ಪ್ರಯಾಗ್​ರಾಜ್​ :ಉತ್ತರಪ್ರದೇಶದ ಪ್ರಯಾಗ್​ರಾಜ್​ ಜಿಲ್ಲೆಯಲ್ಲಿ ‘ಭೂತೋಚ್ಛಾಟನೆ’ ನಡೆಸುತ್ತಿದ್ದ 30 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಸಂಗಂ ನದಿಯ ತೀರದಲ್ಲಿ ಡ್ರಂಗಳನ್ನು ಬಾರಿಸುತ್ತಾ ಮಹಿಳೆಯರ ಕೈಕಾಲು ಕಟ್ಟಿ, ಚಾಟಿಯಿಂದ ಹೊಡೆಯುತ್ತ ಭೂತ ಬಿಡಿಸುವ ಪ್ರಯತ್ನ ಮಾಡುತ್ತಿದ್ದರು ಎನ್ನಲಾಗಿದೆ!
ಉ.ಪ್ರ.ದ ಮಹೋಬಾ ಮತ್ತು ಛತ್ತರಪುರ ಜಿಲ್ಲೆಗಳ ನಿವಾಸಿಗಳಾದ ಆರೋಪಿಗಳು, ಮಹಿಳೆಯರನ್ನು ಹೊಡೆಯುತ್ತ, ಕೂದಲು ಹಿಡಿದು ಎಳೆಯುತ್ತಿದ್ದರು. ನಿಂಬೆಹಣ್ಣು, ಕುಂಕುಮ ಮುಂತಾದ ಸಾಮಗ್ರಿಗಳನ್ನು ಹಿಡಿದು ಅವರ ಮೈಮೇಲೆ ಬಂದಿರುವ ದುಷ್ಟ ಶಕ್ತಿಗಳನ್ನು ಓಡಿಸುವುದಾಗಿ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಹಣಕ್ಕಾಗಿ ಅಪಹರಿಸಿ ಕೊಲೆಗೈದರು, ಕರೊನಾ ರೋಗಿ ಎಂಬಂತೆ ಹೂತುಹಾಕಿದರು!
ಇವರನ್ನು ಗಮನಿಸಿದ ಕೆಲವು ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದರು. ದರಗಂಜ್​ ಪೊಲೀಸರು ಸ್ಥಳಕ್ಕೆ ತಲುಪಿ, ನಡೆಸುತ್ತಿದ್ದ ಕಾರ್ಯವನ್ನು ನಿಲ್ಲಿಸಿ ಎಂದರೂ ಯಾರೂ ಕೇಳಲಿಲ್ಲ. ನಂತರ ಇದ್ದ 30 ಜನರನ್ನೂ ಬಂಧಿಸಿ ಠಾಣೆಗೆ ಕರೆದೊಯ್ಯಲಾಯಿತು ಎಂದು ಇನ್​​ಸ್ಪೆಕ್ಟರ್ ಅರವಿಂದ್ ಕುಮಾರ್ ಸಿಂಗ್ ಹೇಳಿದ್ದಾರೆ.(ಏಜೆನ್ಸೀಸ್)
ಕರೊನಾ 3ನೇ ಅಲೆ: ಈ ಎರಡು ಸಮಸ್ಯೆ ಇರೋ ಮಕ್ಕಳ ಬಗ್ಗೆ ಇರಲಿ ಎಚ್ಚರ!

ಕ್ರೀಡಾಂಗಣದ ಒಳಹೊಕ್ಕು ಅಥ್ಲೆಟಿಕ್​ ಟ್ರ್ಯಾಕನ್ನು ಆಕ್ರಮಿಸಿಕೊಂಡ ವಿಐಪಿ ಕಾರುಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 2 =
Remember me
