ನವದೆಹಲಿ:ಕಡಿಮೆ ಆದಾಯದ ಮಟ್ಟದವರಲ್ಲಿ ಬಳಕೆಯನ್ನು ಹೆಚ್ಚಿಸುವಂತೆ ಮಾಡುವ ನಿಟ್ಟಿನಲ್ಲಿ ಪ್ರಸ್ತುತ ಆದಾಯ ತೆರಿಗೆ ರಚನೆಯನ್ನು ಕೇಂದ್ರ ಸರ್ಕಾರವು ತರ್ಕಬದ್ಧಗೊಳಿಸಲು ಆಲೋಚಿಸುತ್ತಿದೆ. 2024ರ ಬಜೆಟ್​ನಲ್ಲಿ ಕಲ್ಯಾಣ ವೆಚ್ಚಕ್ಕಿಂತ ಕಡಿಮೆ ಆದಾಯದವರಿಗೆ ತೆರಿಗೆ ಕಡಿತಕ್ಕೆ ಆದ್ಯತೆ ನೀಡಬಹುದು ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಈ ತೆರಿಗೆ ಕಡಿತಗಳು, ಖರ್ಚು ಮಾಡಬಹುದಾದ ಆದಾಯವನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ. ಇದು ಬಳಕೆ ಮತ್ತು ಆರ್ಥಿಕ ಚಟುವಟಿಕೆ ಹೆಚ್ಚಿಸುತ್ತದೆ ಎಂದು ಸರ್ಕಾರ ಪರಿಗಣಿಸಿದೆ ಎನ್ನಲಾಗಿದೆ.
ಹೊಸ ತೆರಿಗೆ ವ್ಯವಸ್ಥೆಯಲ್ಲಿ, 5%ರ ಮೊದಲ ಸ್ಲ್ಯಾಬ್ ರೂ. 3 ಲಕ್ಷದಿಂದ ಪ್ರಾರಂಭವಾಗುತ್ತದೆ, ಆದರೆ, ಆದಾಯವು ರೂ 15 ಲಕ್ಷ ತಲುಪುವ ಹೊತ್ತಿಗೆ ತೆರಿಗೆ ದರವು 30%ಕ್ಕೆ ಜಿಗಿಯುತ್ತದೆ. ಈ ಹಂತದಲ್ಲಿ, ಆದಾಯವು 5 ಪಟ್ಟು ಹೆಚ್ಚಾಗುತ್ತದೆ, ತೆರಿಗೆ ದರವು 6 ಪಟ್ಟು ಹೆಚ್ಚಾಗುತ್ತದೆ. ಇದು ತುಂಬಾ ಕಡಿದಾದ ತೆರಿಗೆ ದರ ಎಂದು ಪರಿಗಣಿಸಲಾಗಿದೆ ಎಂದು ವರದಿ ಹೇಳಿದೆ.
ಕೇಂದ್ರ ಸರ್ಕಾರದ ಉದ್ದೇಶಿತ ಕ್ರಮವು ಬಳಕೆಯನ್ನು ಹೆಚ್ಚಿಸುತ್ತದೆ; ಬೇಡಿಕೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಹೂಡಿಕೆ ಚಕ್ರವನ್ನು ಮರುಪ್ರಾರಂಭಿಸಲು ನಿರ್ಣಾಯಕವಾಗಿದೆ, ವಿಶೇಷವಾಗಿ, ಗ್ರಾಹಕ-ಕೇಂದ್ರಿತ ವಲಯಗಳಲ್ಲಿ. ಇದು ಜಿಎಸ್‌ಟಿ ಸಂಗ್ರಹವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2024-25ರ ಹಣಕಾಸು ವರ್ಷದ ಬಜೆಟ್ ಅನ್ನು ಜುಲೈ ಅಂತ್ಯದಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗುವುದು. ಹಣಕಾಸು ಸಚಿವೆ ಸೀತಾರಾಮನ್ ಅವರು ಜೂನ್ 20ರ ಆಸುಪಾಸಿನಲ್ಲಿ ಉದ್ಯಮ ಗುಂಪುಗಳೊಂದಿಗೆ ಬಜೆಟ್ ಪೂರ್ವ ಚರ್ಚೆಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಜೂನ್ 18 ರಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರೊಂದಿಗೆ ಸಭೆಯನ್ನು ನಿಗದಿಪಡಿಸಲಾಗಿದೆ.
ಮುಂಬರುವ ಬಜೆಟ್ ಮೋದಿ 3.0 ಸರ್ಕಾರದ ಆರ್ಥಿಕ ಕಾರ್ಯಸೂಚಿಯನ್ನು ರೂಪಿಸುತ್ತದೆ. ಸಮ್ಮಿಶ್ರ ಸರ್ಕಾರದ ಬದ್ಧತೆಗಳಿಗೆ ಸಂಪನ್ಮೂಲಗಳನ್ನು ಭದ್ರಪಡಿಸಿಕೊಳ್ಳುವಾಗ ಸೀತಾರಾಮನ್ ಅವರು ಹಣದುಬ್ಬರವನ್ನು ಹೆಚ್ಚಿಸದೆ ಬೆಳವಣಿಗೆಯನ್ನು ಉತ್ತೇಜಿಸುವ ಅಗತ್ಯವಿದೆ. ಕೇಂದ್ರ ಸರ್ಕಾರದ ಆರ್ಥಿಕ ಕಾರ್ಯಸೂಚಿಯು ಭಾರತವನ್ನು ಶೀಘ್ರದಲ್ಲೇ 5 ಟ್ರಿಲಿಯನ್ ಡಾಲರ್​ ಆರ್ಥಿಕತೆಯಾಗಿ ರೂಪಿಸುವ ಗುರಿ ಹೊಂದಿದೆ. ಅಲ್ಲದೆ, 2047ರ ವೇಳೆಗೆ ರಾಷ್ಟ್ರವನ್ನು ‘ಅಭಿವೃದ್ಧಿ ಹೊಂದಿದ ಭಾರತ’ವಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ.
ಪ್ರಧಾನ ಮಂತ್ರಿ ಮೋದಿಯವರ ಮೂರನೇ ಅವಧಿಯ ಪ್ರಮುಖ ಆದ್ಯತೆಗಳು ಕೃಷಿ ಸವಾಲುಗಳನ್ನು ಎದುರಿಸುವುದು, ಉದ್ಯೋಗ ಸೃಷ್ಟಿ, ಬಂಡವಾಳ ವೆಚ್ಚವನ್ನು ಉಳಿಸಿಕೊಳ್ಳುವುದು ಮತ್ತು ಹಣಕಾಸಿನ ಬಲವರ್ಧನೆಯನ್ನು ಕಾಪಾಡಿಕೊಳ್ಳಲು ಆದಾಯದ ಬೆಳವಣಿಗೆಯನ್ನು ಹೆಚ್ಚಿಸುವುದು ಆಗಿದೆ ಎಂದು ವರದಿ ಹೇಳಿದೆ.
5 ವರ್ಷಗಳಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿ: ಮೋದಿ 3.0 ಸರ್ಕಾರದ ಪ್ರಬಲ ಯೋಜನೆ
ಜಿಡಬ್ಲ್ಯುಇಸಿ ಇಂಡಿಯಾದ ಅಧ್ಯಕ್ಷರಾಗಿ ಸುಜ್ಲಾನ್‌ನ ಗಿರೀಶ್ ತಂತಿ ಆಯ್ಕೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − one =
Remember me
