ಅಸ್ಸಾಂ:ದುಬೈನಲ್ಲಿ ಕಳವಾಗಿದ್ದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ ವಾಚ್ ಇಂದು(ಶನಿವಾರ) ಬೆಳಗ್ಗೆ ಅಸ್ಸಾಂನ ಶಿವಸಾಗರ್ ಜಿಲ್ಲೆಯಲ್ಲಿ ಸಿಕ್ಕಿದ್ದು, ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವಾಜಿದ್ ಹುಸೇನ್ ಬಂಧಿತ. ಈತ ದುಬೈನಲ್ಲಿರುವ ಯುಎಇ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಈ ಕಂಪನಿಯು ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ದಿ. ಡಿಯಾಗೋ ಮರಡೋನಾ ಅವರ ವಸ್ತುಗಳನ್ನು ಸಂಗ್ರಹಿಸುತ್ತಿತ್ತು. ಇತ್ತೀಚಿಗೆ ಡಿಯಾಗೋ ಮರಡೋನಾ ಅವರ ವಾಚ್​ ಕಳವಾಗಿತ್ತು. ದುಬೈನಲ್ಲಿ ಕೇಸ್​ ದಾಖಲಾಗಿತ್ತು. ಆರೋಪಿಯು ಕಳೆದ ಆಗಸ್ಟ್‌ನಲ್ಲಿ ತಂದೆಗೆ ಆರೋಗ್ಯ ಸರಿ ಇಲ್ಲವೆಂದು ರಜೆ ಮೇಲೆ ಅಸ್ಸಾಂಗೆ ವಾಪಸ್​ ಆಗಿದ್ದ.
ವಾಚ್​ ನಾಪತ್ತೆಯಾಗಿದ್ದರ ಹಿಂದೆ ವಾಜಿದ್​ ಮೇಲೆ ಅನುಮಾನಗೊಂಡ ದುಬೈ ಪೊಲೀಸರು ಭಾರತದ ಅಸ್ಸಾಂ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ವಾಜಿದ್​ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ದಾಳಿ ಮಾಡಿ ಪರಿಶೀಲಿಸಿದಾಗ ವಾಚ್​ ಪತ್ತೆಯಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ಜ್ಯೋತಿ ಮಹಂತ ತಿಳಿಸಿದ್ದಾರೆ.
ಉಭಯ ದೇಶಗಳ ಪೊಲೀಸ್ ಪಡೆಗಳ ನಡುವಿನ ಅಂತಾರಾಷ್ಟ್ರೀಯ ಸಮನ್ವಯವನ್ನು ಒಳಗೊಂಡ ಕಾರ್ಯಾಚರಣೆ ಇದಾಗಿದೆ. ಈ ವಾಚ್ ವಾಪಸ್ ನೀಡಲು ದುಬೈ ಪೊಲೀಸ್ ಮುಖ್ಯ ಕಚೇರಿಗೆ ಮಾಹಿತಿ ನೀಡಲಾಗಿದೆ. ಆರೋಪಿ ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತೆ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.
In an act of international cooperation@assampolicehas coordinated with@dubaipoliceHQthrough Indian federal LEA to recover a heritage@Hublotwatch belonging to legendary footballer Late Diego Maradona and arrested one Wazid Hussein. Follow up lawful action is being taken.pic.twitter.com/9NWLw6XAKz— Himanta Biswa Sarma (@himantabiswa)December 11, 2021
In an act of international cooperation@assampolicehas coordinated with@dubaipoliceHQthrough Indian federal LEA to recover a heritage@Hublotwatch belonging to legendary footballer Late Diego Maradona and arrested one Wazid Hussein. Follow up lawful action is being taken.pic.twitter.com/9NWLw6XAKz
ಅರ್ಜೆಂಟೀನಾದ ಫುಟ್​ಬಾಲ್​ ಆಟಗಾರ ಡಿಯಾಗೋ ಮರಡೋನಾ ಅವರು 2020ರ ನವೆಂಬರ್ 25ರಂದು ನಿಧನರಾದರು.
ಹಾವು ಕಚ್ಚಿ ತಂದೆ ಸಾವು: ನೋವಿನಲ್ಲೇ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಮೂವರು ಪುತ್ರಿಯರು, ಫೋಟೋ ನೋಡಿ ಭಾವುಕರಾದ ನೆಟ್ಟಿಗರು
ಬೆತ್ತದಿಂದ ಥಳಿಸಿ ಮಹಿಳೆಯನ್ನ ಕೊಂದ ಪೂಜಾರಿ! ಚನ್ನರಾಯಪಟ್ಟಣದಲ್ಲಿ ನಡೆಯಿತು ಘೋರ ಕೃತ್ಯ
https://www.vijayavani.net/a-tumkur-dogcubs-snake/

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 7 =
Remember me
