ಕೊಯಮತ್ತೂರು:ಲಾಕ್​​ಡೌನ್​​ನಿಂದಾಗಿ ಬಂಧಿಯಾಗಿದ್ದ ಜಗತ್ತು ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಅದರೊಂದಿಗೆ ನಾವು ಜಗತ್ತನ್ನು ಗ್ರಹಿಸುವ ವಿಧಾನವೂ ಸುಧಾರಿಸುತ್ತಿದೆ.ವಿಕಸನವು ಸಾಕಷ್ಟು ವಿಭಿನ್ನ ಹಂತಗಳಲ್ಲಿ ನಡೆಯುತ್ತದೆ. ಇದರ ಆರಂಭದ ಗತಿ ನಿಧಾನವಾಗಿರಬಹುದೇನೋ, ಆದರೆ ಒಮ್ಮೆ ಅದು ವೇಗವನ್ನು ಪಡೆದುಕೊಂಡರೆ, ಅದು ಹಿನ್ನಡೆ ಸಾಧಿಸುವ ಅವಕಾಶ ತುಂಬ ಕಡಿಮೆಯೇ.
ಇದನ್ನೂ ಓದಿ:4 ರೂಪಾಯಿ ಏರಿತು ಪೆಟ್ರೋಲ್​, ಡೀಸೆಲ್ ಬೆಲೆ: ವಾರದುದ್ದಕ್ಕೂ ಏರಿದ್ದರ ಪರಿಣಾಮ
ಆದಾಗ್ಯೂ, ಇಲ್ಲೊಂದು ನ್ಯೂನತೆಯಿದೆ. ನಮ್ಮಲ್ಲಿ ಅರ್ಧದಷ್ಟು ಜನರು ಈ ಬದಲಾವಣೆಯನ್ನು ಸ್ವೀಕರಿಸಲು ಸಮರ್ಥರಾಗಿದ್ದರೆ, ಇಂಥ ಬದಲಾವಣೆಗಳ ಬಗ್ಗೆ ತಿಳಿದಿಲ್ಲದ ಇನ್ನೂ ಅರ್ಧದಷ್ಟು ಜನರಿದ್ದಾರೆ. ಅಂತಿಮವಾಗಿ ಅವುಗಳನ್ನು ಪರಿಚಯಿಸಿದಾಗ, ಅದು ಅವರಿಗೆ ಕಷ್ಟವಾಗಿ ಅದಕ್ಕೆ ಶೀಘ್ರ ಹೊಂದಿಕೊಳ್ಳಲೂ ಸಾಧ್ಯವಾಗದಿರಬಹುದು. ಅದೇನೇ ಇರಲಿ, ಈ ಬದಲಾವಣೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಲು, ಅದು ಅವರಿಗೆ ತುಂಬ ಪ್ರಯೋಜನಕಾರಿಯಾದುದು ಎಂದು ಮನವರಿಕೆ ಮಾಡಿಕೊಡುವುದು ನಮ್ಮ ಜವಾಬ್ದಾರಿ ಎಂದುಕೊಳ್ಳುತ್ತೇವೆ.ಅಂತಹ ಒಂದು ಉಪಕ್ರಮವು ಅಂತರ್ಜಾಲದಲ್ಲಿ ಹರಿದಾಡುತ್ತಿದೆ.ನಂಜಮ್ಮಾಳ್ ಎಂಬ 84 ವರ್ಷದ ಮಹಿಳೆ ರಾಜ್ಯದ ಗ್ರಾಮಸ್ಥರಲ್ಲಿ ಅಡುಗೆ ಉದ್ಯಾನ ಸಂಸ್ಕೃತಿಯನ್ನು ಉತ್ತೇಜಿಸಲು ಬಯಸಿದ್ದಾರೆ. ಅವರು ತಮ್ಮ ತೋಟದಲ್ಲಿ ಸಸಿಗಳನ್ನು ಬೆಳೆಸುತ್ತಿದ್ದು, ಅದನ್ನು ಉಚಿತವಾಗಿ ಗ್ರಾಮಸ್ಥರಿಗೆ ನೀಡಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ:  ಹೆರಿಗೆ ವೇಳೆ ಮಹಿಳೆಯರು ಸಾಯುವ ಅಪಾಯ ಹೆಚ್ಚು: ಡಬ್ಲ್ಯುಎಚ್​ಒ ಆಘಾತಕಾರಿ ವರದಿ
ತಮ್ಮ ಸ್ವಂತ ಹಿತ್ತಲಿನಲ್ಲೇ ಸಾವಯವ ಕೃಷಿಯನ್ನು ಉತ್ತೇಜಿಸಲು ನಂಜಮ್ಮಾಳ್ ಇದನ್ನು ಮಾಡಿದ್ದಾರೆ. “ಗ್ರಾಮಸ್ಥರು ತಮ್ಮದೇ ಆದ ಅಡಿಗೆ ತೋಟಗಳನ್ನು ಹೊಂದಬೇಕೆಂದು ಮತ್ತು ಸ್ವಂತ ಸಾವಯವ ತರಕಾರಿಗಳನ್ನು ಬೆಳೆಯಬೇಕೆಂದು ನಾನು ಬಯಸುತ್ತೇನೆ” ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ,ಅವರ ಈ ಉಪಕ್ರಮ ಯಶಸ್ವಿಯಾಗಿದೆ. ಅಂದಾಜು 100 ಕುಟುಂಬಗಳು ಈಗ ತಮ್ಮ ತೋಟಗಳಲ್ಲಿ ಸಾಯವಯ ತರಕಾರಿ ಬೆಳೆತ್ತಿವೆ. ಇನ್ನೂ ಕೆಲವು ಕುಟುಂಬಗಳು ಈ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದನ್ನು ನೋಡಬೇಕೆಂದು ಅವರು ಆಶಿಸಿದ್ದಾರೆ.
ಇದನ್ನೂ ಓದಿ:ಕುಕ್ಕರ್ ಒಳಗೆ ಸಿಕ್ಕಾಕ್ಕೊಳ್ತು ಪುಟ್ಟ ಬಾಲಕಿಯ ತಲೆ !
ಅಜ್ಜಿಯ ಈ ಉಪಕ್ರಮಕ್ಕೆ ನೆಟ್ಟಿಗರು ತಲೆದೂಗಿದ್ದಾರೆ. ಅವರ ಗಮನಾರ್ಹ ಪ್ರಯತ್ನಕ್ಕಾಗಿ ಮತ್ತು ಇಷ್ಟು ಇಳಿ ವಯಸ್ಸಿನಲ್ಲಿ ಅವರೆಷ್ಟು ಕ್ರಿಯಾಶೀಲರಾಗಿದ್ದಾರೆ ಎಂದು ಅವರನ್ನು ‘ಸೂಪರ್ ದಾದಿ’ ಎಂದು ಕರೆದಿದ್ದಾರೆ. ಕೆಲವರು ಅವರನ್ನು ‘ಮಾನವೀಯತೆಯ ಮೂರ್ತಿ’ ಎಂದು ಕರೆದಿದ್ದಾರೆ.
ರೈತರು ಬೇಕಾಗಿದ್ದಾರಂತೆ…!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 5 =
Remember me
