ಚೆನ್ನೈ:ಬಹುನಿರೀಕ್ಷಿತ 44ನೇ ಆವೃತ್ತಿಯ ಚೆಸ್​ ಒಲಿಂಪಿಯಾಡ್​ಗೆ ಚೆನ್ನೈನಲ್ಲಿ ಗುರುವಾರ ವಿದ್ಯುಕ್ತ ಚಾಲನೆ ಸಿಕ್ಕಿದ್ದು, ಚದುರಂಗದಾಟ ಕಾವೇರಿದೆ. ಇದೇ ಮೊದಲ ಬಾರಿ ಭಾರತದಲ್ಲಿ ಅಂತಾರಾಷ್ಟ್ರೀಯ ಚೆಸ್​​ ಕ್ರೀಡಾಕೂಟ ಆಯೋಜನೆಗೊಂಡಿದ್ದು, ಆತಿಥೇಯ ಭಾರತಕ್ಕೆ ಇದೊಂದು ಪ್ರತಿಷ್ಠೆಯ ಪಂದ್ಯಾವಳಿ.
ಚದುರಂಗದ ಮಹಾಕದನಕ್ಕೆ ಜವಾಹರ್‌ ಲಾಲ್‌ ನೆಹರು ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ತಮಿಳುನಾಡಿನಲ್ಲಿ ವಿವಿಧ ಕ್ರೀಡೆಗಳನ್ನು ಪ್ರತಿನಿಧಿಸುವ ಸುಂದರವಾದ ಶಿಲ್ಪಗಳನ್ನು ಹೊಂದಿರುವ ಅನೇಕ ದೇವಾಲಯಗಳಿವೆ. ತಮಿಳುನಾಡು ಚೆಸ್‌ನೊಂದಿಗೆ ಬಲವಾದ ಐತಿಹಾಸಿಕ ಸಂಬಂಧವನ್ನು ಹೊಂದಿದೆ. ರಾಜ್ಯವು ಅನೇಕ ಚೆಸ್ ಪಟುಗಳನ್ನು ಸೃಷ್ಟಿಸಿದೆ. ಇದು ರೋಮಾಂಚಕ ಸಂಸ್ಕೃತಿಯ ನೆಲೆಯಾಗಿದೆ ಮತ್ತು ಅತ್ಯಂತ ಹಳೆಯ ಭಾಷೆ ‘ತಮಿಳು’ ಎಂದು ಪ್ರಧಾನಿ ಮೋದಿ ಬಣ್ಣಿಸಿದರು. ಮುಖ್ಯಮಂತ್ರಿ ಎಂಕೆ ಸ್ಟಾಲಿನ್​, ಸೂಪರ್ ಸ್ಟಾರ್ ರಜನಿಕಾಂತ್, ಕ್ರೀಡಾ ಸಚಿವ ಅನೂರಾಗ್​ ಠಾಕೂರ್​, ಚೆಸ್​ ಚಾಂಪಿಯನ್​ ವಿಶ್ವನಾಥನ್​ ಆನಂದ್​ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಆ. 10ರವರೆಗೆ ಸ್ಪರ್ಧೆ ನಡೆಯಲಿದೆ.
#ChessOlympiad| Five-time world chess champion Viswanathan Anand hands over the Olympiad torch to PM Narendra Modi and Tamil Nadu CM MK Stalin.
The torch was then handed over to young Grandmaster R Praggnanandhaa and others at Jawaharlal Nehru Stadium in Chennai.pic.twitter.com/iPcMh4rBoK
— ANI (@ANI)July 28, 2022

ಭಾರತ ಮುಕ್ತ ಮತ್ತು ಮಹಿಳಾ ವಿಭಾಗದಲ್ಲಿ ತಲಾ 3 ತಂಡಗಳನ್ನು ಕಣಕ್ಕಿದಿವೆ. ಮುಕ್ತ ವಿಭಾಗದಲ್ಲಿ 188 ಮತ್ತು ಮಹಿಳಾ ವಿಭಾಗದಲ್ಲಿ 162 ತಂಡಗಳು ಸ್ಪರ್ಧಿಸವೆ. ಕ್ಲಾಸಿಕಲ್​ ಸ್ವಿಸ್​ ಲೀಗ್​ ಸ್ವರೂಪದಲ್ಲಿ ಟೂರ್ನಿಯ ಎಲ್ಲ ಪಂದ್ಯಗಳು ನಡೆಯಲಿದ್ದು, ಅಗ್ರ ಶ್ರೇಯಾಂಕಿತ ಅಮೆರಿಕ ಹಾಟ್​ ಫೇವರಿಟ್​ ಎನಿಸಿದೆ. ನಾರ್ವೆ ಪರ ಕಣಕ್ಕಿಳಿಯಲಿರುವ ಹಾಲಿ ವಿಶ್ವ ಚಾಂಪಿಯನ್​ ಮ್ಯಾಗ್ನಸ್​ ಕಾರ್ಲ್​ಸೆನ್​ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಒಟ್ಟು 11 ಸುತ್ತುಗಳಲ್ಲಿ ಪಂದ್ಯಗಳು ನಡೆಯಲಿವೆ.
2020ರಲ್ಲಿ ಆನ್​ಲೈನ್​ ಮೂಲಕ ನಡೆದಿದ್ದ ಒಲಿಂಪಿಯಾಡ್​ನಲ್ಲಿ ಭಾರತ, ರಷ್ಯಾದ ಜತೆ ಜಂಟಿ ಚಾಂಪಿಯನ್​ ಆಗಿತ್ತು ಮತ್ತು 2014, 2021ರಲ್ಲಿ ಕಂಚು ಜಯಿಸಿತ್ತು. ಈ ಬಾರಿ ಬೋರ್ಡ್​ ಮೇಲಿನ ಕಾದಾಟದಲ್ಲಿ ಸ್ವರ್ಣ ಪದಕಕ್ಕೆ ಮುತ್ತಿಕ್ಕುವ ಅವಕಾಶ ಭಾರತದ ಮುಂದಿದೆ.

5 ಬಾರಿಯ ವಿಶ್ವ ಚಾಂಪಿಯನ್​ ಹಾಗೂ ಸ್ಥಳೀಯ ತಾರೆ ವಿಶ್ವನಾಥನ್​ ಆನಂದ್​ ಈ ಬಾರಿ ಟೂರ್ನಿಯಲ್ಲಿ ಆಡುತ್ತಿಲ್ಲ. ಪಿ. ಹರಿಕೃಷ್ಣ, ಅರ್ಜುನ್​ ಎರಿಗೈಸಿ, ವಿದಿತ್​ ಗುಜರಾತಿ, ಕೆ. ಶಶಿಕಿರಣ್​ ಮತ್ತು ಎಸ್​ಎಲ್​ ನಾರಾಯಣನ್​ ಒಳಗೊಂಡ ಭಾರತ ಎ ತಂಡ ಬಲಿಷ್ಠವಾಗಿದ್ದು, 2ನೇ ಶ್ರೇಯಾಂಕ ಪಡೆದಿದೆ. ಭಾರತ ಬಿ ತಂಡ 11 ಮತ್ತು ಸಿ ತಂಡ 16ನೇ ಶ್ರೇಯಾಂಕ ಪಡೆದಿದೆ.
ಮಹಿಳೆಯರ ವಿಭಾಗದಲ್ಲೂ ಕೊನೆರು ಹಂಪಿ, ತುಂಬು ಗರ್ಭಿಣಿಯಾಗಿರುವ ನಡುವೆಯೂ ಸ್ಪರ್ಧಿಸುತ್ತಿರುವ ದ್ರೋಣವಲ್ಲಿ ಹರಿಕಾ ಮತ್ತು ತಾನಿಯಾ ಸಚ್​ದೇವ್​ ಒಳಗೊಂಡ ಭಾರತ ಎ ತಂಡ ಬಲಿಷ್ಠವಾಗಿದೆ.
ರಾಜ್ಯದಲ್ಲಿ ಮತ್ತೆ ಮಳೆ ಬಿರುಸು, ನಾಳೆ 9 ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್

ಯುವತಿ ಹೆಸರಲ್ಲಿ ಮಾಡಬಾರದ್ದು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಪಿಎಸ್​ಐ ಉದ್ಯೋಗಾಕಾಂಕ್ಷಿ! ಯುವಕರೇ ಈತನ ಟಾರ್ಗೆಟ್​…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 10 =
Remember me
