ವಿಜಯಪುರ:ಯೋಗಿಗಳ ನಾಡು, ಶರಣರ ಬೀಡು, ಸೂಫಿ ಸಂತರ ನೆಲೆವೀಡು ಎಂದು ಕರೆಯಲ್ಪಡುವ ನಲ್ಲಿ ಯೋಗಾಥಾನ್​-2023 ಅದ್ದೂರಿಯಾಗಿ ನೆರವೇರಿತು.
ರಾಜ್ಯದ ಪ್ರತಿಷ್ಠಿತ ಸೈನಿಕ ಶಾಲೆ ಆವರಣಲದಲ್ಲಿ ಭಾನುವಾರ ಬೆಳಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಯೋಗಾಥಾನ್- 2023 ಯಶಸ್ವಿಯಾಗಿ ನೆರವೇರಿತು.
ಜಿಲ್ಲೆಯ ವಿವಿಧ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸರ್ಕಾರಿ ಕಚೇರಿಯ ಸಿಬ್ಬಂದಿ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ, ಎನ್ ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಯೋಗಪಟುಗಳು ಭಾಗವಹಿಸಿದ್ದರು.
ನಸುಕಿನ ನಾಲ್ಕು ಗಂಟೆಯಿಂದಲೇ ಯೋಗಪಟುಗಳು ಸರತಿ ಸಾಲಿ‌ನಲ್ಲಿ ಸೈನಿಕ ಶಾಲೆ ಆವರಣಕ್ಕೆ ಆಗಮಿಸಿದ್ದರು. ಮ್ಯಾಟ್, ಬೆಡ್ ಸೀಟ್, ಚಾಪೆ ಮತ್ತಿತರ ಸಾಮಗ್ರಿ ಹಿಡಿದು ಯೋಗಾಥಾನ್ ಟಿ- ಶರ್ಟ್ ಧರಿಸಿ ಯೋಗದ ಆಸನಗಳು ಹಾಕುತ್ತಿದ್ದರೆ ವಿಶಾಲ ಮೈದಾನದಲ್ಲಿ ಕೊಕ್ಕರೆಯ ಬಳಗ ಜಮಾಯಿಸಿ ಸಾಮೂಹಿಕ ಆಸನ ಹಾಕಿದಂತಿತ್ತು.

ಅದಲ್ಲದೇ ವಿಶೇಷ ಆಕರ್ಷಣೆಯಾಗಿ ಮುಸಲ್ಮಾನ ವಿದ್ಯಾರ್ಥಿನಿಯರು ವಿಶೇಷವಾಗಿ ಒಟ್ಟಾಗಿ ಸಾಮೂಹಿಕ ಯೋಗಾಸನ ಮಾಡಿ ಎಲ್ಲರ ಮನಸ್ಸನ್ನು ಗೆದ್ದರು. ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಸಿಇಒ ರಾಹುಲ್ ಶಿಂಧೆ, ಎಸ್ ಪಿ ಎಚ್.ಡಿ. ಆನಂದಕುಮಾರ ಮತ್ತಿತರ ಅಧಿಕಾರಿಗಳು ಅಚ್ಚುಕಟ್ಟಾಗಿ ಆಯೋಜನೆ ಮಾಡಿ ಗಮನ ಸೆಳೆದರು. ವಿರೇಶವಾಲಿ, ಪ್ರಶಾಂತ ಚೌದರಿ, ಪರಶುರಾಮ ಭಜಂತ್ರಿ, ಶಿವಾನಂದ ಭಜಂತ್ರಿ ಮತ್ತಿತರ ಕಲಾವಿದರು ನಾಡಗೀತೆ ಪ್ರಸ್ತುತಪಡಿಸಿದರು. ಖ್ಯಾತ ನಿರೂಪಕ ಹುಮಾಯೂನ್ ಮಮದಾಪುರ ನಿರ್ವಹಿಸಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
