ಪ್ರಯಾಗ್​ರಾಜ್​: ಉತ್ತರ ಪ್ರದೇಶದ ಪ್ರಯಾಗ್​ರಾಜ್​ನ ಕರೇಲಿ, ಶಾಹ್​ಗಂಜ್​, ಶಿವ್​ಕುಟಿ ಎಂಬಲ್ಲಿ ಎರಡು ಮಸೀದಿಗಳಲ್ಲಿ ಅವಿತಿದ್ದ 19 ತಬ್ಲಿಘಿಗಳು ಮತ್ತು ಅವರಿಗೆ ಆಶ್ರಯ ನೀಡಿದ 12 ಜನ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ದೆಹಲಿಯಲ್ಲಿ ಕಳೆದ ತಿಂಗಳು ನಡೆದ ತಬ್ಲಿಘಿ ಜಮಾತ್​ನಲ್ಲಿ ಭಾಗವಹಿಸಿದ್ದವರು ಈ 19 ಜನ. ಇವರ ಪೈಕಿ 16 ಮಂದಿ ವಿದೇಶೀಯರು. ಈ ಪೈಕಿ ಇಂಡೋನೇಷ್ಯಾದವರು 7, ಥಾಯ್ಲೆಂಡ್​ನವರು 9 ಜನ. ಇನ್ನುಳಿದಂತೆ, ಅಲಹಾಬಾದ್​ ಸೆಂಟ್ರಲ್ ಯೂನಿವರ್ಸಿಟಿಯ ಪ್ರೊಫೆಸರ್​ ಒಬ್ಬರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಇವರಲ್ಲದೆ, ಜಮಾತಿಗಳಿಗೆ ವಸತಿ ವ್ಯವಸ್ಥೆಯ ಹೊಣೆಗಾರಿಕೆ ಹೊತ್ತುಕೊಂಡ ಸೈನ್ಸ್ ಡಿಪಾರ್ಟ್​ಮೆಂಟ್​ನ ಪ್ರೊಫೆಸರ್ ಮೊಹಮ್ಮದ್ ಶಾಹಿದ್​ ಕೂಡ ಸೆರೆಯಾಗಿದ್ದಾರೆ. ನಗರದ ವಿವಿಧೆಡೆ ಜಮಾತಿಗಳಿಗೆ ರಹಸ್ಯವಾಗಿ ವಸತಿ ಒದಗಿಸುತ್ತಿದ್ದ ಆರೋಪದ ಮೇಲೆ 12 ಜನರನ್ನು ಬಂಧಿಸಲಾಗಿದೆ.
ಬಂಧಿತ ಇಂಡೋನೇಷ್ಯಾದ ತಬ್ಲಿಘಿಗಳ ಪೈಕಿ ಒಬ್ಬಾತನಿಗೆ ಈ ಹಿಂದೆ ಕರೊನಾ ಪಾಸಿಟಿವ್ ಆಗಿತ್ತು. ಬಳಿಕ ನೆಗೆಟಿವ್ ಬಂದ ಕಾರಣ ಎರಡು ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. (ಏಜೆನ್ಸೀಸ್)
COVID19 ರ ಅತ್ಯಂತ ಕೆಟ್ಟ ಪರಿಣಾಮ ಎದುರಿಸಲು ಸಜ್ಜಾಗಿ: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + eleven =
Remember me
