡಿಕೊಂಡು ಮನೆಬಿಟ್ಟು ಹೋದ ಹುಡುಗಿಯೊಬ್ಬಳಿಗೆ ರೈಲ್ವೇಸ್ಟೇಷನ್ನಿನಲ್ಲಿ ಸಿಕ್ಕ ಮುಸ್ಲಿಂ ಹೆಂಗಸು ತನ್ನೂರಿಗೆ ಕರಕೊಂಡು ಹೋದಳಂತೆ. ಅಲ್ಲಿ ಈ ಹೆಣ್ಣುಮಗಳನ್ನು ಮತಾಂತರಿಸಿ, ಅವಳಿಗೆ ದನದ ಮಾಂಸ ತಿನ್ನಿಸಿದ್ದಲ್ಲದೆ ನಮಾಜ್ ಮಾಡುವ ಒತ್ತಡವನ್ನೂ ಹೇರಿ ಕೊನೆಗೆ 70 ವರ್ಷದ ಅಸ್ಲಂ ಎಂಬ ವ್ಯಕ್ತಿಗೆ 40 ಸಾವಿರ ರೂಪಾಯಿಗೆ ಮಾರಿಬಿಟ್ಟಳಂತೆ. ಆ ಹೆಣ್ಣುಮಗಳು ತಪ್ಪಿಸಿಕೊಂಡು ಬಂದು ಈ ಕಥೆ ಹೇಳಿದಾಗ ಇಡಿಯ ಹರಿಯಾಣ ಗಾಬರಿಗೊಂಡಿತ್ತು!
ಹಾಗಂತ ಈ ಅಯೋಗ್ಯರಿಗೆ ಹೆಣ್ಣುಮಕ್ಕಳೇ ಆಗಬೇಕೆಂದಿಲ್ಲ. ಹೆಚ್ಚು-ಕಡಿಮೆ ವರ್ಷಕ್ಕೆ ನಾಲ್ಕಾರು ಪ್ರಕರಣಗಳಾದರೂ ಕುರಿಯೊಂದಿಗೆ, ದನಗಳೊಂದಿಗೆ ಸಂಭೋಗ ನಡೆಸಿದ್ದು ವರದಿಯಾಗುತ್ತಲೇ ಇರುತ್ತವೆ. 2018ರಲ್ಲಿ ಜಫಾರ್ ಖಾನ್, ಸೌಕಾರ್ ಖಾನ್ ಎಂಬಿಬ್ಬರು ಇತರ ಆರು ಜನರೊಂದಿಗೆ ಸೇರಿ ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರ ಮಾಡಿ ಸುದ್ದಿಯಾಗಿದ್ದರು. ಮೇವಾತ್ ತನ್ನ ಶಾಲೆಗಳಲ್ಲಿ ಮಕ್ಕಳಿಗೆ ನಮಾಜ್​ನ ಹೇರಿಕೆ ಮಾಡುವುದಕ್ಕೂ ಸುದ್ದಿಯಾಗಿತ್ತು. ಒಟ್ಟಾರೆ ಹಿಂದೂಗಳು ಬದುಕಲು ಹೆದರಿ ರಾಜ್ಯವನ್ನೇ ಬಿಟ್ಟು ಓಡಿಹೋಗಬೇಕೆನ್ನುವುದು ಅವರ ಉದ್ದೇಶವೆನಿಸುತ್ತದೆ. ಆ ಮೂಲಕ ಅಂದು ಪಾಕಿಸ್ತಾನಕ್ಕೆ ಸೇರುವ ಕನಸನ್ನು ಇಂದು ನನಸು ಮಾಡಿಕೊಳ್ಳುವ ಪ್ರಯತ್ನ ಅವರದ್ದು. ಕಾಂಗ್ರೆಸ್ಸು ಈ ಕನಸನ್ನು ನನಸುಗೊಳಿಸುವಲ್ಲಿ ಬಲುದೊಡ್ಡ ಕೊಡುಗೆಯನ್ನು ಕೊಡುತ್ತಿದೆ. 20 ಪ್ರತಿಶತ ಇರುವಾಗ ಬಹಳ ಒಳ್ಳೆಯವರಂತೆ ಕಾಣುವ ಈ ಜನಾಂಗದವರು 80 ಪ್ರತಿಶತವಾಗುವ ವೇಳೆಗೆ ಮನುಕುಲಕ್ಕೇ ಕಂಟಕವಾಗಿಬಿಡುತ್ತಾರೆ. ಹೇಗೇ ಇರಲಿ, ನಮ್ಮ ಹೆಣ್ಣುಮಕ್ಕಳನ್ನು ನಾವು ಚೆನ್ನಾಗಿ ಕಾಪಾಡಿಕೊಂಡರೆ ಸಾಕಷ್ಟೇ!
(ಲೇಖಕರು ಖ್ಯಾತ ವಾಗ್ಮಿ ಮತ್ತು ಚಿಂತಕರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 2 =
Remember me
