ಮುಂಬೈ:ಬ್ರೈಟ್‌ಕಾಮ್ ಗ್ರೂಪ್ ಲಿಮಿಟೆಡ್ ಷೇರುಗಳ ಮೇಲೆ ಬೆಟ್ಟಿಂಗ್ ಮಾಡುವ ಹೂಡಿಕೆದಾರರಿಗೆ ಕೆಟ್ಟ ಸುದ್ದಿ ಇದೆ. ವಾಸ್ತವವಾಗಿ, ಬ್ರೈಟ್‌ಕಾಮ್ ಗ್ರೂಪ್‌ನ ಷೇರುಗಳಲ್ಲಿನ ವ್ಯಾಪಾರವನ್ನು ಜೂನ್ 14, 2024 ರಿಂದ ಸ್ಥಗಿತಗೊಳಿಸಲಾಗುವುದು ಎಂದು ನ್ಯಾಷನಲ್​ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಸುತ್ತೋಲೆಯಲ್ಲಿ ಪ್ರಕಟಿಸಿದೆ. ಈ ಸುತ್ತೋಲೆಯ ನಂತರ, ಬ್ರೈಟ್‌ಕಾಮ್ ಗ್ರೂಪ್‌ನ ಷೇರುಗಳಲ್ಲಿ ದೊಡ್ಡ ಕುಸಿತ ಕಂಡುಬಂದಿದೆ. ವಾರದ ಮೂರನೇ ವಹಿವಾಟಿನ ದಿನವಾದ ಬುಧವಾರ, ಈ ಷೇರುಗಳ ಬೆಲೆ 5% ನಷ್ಟು ಕುಸಿದು, ಲೋವರ್​ ಸರ್ಕ್ಯೂಟ್ ಹಿಟ್​ ಆದವು. ಈ ಮೂಲಕ ಷೇರು ಬೆಲೆ 12.27 ರೂ. ಮುಟ್ಟಿತು.
ಮೇ 13, 2024 ರಂದು, ಈ ಷೇರಿನ ಬೆಲೆ ರೂ 12.19 ರ ಕನಿಷ್ಠ ಮಟ್ಟವನ್ನು ಮುಟ್ಟಿತ್ತು. ಇದು ಷೇರುಪೇಟೆಯಲ್ಲಿ 52 ವಾರಗಳ ಕನಿಷ್ಠ ಬೆಲೆಯಾಗಿದೆ. 2022 ರಲ್ಲಿ ಈ ಷೇರಿನ ಬೆಲೆ ರೂ 100 ಕ್ಕಿಂತ ಹೆಚ್ಚಿತ್ತು.
ಈ ಷೇರಿನ ವ್ಯಾಪಾರವನ್ನು ಜೂನ್ 14, 2024 ರಿಂದ ಸ್ಥಗಿತಗೊಳಿಸಲಾಗುತ್ತದೆ. ಕಂಪನಿಯು ಮಾಸ್ಟರ್ ಸುತ್ತೋಲೆಯನ್ನು ಅನುಸರಿಸುವವರೆಗೆ ಈ ಅಮಾನತು ಮುಂದುವರಿಯುತ್ತದೆ. ಎನ್‌ಎಸ್‌ಇ ಪ್ರಕಾರ, ಬ್ರೈಟ್‌ಕಾಮ್ ಗ್ರೂಪ್ 2015 ರ ಸೆಬಿ (ಪಟ್ಟಿ ಹೊಣೆಗಾರಿಕೆಗಳು ಮತ್ತು ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ನಿಯಮಾವಳಿಗಳನ್ನು ಎರಡು ಸತತ ತ್ರೈಮಾಸಿಕಗಳಿಗೆ ಅಂದರೆ ಸೆಪ್ಟೆಂಬರ್ 30, 2023 ಮತ್ತು ಡಿಸೆಂಬರ್ 31, 2023 ರವರೆಗೆ ಅನುಸರಿಸಿಲ್ಲ.
ಪ್ರಸಿದ್ಧ ಹೂಡಿಕೆದಾರ ಶಂಕರ್ ಶರ್ಮಾ ಅವರು ಡಿಸೆಂಬರ್ 2023 ರ ತ್ರೈಮಾಸಿಕದ ಕೊನೆಯಲ್ಲಿ ಬ್ರೈಟ್‌ಕಾಮ್ ಗ್ರೂಪ್‌ನಲ್ಲಿ ಅಂದಾಜು 2.3 ಕೋಟಿ ಷೇರುಗಳನ್ನು ಅಥವಾ ಶೇಕಡಾ 1.14 ಪಾಲನ್ನು ಹೊಂದಿದ್ದಾರೆ. ಕಂಪನಿಯು ತನ್ನ ಮಾರ್ಚ್ ತ್ರೈಮಾಸಿಕ ಷೇರುದಾರರ ಮಾದರಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಫೆಬ್ರವರಿ ತಿಂಗಳಲ್ಲಿ, ಷೇರು ಮಾರುಕಟ್ಟೆಯನ್ನು ನಿಯಂತ್ರಿಸುವ ಸಂಸ್ಥೆಯಾದ ಸೆಬಿ ಬ್ರೈಟ್‌ಕಾಮ್ ಗ್ರೂಪ್ ವಿರುದ್ಧದ ಕ್ರಮವನ್ನು ಸಡಿಲಿಸಲು ನಿರಾಕರಿಸಿದೆ. ವಾಸ್ತವವಾಗಿ, ಆದ್ಯತೆಯ ಆಧಾರದ ಮೇಲೆ ಷೇರುಗಳ ಹಂಚಿಕೆಯಲ್ಲಿ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಗುಂಪು ಪ್ರವರ್ತಕ ಸುರೇಶ್ ಕುಮಾರ್ ರೆಡ್ಡಿ ಅವರನ್ನು ಷೇರು ಮಾರುಕಟ್ಟೆಯಿಂದ ನಿಷೇಧಿಸಲಾಗಿದೆ. ಫೆಬ್ರವರಿಯಲ್ಲಿ ಈ ನಿಷೇದ ಸಡಿಸಲಗೊಳಿಸಲು ಸೆಬಿ ನಿರಾಕರಿಸಿತ್ತು. ಇದಲ್ಲದೆ, ಪ್ರಮೋಟರ್ ರೆಡ್ಡಿ ಯಾವುದೇ ಕಂಪನಿಯ ಆಡಳಿತ ಮಂಡಳಿಗೆ ಸೇರದಂತೆ ನಿರ್ಬಂಧ ಹೇರಲಾಗಿತ್ತು. ಆಗಸ್ಟ್ 2023 ರಲ್ಲಿ ಸೆಬಿಯ ಕಟ್ಟುನಿಟ್ಟಿನ ನಂತರ, ಬ್ರೈಟ್‌ಕಾಮ್ ಗ್ರೂಪ್‌ನ ಅಧ್ಯಕ್ಷ ಸುರೇಶ್ ರೆಡ್ಡಿ ಮತ್ತು ಸಿಎಫ್‌ಒ ನಾರಾಯಣರಾಜು ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ.

3 ದಿನಗಳ ಗೂಳಿಯ ಓಟಕ್ಕೆ ಬ್ರೇಕ್​: ಅಲ್ಪ ಕುಸಿತ ಕಂಡ ಷೇರುಪೇಟೆ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twelve + 6 =
Remember me
