ಮುಂಬೈ:ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್ (IRB Infrastructure Developers) ಷೇರು ಬೆಲೆ 64.35 ರೂಪಾಯಿ ತಲುಪಿದೆ. ಈ ಷೇರು ಬೆಲೆ 90 ರೂ. ತಲುಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬ್ರೋಕರೇಜ್ ಸಂಸ್ಥೆಯಾದ ವೆಂಚುರಾ ಸೆಕ್ಯುರಿಟೀಸ್ ಪ್ರಕಾರ, ಈ ಷೇರಿನ ಬೆಲೆ 94 ರೂಪಾಯಿ ಮುಟ್ಟಲಿದೆ. ವೆಂಚುರಾ ಕೆಲವು ತಿಂಗಳ ಹಿಂದೆ ಈ ಸ್ಟಾಕ್ ಅನ್ನು ಖರೀದಿಸಲು ಶಿಫಾರಸು ಮಾಡಿತ್ತು. .
“ನಾವು IRB ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಲಿಮಿಟೆಡ್‌ ಕುರಿತು ಅಕ್ಟೋಬರ್ 14, 2022 ರಿಂದ ನಾವು ಹೇಳಲು ಶುರು ಮಾಡಿದ್ದೇವೆ. ಅಂದಿನಿಂದ ಈ ಸ್ಟಾಕ್ 67.4% ರಷ್ಟು ಹೆಚ್ಚಾಗಿದೆ. ಚಾಲ್ತಿಯಲ್ಲಿರುವ ಯೋಜನೆಗಳಿಂದ ಕಂಪನಿಯ ಹೆಚ್ಚಿದ ನಗದು ಹರಿವು ಮತ್ತು ಖಾಸಗಿ ಹೂಡಿಕೆಗಳಿಂದ ಬಲವಾದ ಒಳಹರಿವು ಇದಕ್ಕೆ ಕಾರಣವಾಗಿದೆ.
ಸಾಕಷ್ಟು ವ್ಯಾಪಾರ ಬೆಳವಣಿಗೆಯನ್ನು ಪರಿಗಣಿಸಿ, ನಾವು ಷೇರಿನ ಗುರಿ ಬೆಲೆಯನ್ನು ರೂ 94.5 ನಲ್ಲಿ ಇರಿಸಿದ್ದೇವೆ. ಅಂದಾಜು 2 ವರ್ಷಗಳ ಅವಧಿಗೆ ಈ ಗುರಿ ಇತ್ತು. ಇದರೊಂದಿಗೆ ಷೇರುಗಳನ್ನು ಖರೀದಿಸುವಂತೆ ಸೂಚಿಸಲಾಗಿದೆ ಎಂದು ವೆಂಚುರಾ ಸೆಕ್ಯುರಿಟೀಸ್ ಹೇಳಿದೆ.
ಆದರೆ, ಇನ್ನೊಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಈ ಸ್ಟಾಕ್‌ನಲ್ಲಿ ತಟಸ್ಥವಾಗಿದೆ. ಇತ್ತೀಚೆಗೆ, ಬ್ರೋಕರೇಜ್ ತಟಸ್ಥ ರೇಟಿಂಗ್ ಹೊಂದಿರುವ ಷೇರಿಗೆ ರೂ 60 ಗುರಿ ಬೆಲೆಯನ್ನು ನಿಗದಿಪಡಿಸಿದೆ.
ಐಆರ್​ಬಿ ಇನ್ಫ್ರಾಸ್ಟ್ರಕ್ಚರ್ ಡೆವಲಪರ್‌ಗಳ ಷೇರುದಾರರು 34.39 ಪ್ರತಿಶತ ಪಾಲನ್ನು ಪ್ರವರ್ತಕರು ಹೊಂದಿದ್ದಾರೆ. ಇದಲ್ಲದೆ, 65.61 ರಷ್ಟು ಪಾಲನ್ನು ಸಾರ್ವಜನಿಕ ಷೇರುದಾರರು ಹೊಂದಿದ್ದಾರೆ. ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್‌ಗಳ 5 ಪ್ರವರ್ತಕರು ಒಟ್ಟು 6,83,02,930 ಷೇರುಗಳನ್ನು ಹೊಂದಿದ್ದಾರೆ. ಇದರ ಪ್ರಮುಖ ಪ್ರವರ್ತಕ ವೀರೇಂದ್ರ ದತ್ತಾತ್ರೇಯ ಮ್ಹೈಸ್ಕರ್ 5,06,39,850 ಷೇರುಗಳನ್ನು ಹೊಂದಿದ್ದಾರೆ.
ಕಂಪನಿಯು 540 ಮಿಲಿಯನ್ ಡಾಲರ್​ ಸಂಗ್ರಹಿಸುತ್ತದೆ. ಏತನ್ಮಧ್ಯೆ, IRB ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಲಿಮಿಟೆಡ್ ಸೆಕ್ಯೂರ್​ಡ್​ ನೋಟ್ಸ್​ಗಳ ನೋಟುಗಳ ಮೂಲಕ 540 ಮಿಲಿಯನ್ ಡಾಲರ್ ಸಂಗ್ರಹಿಸಿದೆ. ಹೂಡಿಕೆದಾರರಿಂದ 2 ಶತಕೋಟಿ ಡಾಲರ್​ಗೂ ಅಧಿಕ ಮೌಲ್ಯದ ಆರ್ಡರ್‌ಗಳನ್ನು ಸ್ವೀಕರಿಸಲಾಗಿದೆ.
ಜಾಗತಿಕ ಹೂಡಿಕೆದಾರರು ನಮ್ಮ ವ್ಯವಹಾರದಲ್ಲಿ ವಿಶ್ವಾಸವನ್ನು ತೋರಿಸಿದ್ದಾರೆ. ರಸ್ತೆಗಳು ಮತ್ತು ಹೆದ್ದಾರಿಗಳ ವಲಯದಲ್ಲಿ ನಮ್ಮ ಸುದೀರ್ಘ ದಾಖಲೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್​ ಎಂಡಿ ವೀರೇಂದ್ರ ಮ್ಹೈಸ್ಕರ್ ಹೇಳಿದ್ದಾರೆ.

ಕಾನೂನುಬಾಹಿರ ಚಟುವಟಿಕೆಗಾಗಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ 5.49 ಕೋಟಿ ರೂ. ದಂಡ

ಫೆಬ್ರುವರಿ ಒಂದೇ ತಿಂಗಳಲ್ಲಿ 1 ಲಕ್ಷವಾಯ್ತು 2 ಲಕ್ಷಕ್ಕೂ ಅಧಿಕ ಮೊತ್ತ: 100% ಹೆಚ್ಚು ಲಾಭ ನೀಡಿದ ಷೇರುಗಳು ಮತ್ತೆ ಅಪ್ಪರ್​ ಸರ್ಕ್ಯೂಟ್​ ಹಿಟ್

PVC ಆಧಾರ್ ಕಾರ್ಡ್ ಹೆಚ್ಚು ಸುರಕ್ಷಿತ: ಕೇವಲ 50 ರೂ.ಗಳಲ್ಲಿ ಇದನ್ನು ಪಡೆದುಕೊಳ್ಳುವ ವಿಧಾನ ಹೀಗಿದೆ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − 6 =
Remember me
