ಬೆಂಗಳೂರು:ಕರೊನಾ ಸೋಂಕಿತನೆಂದು ನಕಲಿ ದಾಖಲೆ ಸೃಷ್ಟಿಸಿ 40 ಲಕ್ಷ ರೂಪಾಯಿಗಾಗಿ ಪತ್ನಿಯೇ ಪತಿಯನ್ನ ಕಿಡ್ನಾಪ್ ಮಾಡಿರುವ ಪ್ರಸಂಗ ಇದೀಗ ಬೆಳಕಿಗೆ ಬಂದಿದೆ. ಸ್ನೇಹಿತರ ನೆರವಿನೊಂದಿಗೆ ಆಂಬುಲೆನ್ಸ್​ನಲ್ಲಿ ಪತಿಯನ್ನ ಅಪಹರಿಸಿದ ಪತ್ನಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ನಗರದ ತ್ಯಾಗರಾಜನಗರ ನಿವಾಸಿ ಸೋಮಶೇಖರ್ ಎಂಬಾತನನ್ನು ಪತ್ನಿ ಸುಪ್ರಿಯಾ ಅಪಹರಿಸಿದ್ದಳು. ಇದೇ ಪ್ರಕರಣದಲ್ಲಿ ಇದೀಗ ಸುಪ್ರಿಯಾ ಸೇರಿದಂತೆ ಒಟ್ಟು 6 ಜನರನ್ನು ಬಾಗಲಕುಂಟೆ ಪೊಲೀಸರು ಬಂಧಿಸಿದ್ದಾರೆ. ಸುಪ್ರಿಯಾ ಸ್ನೇಹಿತ ಗಗನ್, ಗಗನ್ ತಾಯಿ ಲತಾ, ಬಾಲಾಜಿ, ತೇಜಸ್, ಕಿರಣ್ ಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳಾದ ಪ್ರಶಾಂತ್, ಸುಪ್ರೀತ್, ಪವಾರ್ ಮತ್ತು ಅರವಿಂದ್ ರಾಮಪ್ಪ ನಾಪತ್ತೆಯಾಗಿದ್ದು ಬಲೆ ಬೀಸಲಾಗಿದೆ.
ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ಸೋಮಶೇಖರ್ ಬೆಂಗಳೂರಿನಲ್ಲಿ ಮನೆ ಖರೀದಿಸಲು 40 ಲಕ್ಷ ರೂ. ಹಣ ಕೂಡಿಟ್ಟಿದ್ದರು. ಈ ಹಣವನ್ನು ಲಪಟಾಯಿಸಲು ಸ್ನೇಹಿತರ ಜತೆ ಸೇರಿ ಸುಪ್ರಿಯಾ ಖತರ್ನಾಕ್ ಪ್ಲಾನ್ ಮಾಡಿದ್ದಳು. ತನಗೆ ವಿಪರೀತ ಹೊಟ್ಟೆ ನೋವೆಂದು ಹೇಳಿ, ಮಾತ್ರೆ ತರುವಂತೆ ಪತಿಯನ್ನು ಮನೆಯಿಂದ ಹೊರ ಕಳುಹಿಸಿದ್ದಳು. ಈ ವೇಳೆ ಕರೊನಾ ಸೋಂಕಿತ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾನೆಂದು ಸುಳ್ಳು ಹೇಳಿ ಸುಪ್ರಿಯಾ ಸ್ನೇಹಿತರು ಆಂಬ್ಯುಲೆನ್ಸ್​ನಲ್ಲಿ ಕಿಡ್ನಾಪ್ ಮಾಡಿದ್ದರು.
ಇದನ್ನೂ ಓದಿ:ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ
ಸೋಮಶೇಖರ್​ಗೆ ಕರೊನಾ ಪಾಸಿಟಿವ್​ ಇದೆ ಎಂದು ಸಾಬೀತು ಪಡಿಸಲು ನಕಲಿ ವೈದ್ಯಕೀಯ ದಾಖಲೆ ಪಡೆದಿದ್ದರು. ಕುಮಾರಸ್ವಾಮಿ ಲೇಔಟ್ ನಿವಾಸಿ ಕಿರಣ್ ಕುಮಾರ್ ಎಂಬಾತನಿಂದ ಸುಪ್ರೀಯ ಅಂಡ್ ಟೀಂ ನಕಲಿ ವೈದ್ಯಕೀಯ ದಾಖಲೆ ಪಡೆದಿತ್ತು. ಬಳಿಕ ತನ್ನ ಸ್ನೇಹಿತರ ಜತೆ ಸೇರಿ ಸುಪ್ರಿಯಾ ಆಂಬ್ಯುಲೆನ್ಸ್​ನಲ್ಲಿ ಚಾಮರಾಜನಗರಕ್ಕೆ ಕಿಡ್ನಾಪ್ ಮಾಡಿಸಿದ್ದಳು.

ಚಾಮರಾಜನಗರದ ತೋಟದ ಮನೆಯೊಂದರಲ್ಲಿ ಕೂಡಿ ಹಾಕಿ 40 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರ ನಡುವೆ ಸ್ನೇಹಿತರಿಗೆ ಕರೆ ಮಾಡಿದ್ದಕ್ಕೆ ಸೋಮಶೇಖರ್​ ಜೀವ ಉಳಿದಿದೆ. ಸ್ನೇಹಿತರ ನೆರವು ಪಡೆದು ಸೋಮಶೇಖರ್​ ಬಚಾವ್ ಆಗಿದ್ದಾರೆ. ತನ್ನ ಸ್ನೇಹಿತರಿಗೆ ಕರೆ ಮಾಡಿ 10 ಲಕ್ಷ ರೂ. ಹಣವನ್ನ ತನ್ನ ಪತ್ನಿ ಸುಪ್ರಿಯಾಗೆ ನೀಡುವಂತೆ ಸೋಮಶೇಖರ್ ತಿಳಿಸಿದ್ದ. ಸಂಶಯಗೊಂಡ ಸೋಮಶೇಖರ್ ಸ್ನೇಹಿತರು ಸುಪ್ರಿಯಾಳಿಗೆ ಕರೆ ಮಾಡಿದಾಗ ಖತರ್ನಾಕ್​ ವಂಚಕಿ ಸಿಕ್ಕಿಬಿದ್ದಿದ್ದಾಳೆ.
ಕರೆ ಮಾಡಿದಾಗ ಮಾಗಡಿ ರಸ್ತೆಯ ಆಸ್ಪತ್ರೆಯಲ್ಲಿ ತನ್ನ ಪತಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಸುಪ್ರಿಯಾ ಸುಳ್ಳು ಹೇಳಿದ್ದಳು. ಇದರಿಂದ ಸಂಶಯಗೊಂಡ ಸೋಮಶೇಖರ್ ಸ್ನೇಹಿತರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ಸೋಮಶೇಖರ್ ಮನೆ ಬಳಿ ತೆರಳಿ ಸುಪ್ರಿಯಾ ವಿಚಾರಣೆ ಮಾಡಿದ್ದರು. ಈ ವೇಳೆ ತನಗೇನು ಗೊತ್ತಿಲ್ಲದಂತೆ ಪೊಲೀಸರ ಮುಂದೆ ಡ್ರಾಮಾ ಮಾಡಿದ್ದಳು.
ಇದನ್ನೂ ಓದಿ:ಪ್ರೀತಿಸಿ ಮದುವೆಯಾಗಲು ಸಿದ್ಧವಾಗಿದ್ದ ಜೋಡಿಗೆ ಮಚ್ಚಿನೇಟು: ಯುವತಿಯ 4 ಬೆರಳುಗಳು ಕಟ್​..!
ಇದಾದ ಬಳಿಕ ತನ್ನ ಸ್ನೇಹಿತ ಗಗನ್​ಗೆ ಕಾಲ್ ಮಾಡಿ ಕಿಡ್ನಾಪ್ ಮಾಡಿರುವ ವಿಚಾರ ಪೊಲೀಸರಿಗೆ ಗೊತ್ತಾಗಿದೆ ಎಂದಿದ್ದಳು. ಇದರಿಂದ ಭಯಗೊಂಡ ಗಗನ್, ಸೋಮಶೇಖರ್​ನಿಂದ ತನ್ನ ಸ್ನೇಹಿತರಿಗೆ ಕಾಲ್ ಮಾಡಿಸಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ನ. 3 ರಂದು ಮನೆಗೆ ಬರೋದಾಗಿ ಸುಳ್ಳು ಹೇಳಿಸಿದ್ದ. ಈ ವೇಳೆ ಗಗನ್, ಗಗನ್ ತಾಯಿ ಲತಾ ಸೋಮಶೇಖರ್​ನನ್ನ ಮನೆಗೆ ಕರೆತಂದು ಬಿಟ್ಟು ಹೋಗಿದ್ದರು.
ಇದೇ ವೇಳೆ ಗಗನ್ ಹಾಗೂ ಗಗನ್ ತಾಯಿಯನ್ನು ಹಿಡಿದು ಸೋಮಶೇಖರ್​ ಸ್ನೇಹಿತರು ಪೊಲೀಸರಿಗೆ ಒಪ್ಪಿಸಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಕಿಡ್ನಾಪ್ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ತಲೆಮರಿಸಿಕೊಂಡಿರುವ ಆರೋಪಿಗಳಿಗೆ ಬಾಗಲಗುಂಟೆ ಪೊಲೀಸರಿಂದ ಹುಡುಕಾಟ ಮುಂದುವರಿದಿದೆ.(ದಿಗ್ವಿಜಯ ನ್ಯೂಸ್​)
ಹೊಸ ಮನೆ ಪ್ರವೇಶಿಸಿದ ಕುಟುಂಬಕ್ಕೆ ಮೆಟ್ಟಿಲಡಿಯಲ್ಲಿ ರಹಸ್ಯ ಕೋಣೆ ಪತ್ತೆ: ಒಳಹೊಕ್ಕವರಿಗೆ ಕಾದಿತ್ತು ಶಾಕ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − 6 =
Remember me
