ನವದೆಹಲಿ :ಭಾರತದಲ್ಲಿ ಕಳೆದ ಜನವರಿ ತಿಂಗಳಿಂದ ಕರೊನಾ ಲಸಿಕಾ ಅಭಿಯಾನ ಆರಂಭವಾಗಿದ್ದು, ಈವರೆಗೆ 40 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ 60 ಜನರಿಗೆ ಮಾತ್ರ ಗಂಭೀರವಾದ ಅಡ್ಡಪರಿಣಾಮಗಳ ಪ್ರಸಂಗಗಳು ಉಂಟಾಗಿವೆ ಎಂದು ಲಸಿಕೆಯ ಅಡ್ಡಪರಿಣಾಮಗಳ ಅಧ್ಯಯನ ಸಮಿತಿಯು ವರದಿ ನೀಡಿದೆ.
ನಾಷನಲ್ ಅಡ್ವರ್ಸ್​ ಇವೆಂಟ್ಸ್​ ಫಾಲೋಯಿಂಗ್ ಇಮ್ಯುನೈಸೇಷನ್ ಕಮಿಟಿಯು ಕರೊನಾ ಲಸಿಕೆ ಸಂಬಂಧಿಸಿದಂತೆ ಮೇ 27 ರಂದು ಅಧ್ಯಯನ ಪೂರ್ಣಗೊಳಿಸಿದ್ದು, ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ. ಅದರನ್ವಯ ಒಟ್ಟು 60 ಜನರಿಗೆ ಲಸಿಕೆ ಪಡೆದ ನಂತರ ಗಂಭೀರ ಪರಿಣಾಮ ಉಂಟಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಮಣಿಪುರದ ಚಳುವಳಿಗಾರ ಲೈಚೊಂಬಂ ಎರೆಂದ್ರೊ ಬಿಡುಗಡೆಗೆ ಸುಪ್ರೀಂ ಆದೇಶ
ಈ ಪ್ರಕರಣಗಳಲ್ಲಿ 55 ಜನರಿಗೆ ಲಸಿಕೆಯ ಕಾರಣದಿಂದ ಅಡ್ಡಪರಿಣಾಮ ಉಂಟಾಗಿದ್ದು, 36 ಜನರಿಗೆ ಆತಂಕ-ಸಂಬಂಧೀ ಪ್ರತಿಕ್ರಿಯೆ ಉಂಟಾಗಿದೆ ಮತ್ತು 18 ಜನರಿಗೆ ಉತ್ಪನ್ನ-ಸಂಬಂಧೀ ಪರಿಣಾಮವಾಗಿದೆ. ಒಬ್ಬರಲ್ಲಿ ಎರಡೂ ಬಗೆಯ ಪರಿಣಾಮ ಕಂಡುಬಂದಿದೆ. ಉಳಿದ 5 ಪ್ರಕರಣಗಳಲ್ಲಿ ಲಸಿಕೆಗೆ ಅಸಂಬದ್ಧವಾದ ಪರಿಣಾಮಗಳು ಕಂಡುಬಂದಿದ್ದು, ಒಂದು ಸಾವು ಸಂಭವಿಸಿದೆ. ಸಾವಿನ ಪ್ರಕರಣವನ್ನು ‘ಕಾಕತಾಳೀಯ ಘಟನೆ’ ಎಂದು ನಿರ್ಧರಿಸಲಾಗಿದ್ದು, ಲಸಿಕೆ ಪಡೆದ ನಂತರ ಸಂಭವಿಸಿದ್ದರೂ ಆ ಸಾವಿಗೆ ಸ್ಪಷ್ಟವಾದ ಅನ್ಯ ಕಾರಣವಿತ್ತು ಎಂದು ಸಮಿತಿಯ ವರದಿಯಲ್ಲಿ ಹೇಳಲಾಗಿದೆ.
ಈವರೆಗೆ ಕಂಡುಬಂದಿರುವ ಅಲ್ಪಪ್ರಮಾಣದ ಅಪಾಯಕ್ಕೆ ಹೋಲಿಸಿದರೆ, ಕರೊನಾ ಲಸಿಕೆಯ ಒಟ್ಟಾರೆ ಉಪಯುಕ್ತತೆಯು ಬಹಳಷ್ಟಿದೆ ಎಂದು ಹೇಳಿರುವ ಸಮಿತಿಯು, ಮುನ್ನೆಚ್ಚರಿಕೆಗಾಗಿ, ಉಂಟಾಗುವ ಯಾವುದೇ ತೊಂದರೆಯನ್ನು ಆಗಿಂದಾಗ್ಗೆ ವಿಶ್ಲೇಷಿಸಲಾಗುತ್ತಿದೆ ಎಂದಿದೆ.(ಏಜೆನ್ಸೀಸ್)
3ನೇ ಅಲೆ ಬರುತ್ತಿದೆ… ಮೈಮರೆತು ಜನಜಾತ್ರೆ ಮಾಡಬೇಡಿ: ಐಎಂಎ ಎಚ್ಚರಿಕೆ

ಟೋಕಿಯೋ ಒಲಂಪಿಕ್ಸ್: ಕುದುರೆ ಸವಾರಿಯ ವಿಶಿಷ್ಟ ಸ್ಪರ್ಧೆಗೆ ಬೆಂಗಳೂರಿಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 17 =
Remember me
