ಹಾಸನ:ಸ್ನೇಹಿತರ ರೂಮ್​ನಲ್ಲಿ ಪಾರ್ಟಿ ಮುಗಿಸಿ ಕಾರಲ್ಲಿ ಮಲಗಿದ ಯುವಕನೊಬ್ಬ ಅಲ್ಲೇ ಸಾವಿಗೀಡಾದ ಪ್ರಕರಣವೊಂದು ನಡೆದಿದೆ. ಅಲ್ಲದೇ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ನೇಹಿತರಿಬ್ಬರು ಮೊಬೈಲ್​ಫೋನ್​ ಸ್ವಿಚ್ ಆಫ್​ ಮಾಡಿರುವುದು ಕುತೂಹಲ ಮೂಡಿಸಿದೆ.
ಹಾಸನ ಜಿಲ್ಲೆಯ ಬೇಲೂರಿನ ಕುವೆಂಪು ನಗರದಲ್ಲಿ ಈ ಪ್ರಕರಣ ನಡೆದಿದೆ. ಚೇತನ್ (24) ಸಾವಿಗೀಡಾದ ಯುವಕ. ಬೇಲೂರಿನ ಮೊಬೈಲ್​ಫೋನ್​ ಅಂಗಡಿಯೊಂದರಲ್ಲಿ ಚೇತನ್ ಕೆಲಸ ಮಾಡುತ್ತಿದ್ದ. ನಿನ್ನೆ ರಾತ್ರಿ ಮೊಬೈಲ್​ಫೋನ್​ ಅಂಗಡಿ ಎದುರು ಬೈಕ್ ನಿಲ್ಲಿಸಿ ಸ್ನೇಹಿತರಾದ ಗೌತಮ್, ದರ್ಶನ್, ಮಿಥುನ್ ಅವರ ಜೊತೆ ಚೇತನ್ ಪಾರ್ಟಿಗೆ ತೆರಳಿದ್ದ.
ರಾತ್ರಿ ಹನ್ನೆರಡು ಗಂಟೆಯವರೆಗೆ ಗೌತಮ್ ರೂಮ್​ನಲ್ಲಿ ಪಾರ್ಟಿ ಮಾಡಿದ್ದರು. ಪಾರ್ಟಿ ಮುಗಿದ ನಂತರ ದರ್ಶನ್, ಮಿಥುನ್, ಗೌತಮ್ ತೆರಳಿದರೆ ಮನೆಗೆ ತೆರಳಲಾಗದೆ ಚೇತನ್​ ಕಾರಿನಲ್ಲೇ ಮಲಗಿದ್ದ. ಗೌತಮ್ ರೂಮ್ ಎದುರೇ ನಿಂತಿದ್ದ ಕಾರು, ಇಂದು ಬೆಳಗ್ಗೆ ಗಂಟೆ ಹತ್ತಾದರೂ ಕದಲದ್ದರಿಂದ ಹತ್ತಿರ ಹೋಗಿ ಗಮನಿಸಿದಾಗ ಕಾರಿನ ಹಿಂದಿನ ಸೀಟ್​ನಲ್ಲಿ ಚೇತನ್ ಶವ ಕಂಡುಬಂದಿತ್ತು.
ಇದನ್ನೂ ಓದಿ:ಕುಸಿದು ಬಿತ್ತು ಬೃಹತ್ ಸೇತುವೆ; ನೋಡನೋಡುತ್ತಿದ್ದಂತೆ ನೀರುಪಾಲಾದ ಬ್ರಿಡ್ಜ್!
ಚೇತನ್​ ರಕ್ತ ವಾಂತಿ ಮಾಡಿಕೊಂಡು ಮಲಗಿದ್ದ ಸ್ಥಿತಿಯಲ್ಲಿದ್ದ. ಕೂಡಲೇ ದರ್ಶನ್-ಮಿಥುನ್‌ಗೆ ಗೌತಮ್ ಫೋನ್ ಮಾಡಿದ್ದು, ಆ ಸುದ್ದಿ ತಿಳಿದ ಬಳಿಕ ಅವರಿಬ್ಬರ ಮೊಬೈಲ್​ಫೋನ್ ಸ್ವಿಚ್ ಆಫ್ ಆಗಿದೆ. ಪೊಲೀಸರಿಗೆ ಸುದ್ದಿ ಮುಟ್ಟಿದ್ದು, ಅವರು ಶವ ತೆರವುಗೊಳಿಸಿದ್ದಾರೆ. ಚೇತನ್ ಪೋಷಕರು ಕೊಲೆ ಆರೋಪ ಮಾಡಿದ್ದು, ಬೇಲೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. –ಏಜೆನ್ಸೀಸ್
ಸಿದ್ದರಾಮಯ್ಯ ಕುರಿತು ಹನಿಗವಿಯ ವರ್ಷದ ಹಿಂದಿನ ತಮಾಷೆ ನಿಜವಾಯಿತು!

ಮುಂದಿನ ಒಂದು ವರ್ಷದಲ್ಲಿನ ಉಚಿತ ಚಿಕಿತ್ಸೆಗೆಂದೇ 65 ಕೋಟಿ ರೂ. ಮೀಸಲು: ಅಮೃತ ಆಸ್ಪತ್ರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
