ಮುಂಬೈ:ಮಾರ್ಚ್ 19 ರಂದು ಹಲವಾರು ಪ್ರಮುಖ ಕಂಪನಿಗಳು ಮಹತ್ವದ ಹಣಕಾಸು ಕ್ರಮಗಳನ್ನು ಘೋಷಿಸಿವೆ. ಟಿವಿಎಸ್ ಮೋಟಾರ್ ಕಂಪನಿ ಲಿಮಿಟೆಡ್, ಕಾಮಾ ಹೋಲ್ಡಿಂಗ್ಸ್ ಲಿಮಿಟೆಡ್, ಕೆಇಐ ಇಂಡಸ್ಟ್ರೀಸ್ ಲಿಮಿಟೆಡ್, ಸುದರ್ಶನ್ ಕೆಮಿಕಲ್ ಇಂಡಸ್ಟ್ರೀಸ್ ಲಿಮಿಟೆಡ್, ಕೋಲಾಬ್ ಕ್ಲೌಡ್ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್, ಕೇಸರ್ ಇಂಡಿಯಾ ಲಿಮಿಟೆಡ್ ಮತ್ತು ರಾಮ ಸ್ಟೀಲ್ ಟ್ಯೂಬ್ಸ್ ಲಿಮಿಟೆಡ್ ಷೇರುಗಳು ಮಂಗಳವಾರ ಗಮನ ಸೆಳೆದಿವೆ.
ಟಿವಿಎಸ್ ಮೋಟರ್ ಕಂಪನಿಯು ತನ್ನ ಷೇರುದಾರರಿಗೆ ಪ್ರತಿ ಷೇರಿಗೆ ರೂ 8.00 ರ ಮಧ್ಯಂತರ ಡಿವಿಡೆಂಡ್ (ಲಾಭಾಂಶ) ಘೋಷಿಸಿದೆ. ಮಾರ್ಚ್ 31, 2024 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಇದಕ್ಕೆ ರೂ 380 ಕೋಟಿಗಳನ್ನು ವ್ಯಯಿಸಲಿದೆ. ಇದೇ ರೀತಿ, ಕಾಮಾ ಹೋಲ್ಡಿಂಗ್ಸ್ ಕೂಡ ಪ್ರತಿ ಈಕ್ವಿಟಿ ಷೇರಿಗೆ ರೂ 19.00 ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ, ಕೆಇಐ ಇಂಡಸ್ಟ್ರೀಸ್ ಮತ್ತು ಸುದರ್ಶನ್ ಕೆಮಿಕಲ್ ಇಂಡಸ್ಟ್ರೀಸ್ ಪ್ರತಿ ಈಕ್ವಿಟಿ ಷೇರಿಗೆ ಕ್ರಮವಾಗಿ ರೂ 3.50 ಮತ್ತು ರೂ 3.60 ರ ಮಧ್ಯಂತರ ಲಾಭಾಂಶವನ್ನು ಘೋಷಿಸಿವೆ.
ಈ ಡಿವಿಡೆಂಡ್‌ಗಳಿಗೆ ಷೇರುದಾರರ ಅರ್ಹತೆಯನ್ನು ನಿರ್ಧರಿಸಲು ಎಲ್ಲಾ ಏಳು ಕಂಪನಿಗಳು ದಾಖಲೆಯ ದಿನಾಂಕವನ್ನು ಮಾರ್ಚ್ 19 ಎಂದು ನಿಗದಿಪಡಿಸಿವೆ, ಈ ಮಾನದಂಡಗಳನ್ನು ಪೂರೈಸುವ ಹೂಡಿಕೆದಾರರು ಡಿವಿಡೆಂಡ್​ ಪಡೆಯಲಿದ್ದಾರೆ.
ಡಿವಿಡೆಂಡ್‌ಗಳ ಜೊತೆಗೆ, ಕೆಲವು ಕಂಪನಿಗಳು ಸ್ಟಾಕ್ ಸ್ಪ್ಲಿಟ್‌ ಮಾಡಲು ಮತ್ತು ಬೋನಸ್ ಷೇರು ವಿತರಿಸಲು ಮುಂದಾಗಿವೆ. ಕೊಲಾಬ್ ಕ್ಲೌಡ್ ಪ್ಲಾಟ್‌ಫಾರ್ಮ್‌ ಹೂಡಿಕೆದಾರರಿಗೆ ಲಿಕ್ವಿಡಿಟಿ ಮತ್ತು ಪ್ರವೇಶವನ್ನು ಹೆಚ್ಚಿಸುವ ಗುರಿಯೊಂದಿಗೆ ಪ್ರತಿ ರೂ 10 ಮುಖಬೆಲೆಯ ಇಕ್ವಿಟಿ ಷೇರನ್ನು ರೂ 2 ಮುಖಬೆಲೆಯ ಸ್ಟಾಕ್ ಆಗಿ ವಿಭಜನೆ ಮಾಡುವುದಾಗಿ ಘೋಷಿಸಿದೆ. ಇದಲ್ಲದೆ, ಕಂಪನಿಯು 1: 1 ಅನುಪಾತದಲ್ಲಿ ಬೋನಸ್ ವಿತರಣೆಯನ್ನು ಘೋಷಿಸಿದೆ, ಇದು ಷೇರುದಾರರ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಕೇಸರ್ ಇಂಡಿಯಾ ಮತ್ತು ರಾಮ ಸ್ಟೀಲ್ ಟ್ಯೂಬ್‌ಗಳು ಕೂಡ ಬೋನಸ್​ ಷೇರುಗಳನ್ನು ಘೋಷಿಸಿವೆ. ಕೇಸರ್ ಇಂಡಿಯಾ 6:1 ರ ಅನುಪಾತದಲ್ಲಿ ಬೋನಸ್ ವಿತರಣೆಯನ್ನು ಘೋಷಿಸಿದೆ, ರಾಮ ಸ್ಟೀಲ್ ಟ್ಯೂಬ್ಸ್ 2: 1 ಅನುಪಾತವನ್ನು ಆಯ್ಕೆ ಮಾಡಿದೆ.
ಏಳು ಕಂಪನಿಗಳ ಈ ಕ್ರಮಗಳು ಷೇರು ಬೆಲೆಗಳು ಮತ್ತು ಹೂಡಿಕೆದಾರರ ಭಾವನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಡಿವಿಡೆಂಡ್ ಘೋಷಣೆಗಳು ಸಾಮಾನ್ಯವಾಗಿ ಹೂಡಿಕೆದಾರರನ್ನು ತಮ್ಮ ಹೂಡಿಕೆಯಿಂದ ನಿಯಮಿತ ಆದಾಯವನ್ನು ಪಡೆಯಲು ಆಕರ್ಷಿಸುತ್ತವೆ, ಆದರೆ ಸ್ಟಾಕ್ ವಿಭಜನೆಗಳು ಮತ್ತು ಬೋನಸ್ ಷೇರುಗಳು ಹೆಚ್ಚಿದ ವ್ಯಾಪಾರ ಚಟುವಟಿಕೆಗಳಿಗೆ ಮತ್ತು ಸಂಭಾವ್ಯ ಹೆಚ್ಚಿನ ಮೌಲ್ಯಮಾಪನಗಳಿಗೆ ಕಾರಣವಾಗಬಹುದು.

ಈ 6 ಬ್ಯಾಂಕಿಂಗ್ ಸ್ಟಾಕ್‌ಗಳಿಂದ ಷೇರುಗಳನ್ನು ಆಯ್ಕೆ ಮಾಡಿಕೊಳ್ಳಿ: ಷೇರು ಮಾರುಕಟ್ಟೆ ತಜ್ಞನ ಸಲಹೆ

ಸತತ 3 ದಿನಗಳ ಕಾಲ ಅಪ್ಪರ್ ಸರ್ಕ್ಯೂಟ್: ಪೇಟಿಎಂ ಷೇರು ರಾಕೆಟ್​ನಂತೆ ಏರುತ್ತಿರುವುದೇಕೆ?

ಇನ್ಫ್ರಾ ಕಂಪನಿಗೆ ಸಿಕ್ಕಿತು 3 ಹೊಸ ಆರ್ಡರ್‌: ಷೇರು ಬೆಲೆ ಅಪ್ಪರ್​ ಸರ್ಕ್ಯೂಟ್​ ಹಿಟ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − 12 =
Remember me
