ಸೂರತ್​​​:ಕಳೆದ ವರ್ಷಾಂತ್ಯದಲ್ಲಿ ನಡೆದ ಗುಜರಾತ್​ ವಿಧಾನಸಭೆ ಚುನಾವಣೆ ವೇಳೆ ರಾಜ್ಯ ಗೃಹ ಸಚಿವ ಹರ್ಷ್​ ಸಾಂಘವಿ ಕುರಿತು ಅವಹೇಳನಕಾತಿ ಹೇಳಿಕೆ ನೀಡಿದ ಆರೋಪದ ಮೇಲೆ ಎಎಪಿ ನಾಯಕ ಗೋಪಾಲ್​ ಇಟಾಲಿಯಾ ಅವರನ್ನು ಪೊಲೀಸರು ಬಂಧಿಸಿದ್ಧಾರೆ.
ಬಂಧನದ ನಂತರ ಪೊಲೀಸರು ಗೋಪಾಲ್ ಅವರನ್ನು ಸೂರತ್​ ಕ್ರೈಂ ಬ್ರಾಂಚ್​ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ಧಾರೆ.
2022ರ ವರ್ಷಾಂತ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಎಎಪಿ ಗೋಪಾಲ್​ ಇಟಾಲಿಯ ಗೃಹ ಸಚಿವ ಹರ್ಷ್​ ಸಾಂಘವಿ ಅವರನ್ನು ಡ್ರಗ್ಸ್​ ಸಾಂಘವಿ ಎಂದು ಸಂಭೋದಿಸಿದ್ದರು.
ಈ ಕುರಿತು ಹರ್ಷ್​​ ಸಾಂಘವಿ ಸ್ಥಳೀಯ ಪೊಲೀಸ್​ ಠಾಣೆ ದೂರು ದಾಖಲಿಸಿ್ದರು ಮತತ್ಉ ಪೊಲೀಸರು FIR ಹಾಕಿದ್ದರು.
ತಮ್ಮ ಪಕ್ಷದ ನಾಯಕನನ್ನು ಬಂಧಿಸಿರುವ ಕುರಿತು ಟ್ವೀಟ್​ ಮಾಡಿರುವ ಅರವಿಂದ್​ ಕೇಜ್ರಿವಾಲ್​ ಗುಜರಾತ್​ ವಿಧಾನಸಭೆ ಚುನಾವಣೆಯಲ್ಲಿ ಎಎಪಿಯ ಸಾಧನೆಯಿಂದಾಗಿ ಭಯಗೊಂಡ ಬಿಜೆಪಿ ಗೋಪಾಲ್​ ಇಟಾಲಿಯಾ ಅವರನ್ನು ಬಂಧಿಸಿದೆ ಎಂದು ಕಿಡಿಕಾರಿದ್ಧಾರೆ.
गुजरात में आम आदमी पार्टी के शानदार प्रदर्शन से बीजेपी इस कदर बौखलाई है कि अब हमारे गुजरात के नेता गोपाल इटालिया को गिरफ़्तार कर लिया है। बीजेपी का अब बस एक मक़सद है किस तरह आम आदमी पार्टी को ख़त्म किया जाए। एक एक करके सबको जेल में डालेंगे ये लोग।
ಇದನ್ನೂ ಓದಿ:ದೆಹಲಿ ಪಾಲಿಕೆ ಮೇಯರ್​-ಉಪಮೇಯರ್​​ ಚುನಾವಣೆ; ಅಭ್ಯರ್ಥಿಗಳನ್ನು ಘೋಷಿಸಿದ ಆಪ್​
ಗುಜರಾತ್​ನಲ್ಲಿ ಆಮ್​ ಆದ್ಮಿ ಪಕ್ಷದ ಪ್ರದರ್ಶನದಿಂದಾಗಿ ಬಿಜೆಪಿ ಯಾವ ರೀತಿ ಭಯ ಪಡುತ್ತಿದೆ ಎಂದರೆ ಅದು ಈಗ ನಮ್ಮ ಪಕ್ಷದ ನಾಯಕನನ್ನು ಬಂಧಿಸಿದೆ. ಬಿಜೆಪಿಗೆ ಇರುವುದು ಒಂದೇ ಗುರಿ ಆಮ್​ ಆದ್ಮಿ ಪಕ್ಷವನ್ನು ಹೇಗೆ ಮುಗಿಸುವುದು ಎಂಬುದರ ಬಗ್ಗೆ. ಮುಂದಿನ ದಿನಗಳಲ್ಲಿ ಒಬ್ಬೊಬ್ಬರನ್ನಾಗಿ ಜೈಲಿಗೆ ಹಾಕುತ್ತಾರೆ ಎಂದು ಆರೋಪಿಸಿದ್ದಾರೆ.
ತಮ್ಮನ್ನು ಬಂಧಿಸಿದ ಕುರಿತು ಪ್ರತಿಕ್ರಿಯಿಸಿರುವ ಗೋಪಾಲ್​ ಇಟಾಲಿಯ ಬಿಜೆಪಿ ಪವಿತ್ರವಾದ ಪಕ್ಷ. ಗುಜರಾತ್​ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಫಲಿತಾಂಶ ನೋಡಿದ ಮೇಲೆ ಇವರಿಗೆ ಸಹಿಸಲು ಆಗುತ್ತಿಲ್ಲ. ಭ್ರಷ್ಟ ಬಿಜೆಪಿ ಪಕ್ಷವು ಆಮ್​ ಆದ್ಮಿ ಪಕ್ಷವನ್ನು ಮುಗಿಸಲು ಹೊರಟಿದೆ. ನಾವು ಇದಕ್ಕೆಲ್ಲಾ ಹೆದರುವವರಲ್ಲಾ ಹೋರಾಟದ ಮೂಲಕ ಉತ್ತರ ಕೊಡುತ್ತೇವೆ ಎಂದು ಟ್ವೀಟ್​ ಮಾಡಿ ಪ್ರತಿಕ್ರಿಯಿಸಿದ್ದಾರೆ.
जब से आम आदमी पार्टी ने गुजरात में अपनी ताक़त दिखाई है तब से सारे भाजपाई डरे हुए है।किसी न किसी तरीक़े से ये भ्रष्ट भाजपाई आम आदमी पार्टी को ख़त्म करना चाहते है लेकिन हम लोग@ArvindKejriwalके ईमानदार सिपाही है, जेल या मुक़दमे से डरेंगे नहीं।हम यूँही लड़ते रहेंगे, जीतेंगे।https://t.co/07zk1vB8ji
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + six =
Remember me
