ಅಹಮದಾಬಾದ್:ಗುಜರಾತ್​ ಎಟಿಎಸ್​ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ನಿಷೇಧಿತ ಇಸ್ಲಾಮಿಕ್​ ಸ್ಟೇಟ್ ಆಫ್ ಖೊರಾಸನ್ ಪ್ರಾವಿನ್ಸ್(ISKP) ಮಾಡ್ಯೂಲ್​​ಅನ್ನು ಪೋರ್​ಬಂದರ್​ ಹಾಗೂ ಸೂರತ್​ನಲ್ಲಿ ಭೇದಿಸಲಾಗಿದೆ.
ಬಂಧಿತರ ಪೈಕಿ ಓರ್ವ ಸೂರತ್​ ಮೂಲದ ಮಹಿಳೆ ಸೇರಿದಂತೆ ಜಮ್ಮು-ಕಾಶ್ಮೀರ ಮೂಲದ ಮೂವರು ಪುರುಷರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಟಿಎಸ್​ನ ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
ನಿಷೇಧಿತ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಎಟಿಎಸ್​ ಅಧಿಕಾರಿಗಳು ಪೋರ್​ಬಂದರ್​​ ಹಾಗೂ ಸೂರತ್​ನಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಬಂಧಿತರ ಬಳಿ ಇದ್ದ ಜಿಹಾದಿ ಸಾಹಿತ್ಯ ಇರುವ ಪೋಸ್ಟರ್​ಗಳನ್ನು ವಶಕ್ಕೆ ಪಡೆಯಲಾಗಿದೆ.
#WATCH| Porbandar, Gujarat: Visuals of the accused arrested in Gujarat ATS operation.https://t.co/e7fx7IN9AKpic.twitter.com/LskSQNYEzW— ANI (@ANI)June 10, 2023

#WATCH| Porbandar, Gujarat: Visuals of the accused arrested in Gujarat ATS operation.https://t.co/e7fx7IN9AKpic.twitter.com/LskSQNYEzW
ಬಂಧಿತರು ಫಿಶಿಂಗ್​ ಬೋಟ್​ ಮೂಲಕ ಅಂತರಾಷ್ಟ್ರೀಯ ಸಮುದ್ರ ಗಡಿಯನ್ನು ದಾಟಿ ಇರಾನ್​ ಮೂಲಕ ಅಫ್ಘಾನಿಸ್ತಾನ ತಲುಪಲು ಯೋಚಿಸಿದ್ದರು. ಶುಕ್ರವಾರ ಬೆಳಗ್ಗೆ ಆರೋಪಿಗಳು ಪೋರ್​ಬಂದರ್​ನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ದೊರೆತ ಬೆನ್ನಲ್ಲೇ ದಾಳಿ ಮಾಡಿ ವಶಕ್ಕೆ ಪಡೆಯಲಾಗಿದೆ ಎಂದು ಡಿಜಿಪಿ ವಿಕಾಸ್​ ಸಹಾಯ್​ ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರಕರಣ ಇತ್ಯರ್ಥವಾದರೆ ಮಾತ್ರ ಏಷ್ಯನ್​ ಗೇಮ್ಸ್​ನಲ್ಲಿ ಭಾಗಿ: ಕುಸ್ತಿಪಟುಗಳು
ಬಂಧಿತರನ್ನು ಜಮ್ಮು-ಕಾಶ್ಮೀರ ಮೂಲದ ಉಬೇದ್​ ನಾಸೀರ್​ ಮಿರ್​, ಹನನ್ ಹಯಾತ್ ಶೋಲ್ ಮತ್ತು ಮೊಹಮ್ಮದ್ ಹಾಜಿಮ್ ಶಾ, ಸುಮೇರಾಬಾನು ಹನೀಫ್ ಮಾಲೆಕ್ ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ISKPಯ ಅಬು ಹಮ್ಜಾ ಎಂಬ ಹ್ಯಾಂಡಲರ್​ ತಮಗೆ ತರಭೇತಿ ನೀಡುತ್ತಿದ್ದ ಎಂದು ಹೇಳಿದ್ದಾರೆ.
ಬಂಧಿತರಿಂದ ಹಲವು ದಾಖಲೆಗಳು, ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಲಯದಲ್ಲಿ ಆರೋಪಿಗಳನ್ನು ಹಾಜರುಪಡಿಸಲಾಗುವುದು ಎಂದು ಡಿಜೆಪಿ ವಿಕಾಸ್​ ಸಹಾಯ್​ ತಿಳಿಸಿದ್ದಾರೆ.
#WATCH| Gujarat Anti-terrorist Squad arrests 4 persons, with links to international terror body from Porbandar. A special team of ATS was active for the past few days for special operations in Porbandar and surrounding areas: ATS Sourceshttps://t.co/CZOsrKlHK4pic.twitter.com/64MPsT3Jug— ANI (@ANI)June 10, 2023

#WATCH| Gujarat Anti-terrorist Squad arrests 4 persons, with links to international terror body from Porbandar. A special team of ATS was active for the past few days for special operations in Porbandar and surrounding areas: ATS Sourceshttps://t.co/CZOsrKlHK4pic.twitter.com/64MPsT3Jug
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 7 =
Remember me
