ಕುಂದಾಪುರ:ತೆಂಕು ಬಡಗು ತಿಟ್ಟು ಅಪ್ರತಿಮ ಕಲಾವಿದ  ಚತುರ ಮಾತುಗಾರ ಯಕ್ಷಗಾನ ತಾಳಮದ್ದಳೆ ತಂಡ ಕಟ್ಟಿ ಮೊಟ್ಟಮೊದಲು ಸಂಚಾರ ಆರಂಭಿಸಿದ ತಾಳಮದ್ದಳೆ ಅರ್ಥದಾರಿ ವಾಸುದೇವ ಸಾಮಗ (82) ಶನಿವಾರ ವಿಧಿವಶರಾಗಿದ್ದಾರೆ. ಇವರು ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ರಾಮದಾಸ ಸಾಮಗ ಅವರ ಪುತ್ರ.
ಹದಿನೈದು ದಿನದ ಹಿಂದೆ ಕರೊನ ಪಾಸಿಟ್ ಹಿನ್ನೆಲೆಯಲ್ಲಿ ವಾಸುದೇವ ಸಾಮಗ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಾರೋಗ್ಯ ಬಿಗಡಾಯಿಸಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಣಿಪಾಲ ಆಸ್ಪತ್ರೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ರಾಷ್ಟ್ರವಾದಿಗಳನ್ನು ಬಿಜೆಪಿಯೇ ಬೆಂಬಲಿಸದಿದ್ದರೆ ಹೇಗೆ?
ವಾಸುದೇವ ಸಾಮಗ 30ರ ಹರೆಯದಲ್ಲೇ ಯಕ್ಷಗಾನ ರಂಗ ಪ್ರವೇಶಿಸಿದ್ದು, ಉತ್ತರನ ಪೌರುಷದ ಉತ್ತರೆ ಮೂಲಕ ಎತ್ತರಕ್ಕೆ ಏರಿದರು..ನಾಗಶ್ರೀ ಪ್ರಸಂಗದ ಪ್ರದೀಪ ಪಾತ್ರ ಸಾಮಗರನ್ನು ಎತ್ತರಕ್ಕೆ ಏರಿಸಿದ್ದು ಇದರಿಂದಲೇ ತಮ್ಮ ಮಗನಿಗೆ ಪ್ರದೀಪ ಎಂದು ನಾಮಕರಣ ಮಾಡಿದ್ದರು.
ಇದನ್ನೂ ಓದಿ:ಹಣ-ಝಣ ಅಂಕಣ| ಕೊಟ್ಟ ಸಾಲ ಕೇಳದೆ ಹೋಯ್ತು…
ಸಾಲಿಗ್ರಾಮ, ಶಿರಸಿ, ಸುರತ್ಕಲ್ ಮೇಳದಲ್ಲಿ ತಿರುಗಾಟ ಮಾಡಿದ್ದು ಮಾತಲ್ಲೇ ಪ್ರೇಕ್ಷಕರ ಸೆರೆಹಿಡಿಯುವ ಸೂಜಿಗಲ್ಲಿನ ಸೆಳೆತ ಸಾಮಗರದಾಗಿತ್ತು. ಮೊಟ್ಟಮೊದಲು ತಾಳಮದ್ದಲೆ ತಂಡ ಕಟ್ಟಿ ಸಂಚಾರ ಮಾಡಿದ ಹಿರಿಮೆ ಸಾಮಗರದಾಗಿತ್ತು. ಮೃತರು ಪತ್ನಿ ಹಾಗೂ ಹವ್ಯಾಸಿ ಕಲಾವಿದ ಡಾ.ಪ್ರದೀಪ್ ಸಾಮಗ ಅವರನ್ನು ಅಗಲಿದ್ದಾರೆ.
ಅಯೋಧ್ಯೆಯನ್ನು ಬೆಳಗಲಿವೆ 5.51 ದೀಪಾವಳಿ ಹಣತೆಗಳು
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven − 2 =
Remember me
