ಬೆಂಗಳೂರು:ಬೃಹತ್ ಕೈಗಾರಿಕಾ ಇಲಾಖೆಯಡಿ ಬರುವ ನಾನಾ ಉದ್ದಿಮೆಗಳ ಜತೆ ಭಾರಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಂಗಳವಾರವಿಡೀ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಸಂಬಂಧಿಸಿದ ಅಧಿಕಾರಿಗಳು, ಆಯುಕ್ತರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದಿಷ್ಟ ಹೊಣೆಗಾರಿಕೆಗಳನ್ನು ವಹಿಸಿ, ಅವೆಲ್ಲವನ್ನೂ ಕ್ಷಿಪ್ರ ಗತಿಯಲ್ಲಿ ಮಾಡುವಂತೆ ನಿಗದಿತ ಕಾಲಮಿತಿ ವಿಧಿಸಿದರು.
ಮೊದಲ ನೂರು ದಿನಗಳ ಕಾಲ ಭಾರಿ ಕೈಗಾರಿಕಾ ಇಲಾಖೆಯಲ್ಲಿ ರಚನಾತ್ಮಕವಾಗಿ ಏನೇನು ಮಾಡಬಹುದು ಎಂದು ಚಿಂತಿಸಿದೆವು.‌ ಈಗ ಅವುಗಳ ಅನುಷ್ಠಾನದತ್ತ ಹೆಜ್ಜೆ ಇಡುತ್ತಿದ್ದೇವೆ. ಇನ್ನು ಮುಂದೆ 15 ದಿನಗಳಿಗೊಮ್ಮೆ ನಾನೇ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ ಎಂದು ಸಚಿವರು ಸಭೆಯಲ್ಲಿ ಹೇಳಿದರು.
ರಾಜ್ಯದ ಹಲವೆಡೆ ಕೈಗಾರಿಕಾ ನಿವೇಶನಗಳನ್ನು ಹಂಚಲಾಗಿದೆ. ಇವುಗಳಿಗೆ ಎಷ್ಟೋ ಜನ ನಿಗದಿತ ಅವಧಿಯಲ್ಲಿ ಹಣ ಪಾವತಿಸಿಲ್ಲ. ಇನ್ನು ಕೆಲವರು ಶೇ. 30ರಷ್ಟು ಮಾತ್ರ ಹಣ ಕಟ್ಟಿ ಸುಮ್ಮನಾಗಿದ್ದಾರೆ. ಅಂತಹ ನಿವೇಶನಗಳನ್ನು ಪತ್ತೆ ಹಚ್ಚಿ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು, ಕಾನೂನು ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ರಾಜ್ಯದಲ್ಲಿ 100 ಹಳೆಯ ಕೈಗಾರಿಕಾ ಲೇಔಟ್ ಇವೆ. ಇಲ್ಲಿ ಒಂದು ಹಂತದ ಕ್ರಮವಾಗಿ ಮೂಲಸೌಕರ್ಯ ಸುಧಾರಣೆಗೆ ತೀರ್ಮಾನಿಸಲಾಗಿದೆ. ಅಲ್ಲಿನ‌ ಅಗತ್ಯಗಳ ಬಗ್ಗೆ 15 ದಿನಗಳಲ್ಲಿ ಸಮಗ್ರ ಪಟ್ಟಿ ಕೊಡಬೇಕು. ಕೈಗಾರಿಕಾ ಲೇಔಟ್ ಗಳಲ್ಲಿ ಇರುವ ಸಿ.ಎ.‌ ನಿವೇಶನಗಳನ್ನು ಆದ್ಯತೆಯ ಮೇಲೆ ಆರ್ & ಡಿ ಕೇಂದ್ರಗಳಿಗೆ ಕೊಡಬೇಕು. ಇದರ ಬಗ್ಗೆ ಎರಡು ವಾರಗಳಲ್ಲಿ ತೀರ್ಮಾನಿಸಬೇಕು. ಜತೆಗೆ ಮಾರುಕಟ್ಟೆ ಮೌಲ್ಯವನ್ನು ಮೂಲ ಬೆಲೆಯಾಗಿ ತೆಗೆದುಕೊಂಡು ಇಲ್ಲಿನ ಬಿಡಿ ನಿವೇಶನಗಳನ್ನು ಹರಾಜು ಹಾಕಬೇಕು ಎಂದು ಆದೇಶಿಸಿದರು.
ಇದನ್ನೂ ಓದಿ:ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್​ಫರ್’​ ಅಸಾಧ್ಯ ಅನಿಸುತ್ತೆ!
ಮೈಸೂರು ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಕ್ರಮವಾಗಿ 118 ಮತ್ತು 270 ಎಕರೆ ಭೂಮಿ ಇನ್ನೂ ಕಂದಾಯ ಇಲಾಖೆಯ ಅಧೀನದಲ್ಲೇ ಇದೆ. ಇದು ಕೆಐಎಡಿಬಿಗೆ ಹಸ್ತಾಂತರ ಆಗಬೇಕು. ಈ ಸಂಬಂಧದ ಪ್ರಕ್ರಿಯೆಗಳು ಒಂದು ತಿಂಗಳಲ್ಲಿ ಮುಗಿಯಬೇಕು.ಹೊಸ ಕೈಗಾರಿಕಾ ಲೇಔಟ್ ಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಡಿಮ್ಯಾಂಡ್ ಸರ್ವೇ ಮಾಡಬೇಕು. ಅಲ್ಲದೆ ಎಂಎಸ್ಐಎಲ್ ಮತ್ತು ಕೆಎಸ್ಡಿಎಲ್ ಎರಡಕ್ಕೂ ಹೊಸ ರೂಪ ಕೊಡಬೇಕು. ಕೆಎಸ್ಡಿಎಲ್ ಇನ್ನು ಮುಂದೆ ಎಲ್ಲ ವರ್ಗಗಳಿಗೂ ಸಿಗುವಂತೆ ಲಿಕ್ವಿಡ್ ಸೋಪ್ ಕೂಡ ತಯಾರಿಸಬೇಕು. ರಾಜ್ಯ ಸರಕಾರವು ರಫ್ತಿಗೆ ಉತ್ತೇಜನ‌ ನೀಡುವಂತಹ ಹೊಸ ಕೈಗಾರಿಕಾ ನೀತಿ ಜಾರಿಗೆ ತರಲು ನಿರ್ಧರಿಸಿದೆ. ಈ ಸಂಬಂಧ ಮೂರು ತಿಂಗಳಲ್ಲಿ ವ್ಯಾಪಕ‌ ಸಮಾಲೋಚನೆ ಮುಗಿಸಿ ಹೊಸ‌ ನೀತಿ ರೂಪಿಸಬೇಕು ಎಂದು ಗಡುವು ವಿಧಿಸಿದರು.
ಇದನ್ನೂ ಓದಿ:ಅಬ್ಬಬ್ಬಾ.. ಇದೇನಿದು ‘ಸರ್ಪ’ರೈಸ್!: ದೇವರಕೋಣೆಯಲ್ಲಿ ಕಾಳಿಂಗ ಸರ್ಪ, ಸ್ಕೂಲ್​ಬ್ಯಾಗ್​ನಲ್ಲಿ ನಾಗರಹಾವು!
800 ಕೋಟಿ ರೂಪಾಯಿ ಬಾಕಿ:ಎಸ್ಸಿ ಮತ್ತು ಎಸ್ಟಿ ಉದ್ಯಮಗಳಿಗೆ ಸರಕಾರವು ಶೇ. 75ರಷ್ಟು ರಿಯಾಯಿತಿ ದರದಲ್ಲಿ ಜಮೀನು ನೀಡುತ್ತಿದೆ. ಈ ಬಾಬ್ತಿನಲ್ಲಿ‌ ಕೆಐಎಡಿಬಿಗೆ 800 ಕೋಟಿ ರೂಪಾಯಿ ಸರಕಾರದಿಂದ ಬರಬೇಕಾಗಿದೆ. ಈ ಬಗ್ಗೆ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಸಚಿವರು ಮಾತನಾಡಿ ತಕ್ಷಣ ಬಿಡುಗಡೆಗೆ ಸೂಚಿಸಿದರು. ಎಸ್ಸಿ, ಎಸ್ಟಿ ಸಮುದಾಯಗಳಲ್ಲಿ ಪ್ರಭಾವಿಗಳಷ್ಟೇ ಕೈಗಾರಿಕಾ ನಿವೇಶನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದು ಉದ್ಯಮಶೀಲ ಬಡವರಿಗೂ ಸಿಗುವಂತೆ ಆಗಬೇಕು. ಆ ನಿಟ್ಟಿನಲ್ಲಿ ಕ್ರಮವಹಿಸಲು ಸೂಚಿಸಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಮಹೇಶ್, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜಕುಮಾರ್, ಕೆಎಸ್ಡಿಎಲ್ ಎಂಡಿ ಪ್ರಶಾಂತ್, ಕೆಎಂಸಿಎ ಎಂಡಿ ಸಿದ್ದಲಿಂಗಯ್ಯ ಪೂಜಾರ್ ಉಪಸ್ಥಿತರಿದ್ದರು.
ಹಿಂದೂ ಧರ್ಮ ಯಾವಾಗ ಹುಟ್ಟಿತು‌‌‌.. ಯಾರು ಹುಟ್ಟಿಸಿದ್ದರು?: ಗೃಹ ಸಚಿವ ಡಾ.ಜಿ.ಪರಮೇಶ್ವರ್​

ಚಂದ್ರಯಾನ-3 ಮಹಾಕ್ವಿಜ್​: ಇಲ್ಲಿದೆ ಒಂದು ಲಕ್ಷ ರೂ. ಗೆಲ್ಲುವ ಅವಕಾಶ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + fourteen =
Remember me
