ಜೋಧಪುರ: ರಾಜಸ್ಥಾನದ ಜೋಧಪುರಕ್ಕೆ ಬಂದು ನೆಲೆಸಿದ್ದ ಪಾಕಿಸ್ತಾನದ 11 ನಿರಾಶ್ರಿತರ ಮೃತದೇಹ ಇಂದು ಪತ್ತೆಯಾಗಿದೆ.ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು 2012ರಲ್ಲಿಯೇ ಪಾಕಿಸ್ತಾನದ ಸಿಂಧ್​ ಪ್ರಾಂತ್ಯದಿಂದ ಜೋಧಪುರದ ಹಳ್ಳಿಗೆ ಬಂದು ನೆಲೆಸಿದ್ದರು.
ಇವರೆಲ್ಲರ ಶವಗಳೂ ಕೋಣೆಯೊಂದರಲ್ಲಿ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಇವರು ಮೃತಪಟ್ಟ ಪ್ರದೇಶದ ಸುತ್ತಮುತ್ತ ಕೀಟನಾಶಕದ ವಾಸನೆ ಇದೆ. ಬಹುಶಃ ಯಾವುದಾದರೂ ವಿಷಾನಿಲ ಸೋರಿಕೆಯಾಗಿ, ಉಸಿರುಕಟ್ಟಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ದೆಚು ಠಾಣೆ ವ್ಯಾಪ್ತಿಯ ಲೊಡ್ತಾ ಏರಿಯಾದಲ್ಲಿ ಘಟನೆ ನಡೆದಿದೆ. ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಠಾಣಾಧಿಕಾರಿ ಹನುಮಾನ್ ರಾಮ್ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇವರೆಲ್ಲರೂ ಪಾಕಿಸ್ತಾನದಲ್ಲಿ ತೀವ್ರ ಹಿಂಸೆ ಅನುಭವಿಸಿದ ನಂತರ ಭಾರತಕ್ಕೆ ಬಂದು ನೆಲೆಸಿದ್ದರು. ಅಚಲ್​ವಾಟಾ ಗ್ರಾಮದಲ್ಲಿ ಕೃಷಿ ಕಾರ್ಮಿಕರಾಗಿದ್ದರು. ಸದ್ಯ ಕುಟುಂಬದ ಓರ್ವ ಸದಸ್ಯ ಬದುಕುಳಿದಿದ್ದಾರೆ ಎಂದು ಪೊಲೀಸರು ಮಾಹಿತಿ ನಿಡಿದ್ದಾರೆ.ಇದನ್ನೂ ಓದಿ:ಕೋವಿಡ್​ ಕೇರ್​ ಸೆಂಟರ್​ ಆಗಿರುವ ಹೋಟೆಲ್​ನಲ್ಲಿ ಬೆಂಕಿ ಅವಘಡ: ಸಾವಿನ ಸಂಖ್ಯೆ 10ಕ್ಕೇರಿಕೆ
ಹಾಗೇ ಈ ಘಟನೆ ಬಗ್ಗೆ ಸ್ಥಳೀಯರು ಬೇರೆಯದೇ ಹೇಳುತ್ತಿದ್ದಾರೆ. ಈ ಕುಟುಂಬಲ್ಲಿ ನರ್ಸ್​ ಓರ್ವರಿದ್ದಾರೆ. ಅವರು ಸಹೋದರರಿಗೆ ರಾಖಿ ಕಟ್ಟಲು ಇಲ್ಲಿಗೆ ಆಗಮಿಸಿದ್ದರು. ನಂತರ ಇಲ್ಲೇ ಉಳಿದುಕೊಂಡಿದ್ದರು. ನಿನ್ನೆ ಉಳಿದ 10 ಜನರಿಗೆ ವಿಷ ತುಂಬಿದ ಇಂಜೆಕ್ಷೆನ್ ಕೊಟ್ಟು ಕೊಂದ ಬಳಿಕ, ತಾವೂ ಅದನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಪ್ರಕರಣ ಸ್ವಲ್ಪ ಜಟಿಲವಾಗಿದ್ದು, ತನಿಖೆ ಶುರುಮಾಡಿದ್ದಾಗಿ ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್)
ಪ್ರವಾಹದ ವೇಳೆ ಸೆಲ್ಫಿ ಆಸೆನಾ? ಹಾಗಿದ್ರೆ ಆರು ತಿಂಗಳು ಜೈಲಿಗೆ ಹೋಗಲು ರೆಡಿಯಾಗಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
