ನೋಯ್ಡಾ: ಜಹಾಂಗೀರ್​ ಪುರದ ಜೇವರ್ ಪ್ರದೇಶದಲ್ಲಿ 23 ವರ್ಷದ ಯುವಕನೊಬ್ಬ ಮನೆ ಮಾಲೀಕನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದು, ಕೊಲೆ ಬೆದರಿಕೆ ಹಾಕಿರುವುದಾಗಿ ಗುರುವಾರ ದೂರು ದಾಖಲಾಗಿದೆ. ಆರೋಪಿಯನ್ನು ವಿಶಾಲ್ ಎಂದು ಗುರುತಿಸಲಾಗಿದೆ. ಆತನ ಕಟ್ಟಡ ನಿರ್ಮಾಣ ಕಾರ್ಮಿಕ. ಆರೋಪಿ ವಿಶಾಲ್ ಇವರ ಮನೆಯಲ್ಲೇ ಬಾಡಿಗೆಗೆ ಇದ್ದಾನೆ.
ಮನೆ ಮಾಲೀಕನ ಪತ್ನಿ ಕೊಟ್ಟ ದೂರಿನ ವಿವರ ಹೀಗಿದೆ- ಪತಿ ಕೆಲಸದ ನಿಮಿತ್ತ ರಾಜಸ್ಥಾನಕ್ಕೆ ಹೋಗಿದ್ದು, ಲಾಕ್​ಡೌನ್ ಆಗಿರುವ ಕಾರಣ ಹಿಂದಿರುಗಿಲ್ಲ. ಏಪ್ರಿಲ್​ನಿಂದ ಅವರು ಅಲ್ಲೇ ಬಾಕಿಯಾಗಿದ್ದಾರೆ. ಮನೆಯಲ್ಲಿ ತಾನು ಮತ್ತು ಇಬ್ಬರು ಮಕ್ಕಳಷ್ಟೇ ಇದ್ದು, ಅತ್ಯಾಚಾರದ ಘಟನೆ ನಡೆದು ಕೆಲವು ದಿನಗಳಾಗಿವೆ. ವಿಶಾಲ್​ನ ನಡವಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು ಇದೇ ಕಾರಣಕ್ಕೆ ದೂರು ದಾಖಲಿಸುತ್ತಿದ್ದೇನೆ.
ಇದನ್ನೂ ಓದಿ:VIDEO: ಭವಾನಿಪಟ್ಟಣದಲ್ಲಿ ಕರಡಿ ದಾಳಿಗೆ ಜನ ಕಂಗಾಲು
ಅಂದು ಆತ ಬಾಡಿಗೆ ಕೊಡುವುದಕ್ಕೆ ಮನೆಗೆ ಬಂದಿದ್ದ. ಹಾಗೆ ಬಂದವನು ಚಹಾ ಸ್ವೀಕರಿಸಿದ್ದು, ನನ್ನ ಚಹಾಕ್ಕೆ ಏನೋ ಬೆರೆಸಿದ. ಅದನ್ನು ಕುಡಿದ ನಂತರ ನನಗೆ ಅರೆಬೋಧಾವಸ್ಥೆಗೆ ತಪ್ಪಿದೆ. ಆಗ ಆತ ನನ್ನ ಮೈಮೇಲಿನ ಬಟ್ಟೆ ಕಳಚುತ್ತಿರುವ ಅನುಭವವಾಗಿದೆ. ಎಚ್ಚರವಾದಾಗ ಆಗಬಾರದ್ದು ಏನೋ ಆಗಿದೆ ಎಂಬುದು ಮನದಟ್ಟಾಗಿದೆ. ಈ ಬಗ್ಗೆ ಆತನಲ್ಲಿ ಕೇಳಿದಾಗ, ನನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ವಿಷಯ ಬಹಿರಂಗಪಡಿಸಿದರೆ ನಿನ್ನನ್ನೂ ಮತ್ತು ಇಬ್ಬರು ಮಕ್ಕಳನ್ನೂ ಸಾಯಿಸಿಬಿಡುತ್ತೇನೆ ಎಂದು ಕೊಲೆಬೆದರಿಕೆ ಹಾಕಿದ್ದಾನೆ.
ಇದನ್ನೂ ಓದಿ:ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಐಸಿಸ್​ ಉಗ್ರ
ಮಹಿಳೆ ನೀಡಿದ ಈ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಯ ಪತ್ತೆಗಾಗಿ ಶೋಧ ನಡೆಸಿದ್ದಾರೆ. (ಏಜೆನ್ಸೀಸ್)
‘ಮುಂಬೈ ಬಾಯಿ’ ಖತೀಜಾ ತಗುಲಾಕ್ಕೊಂಡ್ಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 10 =
Remember me
