ಬೆಂಗಳೂರು:ಐಟಿ ಕ್ಷೇತ್ರದ ವರ್ಕ್ ​ಫ್ರಂ ಹೋಮ್​ ಕೊನೆಯಾಗಲಿ ಎಂದು ಶಾಸಕರು ವಿಧಾನಸಭೆಯಲ್ಲಿ ಗುರುವಾರ ಒತ್ತಾಯಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಪಕ್ಷೇತರ ಸದಸ್ಯ ಶರತ್​ ಬಚ್ಚೇಗೌಡ, ಬಿಜೆಪಿಯ ರುಘಪತಿ ಭಟ್​ ಮತ್ತಿತರರು ಈ ವಿಷಯ ಪ್ರಸ್ತಾಪಿಸಿ, ಐಟಿ ಕ್ಷೇತ್ರಕ್ಕೆ ಪೂರಕವಾದ ಕ್ಷೇತ್ರಗಳಿಗೆ ಭಾರಿ ಪೆಟ್ಟು ಬೀಳುತ್ತಿದೆ. ಐಟಿ ಕಚೇರಿಗಳು ಆರಂಭವಾಗದೆ ಇರುವುದರಿಂದ ಕ್ಯಾಬ್​ ಸೇವೆ, ಕಟ್ಟಡಗಳು ಸೇರಿ ವಿವಿಧ ಉದ್ಯಮಕ್ಕೆ ತೊಡಕಾಗಿದೆ. ಎಲ್ಲವೂ ಅನ್​ಲಾಕ್​ ಆಗುತ್ತಿರುವಾಗ ಐಟಿ ವರ್ಕ್​ ಫ್ರಂ ಹೋಮ್​ ನಿಯಮವನ್ನೂ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.
ಇದಕ್ಕುತ್ತರಿಸಿದ ಡಿಸಿಎಂ ಅಶ್ವತ್ಥನಾರಾಯಣ, ಸದ್ಯಕ್ಕೆ ಒತ್ತಡ ಹಾಕಲು ಬರಲ್ಲ. ಒತ್ತಾಯ ಮಾಡುವ ಪ್ರಮೇಯವೇ ಇಲ್ಲ. ಸಂದರ್ಭವೂ ಸೂಕ್ತವಾಗಿಲ್ಲ ಎಂದರು.
ಐಟಿ ಕಂಪನಿ ಮುಚ್ಚಿರುವುದರಿಂದ ಮ್ಯಾಕ್ಸಿ ಕ್ಯಾಬ್​ ಕ್ಷೇತ್ರದವರಿಗೆ ತೊಂದರೆಯಾಗಿದೆ, ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭವಾಗುತ್ತಿದೆ ಎಂದು ರಘುಪತಿ ಭಟ್​ ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಶರತ್​, ವರ್ಕ್​ ಫ್ರಂ​ ಹೋಮ್​ನಿಂದ ಕಾರ್ಯಕ್ಷಮತೆ ಕಡಿಮೆಯಾಗಿದೆ. ಉದ್ಯೋಗಿಗಳು ಮುಂಚಿನಂತೆಯೇ ಕಚೇರಿಗೆ ಬಂದು ಕೆಲಸ ಮಾಡುವಂತಾಗಬೇಕು. ಅದಕ್ಕೆ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದರು.
ಡಿಸಿಎಂ ಮಾತನಾಡಿ, ವರ್ಕ್​ ಫ್ರಂ ಹೋಮ್​ನಿಂದಾಗಿ ಕೆಲಸಕ್ಕೆ ತೊಂದರೆಯಾಗಿಲ್ಲ. ಐಟಿ ಬೆಳವಣಿಗೆಗೆ ಅಡೆತಡೆ ಆಗಿಲ್ಲ. ವಹಿವಾಟು ಏನು ನಡೆಯಬೇಕೋ ಅದು ನಡೆದಿದೆ. ವರ್ಕ್​ ಫ್ರಂ ಹೋಮ್​ ಬಂದಿರುವುದರಿಂದ ಕಚೇರಿ ಕಟ್ಟಡ ಏನಾಗುತ್ತವೆ? ಕರೊನಾ ಸೋಂಕಿನ ಕಾರಣಕ್ಕೆ ತಾತ್ಕಾಲಿಕವಾಗಿ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಸೋಂಕು ಕಡಿಮೆಯಾದ ಮೇಲೆ ಎಲ್ಲವೂ ಸರಿಯಾಗಲಿದೆ ಎಂದರು.
ಸಾಯುವ ಮುನ್ನ ಅಪ್ಪನಿಗೆ ಊಟ ಬಡಿಸಿದರು, ಆ ನಂತರ ಅಕ್ಕ-ತಂಗಿ ಇಬ್ಬರೂ ನೇಣಿಗೆ ಶರಣಾದರು!

‘ಹಣ ಕೊಟ್ಟೆ, ಮನೆ ಮಾಡಿ ಕೊಟ್ಟೆ, ನನ್ನೊಂದಿಗೆ ಲೈಂಗಿಕವಾಗಿ ಸಹಕರಿಸು… ಎಂದ ನಗರಸಭೆ ಮಾಜಿ ಸದಸ್ಯ’

ಮದ್ವೆಗೆ 2 ದಿನ ಇದ್ದಂತೆ ವಧುಗೆ ಕೈಕೊಟ್ಟ ವರ​! ಮದ್ವೆ ದಿನ ವಾಪಸ್​ ಬಂದವನಿಂದ ಮತ್ತೊಂದು ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 2 =
Remember me
