ವಾಷಿಂಗ್ಟನ್:55 ವರ್ಷದ ಆ ತಂದೆಗೆ ಕುಸ್ತಿ ಆಟದ ಭಾರೀ ರುಚಿ ಹತ್ತಿತ್ತು. ಕುಡಿದ ಅಮಲಿನಲ್ಲಿ ತನ್ನ ಬಾಲಾಪರಾಧಿ ಮಗನನ್ನು ಕುಸ್ತಿಗಾಗಿ ಪಂಥಾಹ್ವಾನ ನೀಡುತ್ತಾನೆ.ಆರಂಭದಲ್ಲಿ ತೀವ್ರ ಸ್ಪರ್ಧಾತ್ಮಕವಾಗಿ ನಡೆದ ಪಂದ್ಯದಲ್ಲಿ ಕ್ರಮೇಣ ತಂದೆ ಪದೆ ಪದೆ ಸೋಲುತ್ತ ಬರುತ್ತಾನೆ. ಅದೊಮ್ಮೆ ಸೋಲು ಸಹಿಸದ ಆತ ಮನೆ ಛಾವಣಿಗೆ ಎರಡು ಗುಂಡು ಹೊಡೆದು ತನ್ನ ಸಿಟ್ಟನ್ನು ಹೊರಹಾಕುತ್ತಾನೆ. ಅದೃಷ್ಟವಶಾತ್ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಪೊಲೀಸರ ಆಗಮನದಿಂದಾಗಿ ಅಲ್ಲಿ ಮುಂದಾಗಬಹುದಾಗಿದ್ದ ಸಾವು ನೋವಿನಂತಹ ಅನಾಹುತ ತಪ್ಪುತ್ತದೆ. ಇದು ಯಾವುದೋ ಸಿನೆಮಾದ ದೃಶ್ಯವಲ್ಲ. ನೈಜ ಘಟನೆಯಷ್ಟೇ.
ಇದನ್ನೂ ಓದಿ:ಒಡೆಯುತ್ತಾ ಪಕ್ಷ, ನೇಪಾಳದಲ್ಲಿ ಉಳಿಯುತ್ತಾ ಕೆ.ಪಿ. ಶರ್ಮ ಓಲಿ ಸರ್ಕಾರ?
ಕೆಂಟುಕಿಯ 55 ವರ್ಷದ ಕರ್ಟಿಸ್ ಝಿಮರ್​​​​ಮನ್ ಕುಡಿದ ಅಮಲಿನಲ್ಲಿ ತನ್ನ ಬಾಲಾಪರಾಧಿ ಮಗನಿಗೆ ಕುಸ್ತಿ ಸ್ಪರ್ಧೆಗೆ ಸವಾಲು ಹಾಕಿದ್ದಾನೆಂದು ವರದಿಯಾಗಿದೆ  ತಂದೆ -ಮಗನ ನಡುವಿನ ಕುಸ್ತಿ ಪಂದ್ಯವು ತುಂಬಾ ಸ್ಪರ್ಧಾತ್ಮಕ ಮತ್ತು ತೀವ್ರವಾಗಿ ಹೊರಹೊಮ್ಮಿತ್ತು,ಕುಸ್ತಿ ಸ್ಪರ್ಧೆಯಲ್ಲಿ ಝಿಮ್ಮರ್‌ಮನ್ ಅನೇಕ ಬಾರಿ ಸೋತಾಗ, ಆಕ್ರೋಶಗೊಂಡು ಮಗನೊಂದಿಗೆ ಜಗಳಕ್ಕಿಳಿದ. ಪರಿಸ್ಥಿತಿ ಕೈ ಕೈ ಮಿಲಾಯಿಸುವ ಮಟ್ಟಿಗೇರಿತು ಎಂದು ಬೂನ್ ಕೌಂಟಿ ಶೆರಿಫ್ ಇಲಾಖೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದೆ. ಮಗ ಮೇಲಕ್ಕೆ ಹೋಗುತ್ತಿದ್ದಾಗ ಝಿಮ್ಮರ್‌ಮನ್ ಬಂದೂಕಿನಿಂದ ಮನೆಯ ಛಾವಣಿಗೆ ಎರಡು ಗುಂಡು ಹಾರಿಸಿದ.
ಇದನ್ನೂ ಓದಿ:ಚೀನಾ ವಿರುದ್ಧ ಸಮರಕ್ಕೆ ಅಮೆರಿಕ ಸೇನೆಯ ಬೆಂಬಲ ಭಾರತಕ್ಕೆ ಎಂದ ಟ್ರಂಪ್‌
ಕುಸ್ತಿಯಲ್ಲಿ ಉಂಟಾದ ಸೋಲು ತಂದೆಯನ್ನು ಕೆರಳಿಸಿತು ಮತ್ತು ಮಗನೊಂದಿಗೆ ವಾಗ್ವಾದಕ್ಕಿಳಿಯಲು ಕಾರಣವಾಯಿತು ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.ಪೊಲೀಸರು ಬಂದು, ಮನೆಯಿಂದ ಹೊರಬರಲು ಝಿಮ್ಮರ್​​ಮನ್​​​ಗೆ ತಿಳಿಸಿದಾಗ ಅದಕ್ಕೆ ಆತ ನಿರಾಕರಿಸಿದ ಕಾರಣ 8 ಗಂಟೆಗೂ ಹೆಚ್ಚು ಕಾಲ ಬಿಕ್ಕಟ್ಟಿನ ವಾತಾವರಣ ನಿರ್ಮಾಣವಾಗಿತ್ತು. ನಂತರ ಯಾವುದೇ ವಿರೋಧ ವ್ಯಕ್ತಪಡಿಸದೆ ಆತ ಶರಣಾದ.“ಬಂಧನಕ್ಕೊಳಗಾದ ನಂತರ, ಝಿಮ್ಮರ್‌ಮನ್‌ನನ್ನು ಫ್ಲಾರೆನ್ಸ್‌ನ ಸೇಂಟ್ ಎಲಿಜಬೆತ್‌ಗೆ ವಿಚಾರಣೆಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಸ್ಪತ್ರೆಯ ಹುಳುಕು ತೋರಿಸಿದ್ದೇ ಪ್ರಾಣ ಕಸಿಯಿತೆ? ಪತ್ರಕರ್ತನ ಸಾವಿಗೆ ಟ್ವಿಸ್ಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + seventeen =
Remember me
