ಕತಾರ್​:ಇಡೀ ಜಗತ್ತನ್ನು ಕರೊನಾ ಮಹಾಮಾರಿ ಕಾಡುತ್ತಿದೆ. ಅದೆಷ್ಟೋ ಮಂದಿ ಬೇರೆಬೇರೆ ದೇಶಗಳಲ್ಲಿ ಸಿಲುಕಿ ಸಂಕಷ್ಟಪಡುತ್ತಿದ್ದಾರೆ. ಹಾಗೇ ಭಾರತ ಮೂಲದ ಒಂದಷ್ಟು ಜನರು ಸಿಲುಕಿಕೊಂಡಿದ್ದಾರೆ. ಅದರಲ್ಲಿ ಕೆಲವರು ಕೆಲಸ ಕಳೆದುಕೊಂಡಿದ್ದಾರೆ. ಒಂದಷ್ಟು ಮಂದಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮತ್ತೂ ಕೆಲವರು ಅನ್ನ, ಆಹಾರವಿಲ್ಲದೆ ಪರದಾಡುತ್ತಿದ್ದಾರೆ.
ಅಂಥವರನ್ನು ಭಾರತಕ್ಕೆ ಕಳಿಸುವ ಕೆಲಸವೂ ಭರದಿಂದ ಸಾಗುತ್ತಿದೆ. ಮೊದಲ ಹಂತದಲ್ಲಿ 177 ಜನರನ್ನು ವಂದೇ ಭಾರತ ನಿಯೋಗದ ಸೇವೆಯಡಿ ಮೇ 22ರಂದು ವಿಮಾನದ ಮೂಲಕ ಕತಾರ್​ನಿಂದ ಭಾರತಕ್ಕೆ ಕಳಿಸಲಾಗಿತ್ತು. ಆದರೆ ಇನ್ನೂ ಹಲವರು ವಿಮಾನ ಸೇವೆ ಇಲ್ಲದ ಕಾರಣ ಅಲ್ಲಿಯೇ ಉಳಿದಿದ್ದರು.ಇದನ್ನೂ ಓದಿ:‘ನಿಮಗೊಂದು ಸವಾಲು, ಈ ಫೋಟೋದಲ್ಲಿರುವುದೇನು ಗುರುತಿಸಿ..’: ಬೆರಳುಗಳು ಎಂದುಕೊಂಡಿದ್ದರೆ ಅದು ತಪ್ಪು!
ಇದೀಗ ಕತಾರ್​​ನಲ್ಲಿರುವ ಕರ್ನಾಟಕ ಸಂಘದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ಪರಿಶ್ರಮದಿಂದ ಮತ್ತೂ 180 ಮಂದಿ ಭಾರತಕ್ಕೆ ಬರುವಂತಾಗಿದೆ. ಜೂ.15ರಂದು ಬೆಳಗ್ಗೆ ಕತಾರ್​​ನ ಹಮಾದ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 180 ಭಾರತೀಯ ಪ್ರಯಾಣಿಕರನ್ನು ಹೊತ್ತ ವಿಮಾನ ಹೊರಟಿದೆ. ಇವರೆಲ್ಲರೂ ಎಲ್ಲರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.ಇದನ್ನೂ ಓದಿ:ಧೋನಿ 3ನೇ ಕ್ರಮಾಂಕದಲ್ಲಿ ಆಡಿದ್ದರೆ ಹಲವು ದಾಖಲೆಗಳು ಮುರಿಯುತ್ತಿದ್ದವು ಎಂದ ಗಂಭೀರ್
’ಗೋ ಏರ್’ ಸಂಸ್ಥೆಯ ವಿಮಾನವನ್ನು ಬಾಡಿಗೆಗೆ ಪಡೆದ ಕತಾರ್ ಕರ್ನಾಟಕ ಸಂಘವು, ಕತಾರಿನ ಇತರೆ ಕರ್ನಾಟಕ ಮೂಲದ ಸಂಸ್ಥೆಗಳ ಸಹಕಾರದೊಂದಿಗೆ ಹಾಗೂ ಐಸಿಬಿಎಫ್​​ (ಭಾರತೀಯ ಸಮುದಾಯ ಹಿತೈಷಿ ವೇದಿಕೆ) ಮತ್ತು ಕತಾರಿನ ಭಾರತೀಯ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ ಈ ಕಾರ್ಯವನ್ನು ನಡೆಸಿದೆ.ಕತಾರ್​ನಿಂದ ಹೊರಟ ಎಲ್ಲರೂ ಬೆಂಗಳೂರು ತಲುಪಿದ ಮೇಲೆ ಎಲ್ಲ ರೀತಿಯ ಸೂಚನೆಗಳನ್ನೂ ಪಾಲಿಸಲು ಒಪ್ಪಿಕೊಂಡಿದ್ದಾರೆ. ಹಾಗೇ ಈ ಕೆಲಸಕ್ಕೆ ಶಿವಮೊಗ್ಗ ಎಂಪಿ ಬಿ.ವೈ.ರಾಘವೇಂದ್ರ ಅವರ ಸಹಕಾರವೂ ಇದೆ ಎಂದು ಕತಾರ್​ನಲ್ಲಿರುವ ಕರ್ನಾಟಕ ಸಂಘ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 8 =
Remember me
