ಕೇಂದ್ರದ ಸಾಂಖ್ಯಿಕ ಮತ್ತು ಯೋಜನಾ ಜಾರಿ ಸಚಿವಾಲಯವು ಮಂಗಳವಾರ, 2021-22ನೇ ಸಾಲಿನ ಒಟ್ಟು ದೇಶಿಯ ಉತ್ಪನ್ನ(ಜಿಡಿಪಿ)ದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ದೇಶವು ಈ ಹಣಕಾಸು ಸಾಲಿನಲ್ಲಿ ಶೇ.8.7 ಜಿಡಿಪಿಯನ್ನು ದಾಖಲಿಸಿದೆ. ಹಿಂದಿನ ಸಲಕ್ಕೆ ಹೋಲಿಸಿದರೆ ಈ ಕೊನೆಯ ತ್ರೖೆಮಾಸಿಕದಲ್ಲಿ ಜಿಡಿಪಿ ಪ್ರಮಾಣ ಕಡಿಮೆಯಾಗಿದೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ಸಮಸ್ಯೆ ಆಗಿರುವುದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಹೆಚ್ಚಳ ಹಾಗೂ ಕೈಗಾರಿಕೆಗಳಿಗೆ ಬೇಕಾಗುವ ಕಚ್ಚಾವಸ್ತುಗಳ ದರ ಏರಿಕೆ ಮುಂತಾದ ಕಾರಣದಿಂದ ಹೀಗಾಗಿದೆ ಎಂದು ತಜ್ಞರು ವಿವರಿಸಿದ್ದಾರೆ. ಆದರೂ ಒಟ್ಟಾರೆಯಾಗಿ ಈ ವಿತ್ತ ವರ್ಷದಲ್ಲಿ ಕಳೆದ ಸಾಲಿಗಿಂತ ಹೆಚ್ಚಿನ ಪ್ರಮಾಣದ ಜಿಡಿಪಿ ಗೋಚರಿಸಿರುವುದು ಸ್ವಲ್ಪ ಸಮಾಧಾನಕರ. ಕರೊನಾ ಕಾರಣದಿಂದಾಗಿ 2020-21ನೇ ಸಾಲಿನಲ್ಲಿ -6.6% ಜಿಡಿಪಿ ದಾಖಲಾಗುವ ಮೂಲಕ ದಿಗಿಲುಗೊಳಿಸಿತ್ತು. ದೇಶದ ಜಿಡಿಪಿ ಹೀಗೆ ಋಣಾತ್ಮಕ ಪ್ರವೃತ್ತಿ ದಾಖಲಿಸಿದ್ದು ಕಳೆದ 40 ವರ್ಷಗಳಲ್ಲಿ ಮೊದಲ ಸಲವಾಗಿತ್ತು. ಕರೊನಾ ಸಾಂಕ್ರಾಮಿಕವು ಬಹುತೇಕ ಎಲ್ಲ ವಲಯಗಳನ್ನು ಬಾಧಿಸಿದ್ದರಿಂದಾಗಿ ಮತ್ತು ಕರೊನಾ ನಿಯಂತ್ರಣಕ್ಕಾಗಿ ಲಾಕ್​ಡೌನ್ ವಿಧಿಸಿದ್ದರಿಂದಾಗಿ ಭಾರತ ಎಂದಲ್ಲ, ಅಮೆರಿಕ, ಫ್ರಾನ್ಸ್, ಬ್ರಿಟನ್ ಹೀಗೆ ಅಭಿವೃದ್ಧಿ ಹೊಂದಿದ ದೇಶಗಳೂ ಸೇರಿದಂತೆ ಬಹುತೇಕ ಎಲ್ಲ ದೇಶಗಳ ಹಣಕಾಸಿನ ಸ್ಥಿತಿಯೂ ಇದೇ ಆಗಿತ್ತು; ಚೀನಾ ಮಾತ್ರ ಈ ಮಾತಿಗೆ ಅಪವಾದವಾಗಿತ್ತು. ಈಗ ಭಾರತದ ಜಿಡಿಪಿ ಸ್ವಲ್ಪ ಹೆಚ್ಚಿದೆ ಎಂದು ನಿರಾಳರಾಗಿ ಕೂಡ್ರುವ ಸನ್ನಿವೇಶ ಇಲ್ಲ ಎಂಬುದನ್ನು ಮರೆಯಬಾರದು.
ಹಾಗೆ ನೋಡಿದರೆ ಸಾಂಖ್ಯಿಕ ಮತ್ತು ಯೋಜನಾ ಜಾರಿ ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಿಸಿದ್ದಕ್ಕಿಂತ ಕಡಿಮೆ ಪ್ರಮಾಣದ ಜಿಡಿಪಿ ಕಂಡುಬಂದಿದೆ. ಹೀಗಿದ್ದರೂ, ಕರೊನಾ ಕಾಲಘಟ್ಟದ ಸಂಕಷ್ಟಗಳನ್ನು ಮೀರಿ ಆರ್ಥಿಕತೆ ಚೇತರಿಕೆಯತ್ತ ಸಾಗಿರುವುದು ಗಮನಾರ್ಹ. ಮೂರು ತಿಂಗಳಿಂದ ಜಾರಿಯಲ್ಲಿರುವ ರಷ್ಯಾ-ಯೂಕ್ರೇನ್ ಸಮರ ಸಹ ಜಾಗತಿಕ ಹಣಕಾಸು ವ್ಯವಸ್ಥೆ ಮೇಲೆ ಬೇರೆ ಬೇರೆ ರೀತಿಗಳಲ್ಲಿ ಪ್ರತಿಕೂಲ ಪರಿಣಾಮ ಬೀರಿದ್ದು, ಭಾರತವೂ ಇದರಿಂದ ಹೊರತಾಗಿಲ್ಲ. ಈ ಸನ್ನಿವೇಶವನ್ನು ಭಾರತವು ಸೂಕ್ತ ರಾಜತಾಂತ್ರಿಕ ಹಾಗೂ ವ್ಯಾವಹಾರಿಕ ಜಾಣ್ಮೆಯಿಂದ ನಿಭಾಯಿಸುತ್ತಿರುವುದರಿಂದಾಗಿ ಇದ್ದುದರಲ್ಲಿ ಸ್ವಲ್ಪ ಪರವಾಗಿಲ್ಲ ಎನ್ನಬಹುದಾಗಿದೆ. ಇದೇ ಸಂದರ್ಭದಲ್ಲಿ ಅಗತ್ಯ ವಸ್ತುಗಳ ದರ ಹೆಚ್ಚಳದಿಂದಾಗಿ ಹಣದುಬ್ಬರ ಪ್ರಮಾಣ ಸಹ ಹೆಚ್ಚಿದ್ದು, ಚಿಂತೆಯ ವಿಷಯವಾಗಿದೆ. ಕೆಲ ದಿನಗಳ ಹಿಂದಿನವರೆಗೂ ಇಂಧನ ದರ ಸಹ ಜನರ ಜೇಬು ಸುಡುತ್ತಿತ್ತು. ಈಗೇನೋ ಕೇಂದ್ರ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕದಲ್ಲಿ ಇಳಿಕೆ ಮಾಡಿದ್ದರಿಂದ, ಲೀಟರ್ ಪೆಟ್ರೋಲ್ ಬೆಲೆ 100 ರೂ. ಆಸುಪಾಸು ಬಂದಿದೆ. ಹೀಗಿದ್ದರೂ, ಕೆಲ ಅಗತ್ಯ ವಸ್ತುಗಳ ದರ ಮೇಲೇರಿಕೊಂಡೇ ಇದೆ. ಕರೊನಾ ಕಾಲದ ಸಂಕಷ್ಟಗಳಿಂದ ಎಲ್ಲ ಜನರೂ ಇನ್ನೂ ಹೊರಬಂದಿಲ್ಲ. ಜೀವನಮಟ್ಟ ಸ್ವಲ್ಪ ಇಳಿದರೆ ಅವರಿಗೆ ಅಷ್ಟು ನೆರವಾಗುತ್ತದೆ. ಈ ಹೊರೆಯನ್ನು ಇಳಿಸುವತ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಂತಮ್ಮ ಪಾಲಿನ ಜವಾಬ್ದಾರಿಗಳನ್ನು ನಿಭಾಯಿಸಬೇಕು ಎಂಬುದು ಜನರ ನಿರೀಕ್ಷೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 10 =
Remember me
