ಮುಂಬೈ:ಸೈಬರ್ ವಂಚಕರು ಬೀಸಿದ ಮೋಸದ ಬಲೆಗೆ ಸಿಲುಕಿ ಮಹಿಳೆಯೊಬ್ಬರು ಲಕ್ಷಾಂತರ ರೂ.ಕಳೆದುಕೊಂಡಿದ್ದಾರೆ.
ಇದನ್ನೂ ಓದಿ:ಹಲ್ಲೆ ಪ್ರಕರಣ: ಕೋರ್ಟ್ ನಲ್ಲಿ ಕಣ್ಣೀರಿಟ್ಟ ಸ್ವಾತಿ ಮಲಿವಾಲ್
ಮುಂಬೈನ ಭಾಯಂದರ್ ಬಳಿಯ ಉತ್ತಾನ್‌ನ ಕರಾವಳಿ ಪ್ರದೇಶದಲ್ಲಿ ವಾಸಿಸುವ 36 ವರ್ಷದ ಮಹಿಳೆಗೆ ಷೇರು ವ್ಯಾಪಾರದಲ್ಲಿ ಲಾಭ ಪಡೆಯಲು ಸಲಹೆಗಳನ್ನು ನೀಡುವ ನೆಪದಲ್ಲಿ ವಂಚಕರು 11.76 ಲಕ್ಷ ರೂ. ವಂಚಿಸಿದ್ದಾರೆ.
ಶೇರ್ ಟ್ರೇಡಿಂಗ್‌ಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದ ರೀಲ್ ಗಮನಿಸಿ, ಅದಕ್ಕೆ ಸಂಬಂಧಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿದೆ. ಆಗ ನನ್ನನ್ನು ಅಪರಿಚಿತ ವಾಟ್ಸಾಪ್ ಗುಂಪಿಗೆ ಸೇರಿಸಿಕೊಳ್ಳಲಾಯಿತು, ಅಲ್ಲಿ ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಉಚಿತ ವ್ಯಾಪಾರ ಸಲಹೆಗಳನ್ನು ನೀಡುವ ಮೂಲಕ ಹೂಡಿಕೆ ಮಾಡಲು ಪ್ರೇರೇಪಿಸಲಾಯಿತು ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ತನ್ನ ವೈಯಕ್ತಿಕ ವಾಟ್ಸಾಪ್ ಸಂಖ್ಯೆಯಲ್ಲಿ ನಿರ್ವಾಹಕರೊಬ್ಬರೊಂದಿಗೆ ಸಂವಹನ ನಡೆಸುತ್ತಿರುವಾಗ ಮಹಿಳೆಗೆ ವಂಚಕರು ಭಾರಿ ಲಾಭ ಗಳಿಸಲು ಒದಗಿಸಿದ ಟ್ರೇಡಿಂಗ್ ಅಪ್ಲಿಕೇಶನ್ ಅನ್ನು ಸ್ಥಾಪಿಸಲು ಕೇಳಲಾಯಿತು. ಮಹಿಳೆ ವಂಚಕರ ದುಷ್ಟ ತಂತ್ರಗಳಿಗೆ ಬಲಿಯಾಗಿದ್ದು, ಈ ವರ್ಷದ ಏಪ್ರಿಲ್ 5 ರಿಂದ ಮೇ 16 ರ ನಡುವಿನ 20 ದಿನಗಳ ಅವಧಿಯಲ್ಲಿ ಹತ್ತು ವಹಿವಾಟುಗಳ ಮೂಲಕ ಒಟ್ಟು 11.76 ಲಕ್ಷ ರೂ.ಗಳನ್ನು ನಿಗದಿತ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ಹೂಡಿಕೆಯು ಸುಮಾರು 45 ಲಕ್ಷ ರೂಪಾಯಿ ಲಾಭವನ್ನು ತಂದುಕೊಡುತ್ತದೆ ಎಂದು ಅಪ್ಲಿಕೇಶನ್ ನಲ್ಲಿ ಪ್ರದರ್ಶಿಸಲಾಗಿತ್ತು. ಆದರೆ ಹಣ ಹಿಂಪಡೆಯಲು ಸಾಧ್ಯವಾಗಲಿಲ್ಲ. ಮತ್ತೆ ಅಡ್ಮಿನ್ ಅನ್ನು ಸಂಪರ್ಕಿಸಿದೆ. ಆಕೆ ತೆರಿಗೆಗೆ 30 ಪ್ರತಿಶತದಷ್ಟು ಅಂದರೆ 16 ಲಕ್ಷ ರೂ.ಗಳನ್ನು ಪಾವತಿಸಿದರೆ ಮಾತ್ರ ಪೂರ್ತಿ ಹಣ ಹಿಂಪಡೆಯಲು ಸಾಧ್ಯ ಎಂದು ಹೇಳಿದರು. ಆದರೆ ನಾನದನ್ನು ನಿರಾಕರಿಸಿದಾಗ ಅವರು ನನ್ನ ಸಂಖ್ಯೆಯನ್ನು ನಿರ್ಬಂಧಿಸಿದ್ದಾರೆ. ಅಷ್ಟೇ ಅಲ್ಲ ಗುಂಪಿನಿಂದ ತೆಗೆದುಹಾಕಲಾಗಿದೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.
ಪುಣೆ ಕಾರು ಅಪಘಾತ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್.. ವರದಿ ಬದಲಿಸಿದ ವೈದ್ಯರು!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:one + 8 =
Remember me
