ಲುನಾವಾಡಾ:ಗುಜರಾತಿನ ಲುನಾವಾಡಾದ ದಂಪತಿ ತಮ್ಮ ಐದು ತಿಂಗಳ ಮಗನ ಜೀವ ಉಳಿಸುವುದಕ್ಕೆ ಬೇಕಾದ ಒಂದು ಇಂಜೆಕ್ಷನ್ ತರಿಸಲು ಕ್ರೌಡ್ ಫಂಡಿಂಗ್ ಮೂಲಕ 16 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ.
ಮಗುವಿಗೆ ವಿರಳ ಜೆನೆಟಿಕ್ ಡಿಸಾರ್ಡರ್ ಆಗಿರುವ ಸ್ಪೈನಲ್ ಮಸ್ಕುಲರ್ ಅಟ್ರೋಫಿ ಕಾಯಿಲೆ ಇದ್ದು, ಮುಂಬೈನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಂದೆ ರಾಜ್​ದೀಪ್​ಸಿನ್ಹ ರಾಥೋಡ್ ಮತ್ತು ತಾಯಿ ಜಿನಾಲ್​ಬಾ ತಿಳಿಸಿದ್ದಾರೆ.
ಸ್ಪೈನಲ್ ಮಸ್ಕುಲರ್ ಅಟ್ರೋಫಿ ಕಾಯಿಲೆ ಇರುವವರಿಗೆ ಮಾಂಸಖಂಡಗಳ ಚಲನೆಯ ಮೇಲೆ ಹಿಡಿತ ಇರುವುದಿಲ್ಲ. ಬೆನ್ನುಹುರಿ ಮತ್ತು ಬ್ರೇನ್ ಸ್ಟೆಮ್ಳ ನರಕೋಶಗಳ ನಷ್ಟದಿಂದಾಗಿ ಈ ಕಾಯಿಲೆ ಉಂಟಾಗುತ್ತದೆ. ಇದು ಮಾಂಸಖಂಡಗಳ ದುರ್ಬಲತೆ ಮತ್ತು ಅಂಗಾಂಗಳ ಚಲನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಉಸಿರಾಟಕ್ಕೂ ಅಡ್ಡಿ ಉಂಟುಮಾಡುತ್ತದೆ.
ಈ ರೋಗಕ್ಕೆ ತುತ್ತಾಗಿರುವ ಮಗುವಿನ ಹೆಸರು ಧೈರ್ಯರಾಜ್. ಸ್ವಿಸ್ ಫಾರ್ವ ಕಂಪನಿ ನೊವಾರ್ಟಿಸ್ ಉತ್ಪಾದಿಸುವ ಒಂದು ಜೀನ್ ಥೆರಪಿ ಇಂಜೆಕ್ಷನ್ ಇದಕ್ಕೆ ಅಗತ್ಯವಿದ್ದು, ಅದನ್ನು ಭಾರತಕ್ಕೆ ತರಿಸಲು 16 ಕೋಟಿ ರೂಪಾಯಿ ಬೇಕಾಗಿತ್ತು. ಇದರಲ್ಲಿ ಇಂಜೆಕ್ಷನ್​ನ ಕಸ್ಟಮ್್ಸ ಸುಂಕವೇ 6.5 ಕೋಟಿ ರೂಪಾಯಿ. ಮಾನವೀಯ ನೆಲೆಯಲ್ಲಿ ಕೇಂದ್ರ ಸರ್ಕಾರ ಇದನ್ನು ಮಾಫಿ ಮಾಡಿತ್ತು. ಮಾರ್ಚ್ ತಿಂಗಳಲ್ಲಿ ಕ್ರೌಡ್ ಫಂಡಿಂಗ್ ಮೊರೆ ಹೋದ ರಾಥೋಡ್ ದಂಪತಿ 42 ದಿನಗಳ ಅವಧಿಯಲ್ಲಿ 16 ಕೋಟಿ ರೂಪಾಯಿ ಸಂಗ್ರಹಿಸುವಲ್ಲಿ ಯಶಕಂಡಿದ್ದಾರೆ. ಚಿಕಿತ್ಸೆ ಬಳಿಕ ಮಗನ ಆರೋಗ್ಯದಲ್ಲಿ ಸುಧಾರಣೆ ಕಾಣುವ ವಿಶ್ವಾಸದಲ್ಲಿದ್ದಾರೆ ರಾಥೋಡ್ ದಂಪತಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − six =
Remember me
