ಮಲಪ್ಪುರಂ:ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಕೇರಳದ ಪೌರ ಕಾರ್ಮಿಕರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.
ಕಷ್ಟದಲ್ಲಿದ್ದವರನ್ನು ದೇವರು ಕೈಹಿಡಿಯುತ್ತಾನಾ ಎಂದು ಕೇಳುವವರಿಗೂ ಈ ಘಟನೆ ಒಂದು ಸೂಕ್ತ ಉತ್ತರವಾಗಿದೆ. ದೇವರು ಯಾವುದಾದರೂ ಒಂದು ರೂಪದಲ್ಲಿ ಬಂದೇ ಬರುತ್ತಾನೆ ಎನ್ನುವುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ. ಲಕ್ಷ್ಮೀ ಎಂಬಾಕೆ ಎಂದಿನಂತೆ ನಿನ್ನೆಯೂ ತಮ್ಮ ಪೌರಕಾರ್ಮಿಕ ಕೆಲಸಕ್ಕೆ ಹಾಜರಾದರು. ಆದರೆ, ಬರುವಾಗ ಊಟ ತಂದಿರಲಿಲ್ಲ. ಅದಕ್ಕೆ ಕಾರಣ ಮನೆಯಲ್ಲಿ ಅಕ್ಕಿ ಇರಲಿಲ್ಲ. ಇನ್ನೂ ಬೇಬಿ ಎಂಬಾಕೆಯ ಬಳಿ ಆಟೋ ಚಾಲಕನಿಗೆ ಕೊಡಲು 10 ರೂಪಾಯಿ ಕೂಡ ಇರಲಿಲ್ಲ. ಅದೇ ರೀತಿ ಚಂದ್ರಿಕಾ ಬಳಿ ಚಿಕಿತ್ಸೆಗೆ ಹಣವಿಲ್ಲದೆ ಹಲವು ದಿನಗಳಿಂದ ಹಾಸಿಗೆ ಹಿಡಿದಿದ್ದಾರೆ.
ಇದನ್ನೂ ಓದಿ:ನಿಜವಾದ ಗಂಡಸು ಎಂದರೆ ಯಾರು? ಕೌಸಲ್ಯಾ ಸುಪ್ರಜಾ ರಾಮ ನೋಡಲು ಐದು ಕಾರಣಗಳು…
ಇದಿಷ್ಟು ಕೇರಳದ ಪರಪ್ಪನಂಗಡಿ ಮುನ್ಸಿಪಾಲಿಟಿಯಲ್ಲಿ ಹರಿತ ಕರ್ಮ ಸೇನಾ ಸದಸ್ಯರ ಪರಿಸ್ಥಿತಿಯಾಗಿದೆ. ಆದರೆ, ಇಂದು ಅವರ ಅದೃಷ್ಟ ಬಾಗಿಲು ತೆಗೆದಿದ್ದು, ಕಷ್ಟಗಳೆಲ್ಲ ದೂರವಾಗುವ ದಿನ ಬಂದಿದೆ. ಕೇರಳದ ಮಾನ್ಸೂನ್​ ಬಂಪರ್​ 10 ಕೋಟಿ ರೂ. ಲಾಟರಿ ಬಹುಮಾನ ಬಂದಿದೆ. ಗುರುವಾರ ಪ್ರಕಟವಾದ ಲಾಟರಿ ಫಲಿತಾಂಶದಿಂದಾಗಿ ಮೂವರ ಬದುಕೇ ಬದಲಾಗಿದೆ. ನಿತ್ಯವೂ ನಗರವನ್ನು ಸ್ವಚ್ಛ ಮಾಡುವ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತು ಬಡತನದ ಜೀವನ ಸಾಗಿಸುತ್ತಿರುವ ಮಹಿಳೆಯರ ಮನೆಯಲ್ಲಿ ಇದೀಗ ಲಕ್ಷ್ಮೀಯ ಆಗಮನವಾಗಿದೆ.
ಒಟ್ಟು 11 ಮಂದಿ ಪೌರ ಕಾರ್ಮಿಕರು ಸೇರಿ MB 200261 ನಂಬರಿನ ಲಾಟರಿಯನ್ನು ಪಲಕ್ಕಾಡ್​ ನ್ಯೂ ಸ್ಟಾರ್​ ಏಜೆನ್ಸಿ ಬಳಿ ಖರೀದಿ ಮಾಡಿದ್ದರು. ಪಲಕ್ಕಾಡ್​ ಏಜೆನ್ಸಿಯಿಂದ ಪರಪ್ಪನಂಗಡಿಗೆ ಬಂದಿದ್ದ ವ್ಯಕ್ತಿಯಿಂದ ಲಾಟರಿ ಖರೀದಿಸಿದ್ದರು. ಪಿ. ಲಕ್ಷ್ಮೀ, ಕೆ. ಲೀಲಾ, ಎಂ. ಪಿ. ರಾಧಾ, ಎಂ ಶೀಜಾ, ಚಂದ್ರಿಕಾ ಥುದಿಸ್ಸೆರಿ, ಬಿಂದು ಕೊಹುಮ್ಮಾಲ್​, ಕಾರ್ತ್ಯಾಯನಿ ಪಟ್ಟಣನಾಥ್, ಶೋಭಾ ಕುರುಲಿಲ್​, ಕುಟ್ಟುಮಲು ಚೆರುಕುಟ್ಟಿಯಿಲ್​, ಬೇಬಿ ಚೆರುಮನ್ನಿಲ್​ ಮತ್ತು ರಾಧಾ ಮುಂದುಪಲಥಿಲ್​ ಹೆಸರಿನ ಪೌರ ಕಾರ್ಮಿಕರು 250 ರೂ. ಬೆಲೆಯ ಲಾಟರಿ ಟಿಕೆಟ್​ ಅನ್ನು ಒಟ್ಟಿಗೆ ಖರೀದಿ ಮಾಡಿದ್ದರು. ರಾಧಾ ಎಲ್ಲರನ್ನು ಒತ್ತಾಯಿಸಿ ಮಾಡಿ ಟಿಕೆಟ್​ ಖರೀದಿಸಿದ್ದರು. ಇದೀಗ ಈ ಟಿಕೆಟ್​ಗೆ 10 ಕೋಟಿ ರೂ. ಬಂಪರ್​ ಲಾಟರಿ ಬಹುಮಾನ ಬಂದಿದ್ದು, ಟಿಕೆಟ್​ ಅನ್ನು ಪರಪ್ಪನಂಗಡಿಯ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಸಲ್ಲಿಸಿದ್ದಾರೆ. ಎಲ್ಲರು ಸೇರಿ ಒಟ್ಟು ನಾಲ್ಕು ಬಾರಿ ಟಿಕೆಟ್​ ಖರೀದಿ ಮಾಡಿದ್ದರು. ಕಳೆದ ಬಾರಿ 1000 ರೂಪಾಯಿ ಓಣಂ ಬಂಪರ್​ ಲಾಟರಿ ಬಹುಮಾನ ಗೆದ್ದಿದ್ದರು.
ಹಣವಿಲ್ಲದ ಕಾರಣ ಲಾಟರಿ ತೆಗೆದುಕೊಳ್ಳಬೇಕೇ ಎಂದು ಒಂದು ಕ್ಷಣ ಎಲ್ಲರು ಯೋಚನೆ ಮಾಡಿದ್ದರು. ಆದರೂ ಚಿಕಿತ್ಸೆ, ಸಾಲ ಸೇರಿದಂತೆ ಮನೆಯಲ್ಲಿನ ಹಲವು ಸಮಸ್ಯೆಗಳ ಕಾರಣದಿಂದ ಎಲ್ಲರೂ ಅದೃಷ್ಟದ ಮೇಲೆ ಭಾರ ಹಾಕಿ, ಲಾಟರಿ ಖರೀದಿ ಮಾಡುವ ತಮ್ಮ ನಿಲುವನ್ನು ಬದಲಿಸಲಿಲ್ಲ. ಎಂದಿನಂತೆಯೇ ಈ ಬಾರಿಯೂ ಲಾಟರಿ ಖರೀದಿ ಮಾಡಿದ್ದರು. ಇದೀಗ 11 ಮಂದಿಯನ್ನು ಅದೃಷ್ಟ ಕೈಹಿಡಿದಿದ್ದು, ಒಂದೇ ಬಾರಿ ತಮ್ಮ ಕಷ್ಟಗಳೆಲ್ಲ ಮಾಯವಾಗಿ, ಸಂತಸದ ಕ್ಷಣಗಳು ಎದುರಾಗಿವೆ. ಇದೀಗ 11 ಮಂದಿಯೂ ಲಕ್ಷಾಧಿಪತಿಗಳಾಗಿದ್ದರೂ ತಮ್ಮ ಪೌರ ಕಾರ್ಮಿಕ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ರಕ್ತದಲ್ಲೇ ಕಿಚ್ಚ ಸುದೀಪ್​ ಚಿತ್ರ ಬರೆದ ಕಲಾವಿದೆ! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಲಾಟರಿ ಬಹುಮಾನ ಬಂದಿದೆ ಎಂಬುದನ್ನು ಕೇಳಿದ ಕೂಡಲೇ ಶೋಭಾಳ ಕಣ್ಣಲ್ಲಿ ನೀರುವ ತುಂಬಿಕೊಂಡಿತು. ಈ ಸಂತಸ ಸುದ್ದಿಯನ್ನು ಹೇಳಿಕೊಳ್ಳಲು ತನ್ನ ಮಗಳು ಇಲ್ವಲ್ಲಾ ಎಂದು ಕಣ್ಣೀರಿಡುತ್ತಾ ಕ್ಯಾಮೆರಾಗಳನ್ನು ತಪ್ಪಿಸಿ ತನ್ನ ಕಣ್ಣೀರನ್ನು ಒರೆಸಿಕೊಂಡರು. ಶೋಭಾಳ ಮಗಳು ರವೀನಾ ಮಹಾರಾಜ ಕಾಲೇಜಿನಲ್ಲಿ ಪಿಜಿ ವಿದ್ಯಾರ್ಥಿನಿಯಾಗಿದ್ದಳು. ಓದಿನಲ್ಲೂ ಮುಂಚೂಣಿಯಲ್ಲಿದ್ದಳು. ಮನೆಯಲ್ಲಿ ಏನೇ ಕಷ್ಟಗಳಿದ್ದರೂ ಅದನ್ನು ಮಗಳ ಜತೆ ತೋರಿಸಿಕೊಳ್ಳದೆ ಶೋಭಾ, ತನ್ನ ಮಗಳಿಗೆ ಎಲ್ಲವನ್ನು ಒದಗಿಸಿಕೊಟ್ಟಿದ್ದಳು. ಆದರೆ, ಖಿನ್ನತೆಯಿಂದ ಬಳಲುತ್ತಿದ್ದ ರವಿನಾ ಆತ್ಮಹತ್ಯೆಗೆ ಶರಣಾದಳು. ಮೂರು ವರ್ಷಗಳ ಹಿಂದೆ ಶೋಭಾ ಪತಿಯು ಕೂಡ ಹೃದಯಾಘಾದಿಂದ ಮೃತಪಟ್ಟಿದ್ದಾರೆ. ಆಕೆಯ ಮಗ ವಿಪಿನ್​ ಮೀನುಗಾರನಾಗಿದ್ದಾನೆ.
11 ಪೌರ ಕಾರ್ಮಿಕರದ್ದು ಒಂದೊಂದು ಕತೆಯಾಗಿದ್ದು, ಇದೀಗ ಲಾಟರಿ ಬಹುಮಾನ ಅವರ ಕಷ್ಟಗಳನ್ನು ದೂರ ಮಾಡಿದೆ.(ಏಜೆನ್ಸೀಸ್​)
75ರ ವೃದ್ಧನ ಜತೆ ಬೆಡ್​ರೂಮ್​ನಲ್ಲಿ ಸಿಕ್ಕಿಬಿದ್ದ ಸೀರಿಯಲ್​ ನಟಿ: ತನಿಖೆಯಲ್ಲಿ ಬಯಲಾಯ್ತು ಕಣ್ಣೀರಿನ ನಾಟಕ

ಉಡುಪಿಯ ಮೂವರು ಆರೋಪಿ ವಿದ್ಯಾರ್ಥಿನಿಯರಿಗೆ ನಿರೀಕ್ಷಣಾ ಜಾಮೀನು ಮಂಜೂರು

ಸಂಗೊಳ್ಳಿ ‌ರಾಯಣ್ಣ ಸೈನಿಕ ಶಾಲೆ: ಪನೀರ್, ಚಿಕನ್ ಊಟ ಸೇವಿಸಿ 38 ವಿದ್ಯಾರ್ಥಿಗಳು ತೀವ್ರ ಅಸ್ವಸ್ಥ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 4 =
Remember me
