ಅಮರಾವತಿ:ಭಾರತಕ್ಕೆ ಕರೊನಾ ಸೋಂಕು ಬಂದು 9 ತಿಂಗಳಿಗೂ ಅಧಿಕವಾಗಿದೆ. ಸೋಂಕಿನ ದೊಡ್ಡ ಅಲೆಯನ್ನು ಕಂಡ ದೇಶ ಇದೀಗ ಕೊಂಚ ಸುಧಾರಿಸಿಕೊಳ್ಳಲಾರಂಭಿಸಿದೆ. ಇದೇ ಬೆನ್ನಲ್ಲೇ ಮತ್ತೊಂದು ರೋಗ ದೇಶಕ್ಕೆ ಬಂದಿರುವ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿವೆ. ಆಂಧ್ರಪ್ರದೇಶದಲ್ಲಿ ನಿಗೂಢ ರೋಗವೊಂದು ಕಾಣಿಸಿಕೊಂಡಿದ್ದು, ಮೊದಲನೇ ಬಲಿಯೂ ಆಗಿ ಹೋಗಿದೆ.
ಇದನ್ನೂ ಓದಿ:ಇವನ ಪ್ರೀತಿ ಅವಳು; ಅವಳ ಪ್ರೀತಿ ಇವನ ಮಲತಂದೆ! ಮುಂದೇನಾಯ್ತು ಗೊತ್ತಾ?
ಆಂಧ್ರದ ಎಲೂರು ಪ್ರದೇಶದ ನಾಲ್ಕು ಸ್ಥಳಗಳ 45 ಜನರು ಶನಿವಾರ ವಿಚಿತ್ರ ಕಾಯಿಲೆಯಿಂದ ಆಸ್ಪತ್ರೆ ಸೇರಿದ್ದಾರೆ. ಈವರೆಗೆ 46 ಮಕ್ಕಳು, 70 ಮಹಿಳೆಯರು ಸೇರಿ ಸುಮಾರು 300 ಜನರು ಆಸ್ಪತ್ರೆಗೆ ಸೇರಿರುವುದಾಗಿ ವರದಿಯಾಗಿದೆ. ಎಲೂರಿನ ಸರ್ಕಾರ ಆಸ್ಪತ್ರೆಯಲ್ಲಿ ನಿಗೂಢ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ:ಬೇಗ ಸಾಯಲು ನೇಣು ಹಾಕಿಕೋ ಎಂದು ಸಲಹೆ ಕೊಟ್ಟ ಬಾಯ್​ಫ್ರೆಂಡ್​; ವಿಡಿಯೋ ಕಾಲ್​ನಲ್ಲೇ ಅಂತ್ಯವಾಯಿತು ಯುವತಿಯ ಬಾಳು
ನಿಗೂಢ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ಹಠಾತ್​ ಪ್ರಜ್ಞೆ ಕಳೆದುಕೊಳ್ಳುವುದು, ನರಳುವಿಕೆ ಮತ್ತು ನಡುಗುವಿಕೆ ಲಕ್ಷಣ ಕಾಣಿಸಿಕೊಂಡಿದೆ. ಜಲ ಮಾಲಿನ್ಯ ಅಥವಾ ಆಹಾರದ ತೊಂದರೆಯಿಂದ ಈ ಸಮಸ್ಯೆ ಆಗಿರಬಹುದು ಎನ್ನುವ ಅನುಮಾನವನ್ನು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಅದೇ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್​ನ ತಜ್ಞರ ತಂಡವು ರೋಗದ ಮೂಲ ಪತ್ತೆಗೆ ಮುಂದಾಗಿದೆ. ರೋಗಿಗಳ ಸೆರೆಬ್ರಲ್-ಬೆನ್ನುಮೂಳೆಯ ದ್ರವ ಮಾದರಿಯನ್ನು ವಿಜಯವಾಡ ಮತ್ತು ವಿಶಾಖಪಟ್ಟಣಂನ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಇದರ ವರದಿ ಬಂದ ನಂತರ ನಿಖರ ಕಾರಣ ಕಂಡುಕೊಳ್ಳಬಹುದು ಎನ್ನಲಾಗಿದೆ. (ಏಜೆನ್ಸೀಸ್​)
ಮೂರು ಹೆಣ್ಣು ಮಕ್ಕಳಿಂದ ನಡೆದಿತ್ತು ಅಪ್ಪನ ಕೊಲೆ! ಕಣ್ಣೀರು ತರಿಸುತ್ತೆ ಕೊಲೆಯ ಹಿಂದಿನ ನೋವಿನ ಕಥೆ

ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 8 =
Remember me
