ಶ್ರೀಹರಿಕೋಟ:ಮಹತ್ವಾಕಾಂಕ್ಷೆಯ ಭೂ ಸರ್ವೇಕ್ಷಣಾ ಉಪಗ್ರಹ ಇಒಎಸ್​-04 ಸ್ಯಾಟಲೈಟ್​ ಸೇರಿ ಒಟ್ಟು ಮೂರು ಉಪಗ್ರಹಗಳನ್ನು ಇಂದು(ಸೋಮವಾರ) ಮುಂಜಾನೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಇಒಎಸ್​-04, ಇನ್​ಸ್ಪೈರ್​ಸ್ಯಾಟ್​-1 ಹಾಗೂ ಐಎನ್​ಎಸ್​-2ಬಿ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ಸಿ-52 ರಾಕೆಟ್‌ ಇಂದು ಬೆಳಗ್ಗೆ 5.59ಕ್ಕೆ ಶ್ರೀಹರಿಕೋಟದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿತು.
ಈ ವರ್ಷದ ಮೊದಲ ಉಡಾವಾಣೆಯಾಗಿ ಇಒಎಸ್​-04 ಉಪಗ್ರಹವನ್ನು ಅಂತರಿಕ್ಷಕ್ಕೆ ರವಾನಿಸಿದ ಇಸ್ರೋ, ಇದೊಂದು ಅವಿಸ್ಮರಣೀಯ ಕ್ಷಣ ಎಂದು ಬಣ್ಣಿಸಿದೆ. ಭೂಮಿ ಮೇಲೆ ನಿಗಾ ಇರಿಸುವ ಸರಣಿಯಲ್ಲಿ ನಾಲ್ಕನೇಯದ್ದಾದ ಇಒಎಸ್​-04 ಸ್ಯಾಟಲೈಟ್​ನ ಬಾಳ್ವಿಕೆ ಅವಧಿ ಸುಮಾರು 10 ವರ್ಷ. ಈ ಭೂಮಿ ವೀಕ್ಷಣಾ ಉಪಗ್ರಹ ಕೃಷಿ, ಅರಣ್ಯ ಮತ್ತು ತೋಟಗಳು, ಎಂಥಹದ್ದೇ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಕೂಡ ಉತ್ತಮ ಗುಣಮಟ್ಟದ ಚಿತ್ರಗಳನ್ನು ಭೂಮಿಗೆ ರವಾನಿಸುವಂತೆ ವಿನ್ಯಾಸ ಮಾಡಲಾಗಿದೆ.
ಇಸ್ರೋ ಈ ವರ್ಷ ಚಂದ್ರಯಾನ-3 ಸೇರಿ 19 ಯೋಜನೆಗಳನ್ನು ಹಮ್ಮಿಕೊಂಡಿದೆ. ಕಳೆದ ಎರಡು ವರ್ಷದಲ್ಲಿ ಇಸ್ರೋದ ಮೂರು ಬಾಹ್ಯಾಕಾಶ ಯೋಜನೆಗಳು ಮಾತ್ರ ಸಫಲವಾಗಿವೆ. ಕಾರ್ಟೊಸ್ಯಾಟ್​ ಮಾಲಿಕೆಯ ಈ ಉಪಗ್ರಹಗಳು ಭೂ ಮೇಲ್ಮೈನ ಮಾಹಿತಿ ಒದಗಿಸುವ ಮೂಲಕ ನೆ ತಯಾರಿಗೆ ಅನುಕೂಲ ಮಾಡಿಕೊಡುತ್ತದೆ.
ಸಾಗರ, ಅರಣ್ಯ, ಪರ್ವತಗಳನ್ನು ಕರಾರುವಕ್ಕಾಗಿ ಗುರುತಿಸುವಿಕೆ. ಖನಿಜ ಸಂಪತ್ತ ಪತ್ತೆ, ಹವಾಮಾನ ಬದಲಾವಣೆಯ ಮಾಹಿತಿ, ಮಣ್ಣಿನ ಗುಣಮಟ್ಟ ಸೇರಿ ಭೂಗೋಳದ ಬಾಹ್ಯರೇಖೆಯ ಸಂಪೂರ್ಣ ಮಾಹಿತಿಯನ್ನು EOS-04 ಸ್ಯಾಟಲೈಟ್​ ಒದಗಿಸುತ್ತದೆ. ಇಒಎಸ್​-01 ಸ್ಯಾಟಲೈಟ್​ ಅನ್ನು 2020ರ ನವೆಂಬರ್​ನಲ್ಲಿ ಉಡಾವಣೆ ಮಾಡಲಾಯಿತು. ಇಒಎಸ್​-02 ಸಣ್ಣ ಸ್ಯಾಟಲೈಟ್​ ಆಗಿದ್ದು, ಇದು ಎಸ್​ಎಸ್​ಎಲ್​ವಿ ರಾಕೆಟ್​ನಲ್ಲಿ ಉಡಾವಣೆ ಆಗಬೇಕಿದೆ. ಇಒಎಸ್​-03 ಕಳೆದ ವರ್ಷ ಆಗಸ್ಟ್​ನಲ್ಲಿ ಉಡಾವಣೆ ಆಯಿತಾದರೂ ವಿಫಲವಾಯಿತು.
Launch of PSLV-C52/EOS-04https://t.co/naTQFgbm7b
— ISRO (@isro)February 13, 2022

2012ರಲ್ಲಿ ಉಡಾವಣೆಯಾದ ಈಗ ಕಾರ್ಯ ಸ್ಥಗಿತಗೊಳಿಸಿರುವ ರಿಸ್ಯಾಟ್​-1 ಉಪಗ್ರಹದ ಬದಲಿಯಾಗಿ 1,710 ಕೆ.ಜಿ. ತೂಕದ ಇಒಎಸ್​-04 ಸ್ಯಾಟಲೈಟ್​ ಅನ್ನು ಕಳುಹಿಸಲಾಗಿದೆ. ಉತ್ತಮ ಗುಣಮಟ್ಟದ ಚಿತ್ರಗಳನ್ನು ಇದು ರವಾನಿಸುತ್ತದೆ. ಇನ್​ಸ್ಪೈರ್​ಸ್ಯಾಟ್​-1 ಅನ್ನು ತಿರುವನಂತಪುರದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿದ್ಯಾರ್ಥಿ ಸಿದ್ಧಪಡಿಸಿದ್ದಾನೆ. ಅಮೆರಿಕದ ಕೊಲೊರಾಡೊ ವಿವಿ ಆತನಿಗೆ ನೆರವು ನೀಡಿದೆ. ಐಎನ್​ಎಸ್​-2ಟಿಡಿ ಉಪಗ್ರಹವು ಭೂತಾನ್​ ಜತೆಗೂಡಿ ಭಾರತ ಕೈಗೊಂಡಿರುವ ಮೊದಲ ಬಾಹ್ಯಾಕಾಶ ಅನ್ವೇಷಣೆಯದ್ದಾಗಿದೆ.
Koo App
A proud moment for all Indians indeed! Heartiest congratulations to the team of ISRO on the successful launch of radar imaging satellite EOS-04 and two others onboard PSLV-C52.This mission will serve India in the sectors of agriculture, disaster management and assessment, carbon inventory, forest and plantation management and many more sectors.
–Nitin Gadkari (@nitin.gadkari)14 Feb 2022

ಆಸ್ಪತ್ರೆಯಲ್ಲೇ ಕುಸಿದುಬಿದ್ದ ನರ್ಸ್ ಮೇಲಕ್ಕೆ ಏಳಲೇ ಇಲ್ಲ… ಸಾವಲ್ಲೂ ಸಾರ್ಥಕತೆ ಮೆರೆದ ಗಾನವಿ, ಈ ಸ್ಟೋರಿ ಓದಿದ್ರೆ ಮನಸ್ಸು ಭಾರ

ಸಾವಲ್ಲೂ ಸಾರ್ಥಕತೆ ಮೆರೆದ ಚೈತ್ರಾಗಿತ್ತು ಮಹತ್ತರ ಆಸೆ, ಆಕೆ ಬದುಕಿದ್ದರೆ ಸಂಚಲನ ಸೃಷ್ಟಿಸುತ್ತಿದ್ದಳು…

ಪ್ರೇಮ ವಿವಾಹವಾದ್ರೂ ಮತ್ತೊಬ್ಬನ ಮೇಲೆ ಮೋಹ: ಪುರುಷನ ಚಪ್ಪಲಿ, ಪ್ರಸಾದದ ಬ್ಯಾಗು ಬಿಚ್ಚಿಟ್ಟ ಭಯಾನಕ ರಹಸ್ಯವಿದು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 − 1 =
Remember me
