ನವದೆಹಲಿ:ಕಳೆದ ದಶಕದಲ್ಲಿ ತಮ್ಮ ಸರ್ಕಾರವು ನಿರಂತರ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪ್ರಸ್ತುತ ನಡೆಯುತ್ತಿರುವ ಏಳು ಹಂತಗಳ ಲೋಕಸಭೆ ಚುನಾವಣೆಯ ಮತಗಳ ಎಣಿಕೆಯ ದಿನವಾದ ಜೂನ್ 4ರ ನಂತರ ಷೇರು ಮಾರುಕಟ್ಟೆ ಹೊಸ ಗರಿಷ್ಠ ಮಟ್ಟವನ್ನು ತಲುಪಲಿದೆ ಎಂದು ಅವರು ಭವಿಷ್ಯ ನುಡಿದರು.
ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು, ಬಿಜೆಪಿಯ ಉದ್ಯಮಶೀಲತೆಯ ಪರ ನೀತಿಗಳು ಮತ್ತು ಆರ್ಥಿಕ ಸುಧಾರಣೆಗಳನ್ನು ಒತ್ತಿಹೇಳಿದರು. ಯುವ ಹೂಡಿಕೆದಾರರನ್ನು ಅಪಾಯ-ತೆಗೆದುಕೊಳ್ಳುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಉತ್ತೇಜಿಸಿದರು.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ರೀತಿಯ ಸಾರ್ವಜನಿಕ ವಲಯದ ಉದ್ಯಮಗಳ (ಪಿಎಸ್‌ಯು) ಪ್ರಭಾವಶಾಲಿ ಕಾರ್ಯಕ್ಷಮತೆ ತೋರಿವೆ. ಎಚ್‌ಎಎಲ್ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ ಶೇಕಡಾ 52 ರಷ್ಟು ಹೆಚ್ಚಳವನ್ನು ವರದಿ ಮಾಡಿದೆ ಎಂದು ಅವರು ಉದಾಹರಣೆ ನೀಡಿದರು.
ಸಮಗ್ರ ಅಭಿವೃದ್ಧಿಗೆ ತಾವು ಬದ್ಧ ಎಂದು ಹೇಳಿದ ಮೋದಿ, ಇದು ಭಾರತಕ್ಕೆ ಪ್ರಮುಖ ಸಮಯ ಎಂದು ಪ್ರತಿಪಾದಿಸಿದರು.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರವು ಮೂರನೇ ಅವಧಿಗೆ ಪ್ರಬಲ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ ಮೋದಿ, ಚುನಾವಣಾ ಫಲಿತಾಂಶಗಳ ನಂತರ ಷೇರು ಮಾರುಕಟ್ಟೆಯು ಗಮನಾರ್ಹವಾದ ಉತ್ತೇಜನ ಪಡೆಯಲಿದೆ ಎಂದು ಭವಿಷ್ಯ ನುಡಿದರು.
“ಚುನಾವಣಾ ಫಲಿತಾಂಶಗಳು ಪ್ರಕಟವಾಗುವ ದಿನವಾದ ಜೂನ್ 4ರ ನಂತರದ ಒಂದು ವಾರದೊಳಗೆ, ಮಾರುಕಟ್ಟೆಯಲ್ಲಿ ಭಾಗವಹಿಸುವವರು ಸುಸ್ತಾಗುತ್ತಾರೆ ಎಂದು ನೀವು ನೋಡುತ್ತೀರಿ” ಎಂದು ಹೇಳುವ ಮೂಲಕ ಅವರು, ಷೇರು ಮಾರುಕಟ್ಟೆ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟುವ ಸುಳಿವು ನೀಡಿದರು.
“ನಾವು ನಮ್ಮ ಪ್ರಯಾಣವನ್ನು 25,000 (ಬಿಎಸ್​ಇ ಷೇರು ಸೂಚ್ಯಂಕ) ನಿಂದ ಪ್ರಾರಂಭಿಸಿದ್ದೇವೆ ಮತ್ತು 75,000 ತಲುಪಿದ್ದೇವೆ. ಇದು ಜಗತ್ತಿನಲ್ಲಿ ನಮ್ಮ ಹೆಮ್ಮೆಯನ್ನು ಹೆಚ್ಚಿಸುತ್ತದೆ. ಸಾಮಾನ್ಯ ಜನರು ಮಾರುಕಟ್ಟೆಗೆ ಬಂದಂತೆ, ಆರ್ಥಿಕತೆಯು ಸಾಕಷ್ಟು ಬಲ ಪಡೆಯುತ್ತದೆ. ನಾಗರಿಕರ ಅಪಾಯ ತೆಗೆದುಕೊಳ್ಳುವ ಸಾಮರ್ಥ್ಯಗಳು ಹೆಚ್ಚಾಗಬೇಕೆಂದು ನಾನು ಬಯಸುತ್ತೇನೆ” ಎಂದು ಮೋದಿ ಹೇಳಿದರು.
ಪಿಎಸ್‌ಯು ಷೇರುಗಳಲ್ಲಿನ ಏರುಗತಿಗೆ ಉದಾಹರಣೆ ನೀಡಿ ವಿವರಿಸಿದ ಅವರು, ಹಿಂದೂಸ್ತಾನ್ ಏರೋನಾಟಿಕ್ಸ್ (ಎಚ್‌ಎಎಲ್) ಅನ್ನು ನೋಡಿ, ಅದು “ಅದ್ಭುತ ಓಟ”ದಲ್ಲಿದೆ. ಏಕೆಂದರೆ ಅದರ ಷೇರುಗಳ ಬೆಲೆ ಭಾರಿ ಲಾಭದೊಂದಿಗೆ ದಾಖಲೆಯ ಎತ್ತರವನ್ನು ತಲುಪಿದೆ ಎಂದರು.
ಬೆಂಚ್​ಮಾರ್ಕ್ ಸೂಚ್ಯಂಕಗಳಾದ ಬಿಎಸ್ಇ ಸೂಚ್ಯಂಕ ಮತ್ತು ಎನ್ಎಸ್ಇ ನಿಫ್ಟಿ 50 ಸೂಚ್ಯಂಕ ಇತ್ತೀಚೆಗೆ ಏರಿಳಿತ ಕಾಣುತ್ತಿದೆ. ಮೇ ಆರಂಭದಲ್ಲಿ 22,794.7 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ನಂತರ ನಿಫ್ಟಿ 50 ಸೂಚ್ಯಂಕವು ಶೇಕಡಾ 4 ಕ್ಕಿಂತ ಹೆಚ್ಚು ಕುಸಿದು 21,821 ಕ್ಕೆ ತಲುಪಿದೆ. ತದನಂತರ 22,500ಕ್ಕೆ ಚೇತರಿಸಿಕೊಂಡಿದೆ.
ಚುನಾವಣಾ ಫಲಿತಾಂಶಗಳ ಮೇಲಿನ ಆತಂಕಗಳು ಷೇರು ಮಾರುಕಟ್ಟೆಯಲ್ಲಿ ಗಮನಾರ್ಹ ಚಂಚಲತೆಯನ್ನು ಉಂಟು ಮಾಡುತ್ತಿವೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಾರೆ. ಷೇರು ಮಾರುಕಟ್ಟೆ ಕುರಿತು ಮೋದಿಯವರ ಭರವಸೆಗಳು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದರೂ, ಸಾರ್ವತ್ರಿಕ ಚುನಾವಣೆ ಫಲಿತಾಂಶಗಳು ಪ್ರಕಟವಾಗುವವರೆಗೆ ಚಂಚಲತೆ ಮುಂದುವರಿಯಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಷೇರು ಮಾರುಕಟ್ಟೆ ಕುರಿತಂತೆ ಇಬ್ಬರು ಹಿರಿಯ ಕ್ಯಾಬಿನೆಟ್ ಮಂತ್ರಿಗಳಿಂದ ಇದೇ ರೀತಿಯ ಭರವಸೆಗಳು ಈ ಮೊದಲು ವ್ಯಕ್ತವಾಗಿವೆ. ಕಳೆದ ವಾರ, ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು, ಕಳೆದ ದಶಕದಲ್ಲಿ ಷೇರು ಮಾರುಕಟ್ಟೆಗಳ ಬೆಳವಣಿಗೆಯನ್ನು ಶ್ಲಾಘಿಸಿದರು, ಸಣ್ಣ ಹೂಡಿಕೆದಾರರ ಸಂಖ್ಯೆ ಹೆಚ್ಚಳವನ್ನು ಎತ್ತಿ ತೋರಿಸಿದರು. ಬೆಳೆಯುತ್ತಿರುವ ಜಾಗತಿಕ ಹೂಡಿಕೆದಾರರ ನಂಬಿಕೆಯೊಂದಿಗೆ ಭಾರತದ ನಾಲ್ಕನೇ ಅತಿದೊಡ್ಡ ಷೇರು ಮಾರುಕಟ್ಟೆಯ ಸ್ಥಾನಮಾನವನ್ನು ಎತ್ತಿತೋರಿಸಿದರು.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಕೂಡ ಮಾರುಕಟ್ಟೆಯ ಆತಂಕದ ಬಗೆಗೆ ಪ್ರಸ್ತಾಪಿಸಿ, ಇತ್ತೀಚಿನ ಪ್ರಕ್ಷುಬ್ಧತೆಗೆ ಚುನಾವಣಾ ಜುಗುಪ್ಸೆ ಕಾರಣ ಮತ್ತು ಚುನಾವಣೋತ್ತರ ಷೇರು ಮಾರುಕಟ್ಟೆ ಚೇತರಿಸಿಕೊಳ್ಳಲಿದೆ ಎಂದು ಅಂದಾಜಿಸಿದ್ದರು.
ಹಿಂದಿನ ಮಾರುಕಟ್ಟೆಯ ಕುಸಿತವು ಇದಕ್ಕಿಂತಲೂ ತೀವ್ರವಾಗಿತ್ತು ಎಂದು ಹೇಳಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಜೂನ್ 4ರ ನಂತರ ಏರಿಕೆ ಕಾಣುವ ನಿರೀಕ್ಷೆಯಲ್ಲಿ ಹೂಡಿಕೆದಾರರು ಷೇರುಗಳನ್ನು ಖರೀದಿಸಬೇಕೆಂದು ಪ್ರೋತ್ಸಾಹಿಸಿದ್ದರು.
* ಜೂನ್ 4ರ ನಂತರ ಭಾರತೀಯ ಷೇರು ಮಾರುಕಟ್ಟೆಗಳು (NSE ಮತ್ತು BSE) ಹೊಸ ದಾಖಲೆಗಳನ್ನು ಸ್ಥಾಪಿಸುತ್ತವೆ.* ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ ಅಸಾಧಾರಣ ಬೆಳವಣಿಗೆ ಸಾಧಿಸಿದ್ದು, ಪಿಎಸ್‌ಯು ಷೇರುಗಳ ಬೆಲೆಗಳು ಏರಿಕೆಯಾಗುತ್ತಿವೆ.* ಯುವಕರು ಹೆಚ್ಚಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದು, ಅಪಾಯದ ಬಗ್ಗೆ ಅವರ ಸಹಿಷ್ಣುತೆ ಬಲಪಡಿಸಬೇಕು.* ಹೆಚ್ಚಿನ ಸಂಖ್ಯೆಯ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ರಾಜ್ಯಗಳು ಸಹಕಾರಿ ಮತ್ತು ಸ್ಪರ್ಧಾತ್ಮಕ ಫೆಡರಲಿಸಂ ಎರಡನ್ನೂ ಅಭ್ಯಾಸ ಮಾಡಬೇಕು.* ಪ್ರಸ್ತುತ ಸರ್ಕಾರವು ಹೆಚ್ಚಿನ ಪ್ರಮಾಣದ ಆರ್ಥಿಕ ಬದಲಾವಣೆಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಉದ್ಯಮಶೀಲತೆಯ ಪರ ನೀತಿಗಳನ್ನು ಉತ್ತೇಜಿಸಿದೆ.* ಮೂಲಸೌಕರ್ಯ ಪುಶ್‌ನ ನಾಲ್ಕು ಸ್ತಂಭಗಳು- ಕೌಶಲ್ಯ, ವೇಗ, ಗಾತ್ರ ಮತ್ತು ವ್ಯಾಪ್ತಿ.* ಪ್ರತಿಯೊಬ್ಬ ನಾಗರಿಕನು ಅಪಾಯಗಳನ್ನು ತೆಗೆದುಕೊಳ್ಳಲು ಹೆಚ್ಚು ಸಿದ್ಧರಾಗಿರಬೇಕು.* ವಿತ್ತೀಯ ಕೊರತೆ ನಿಯಂತ್ರಣ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮುಖ್ಯ.* ಹಸಿರು ತಂತ್ರಜ್ಞಾನವು ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ.* ಭಾರತದ ಸಾಮಾಜಿಕ ಮೂಲಸೌಕರ್ಯದ ಪ್ರಮುಖ ಅಂಶವೆಂದರೆ ಕಲ್ಯಾಣ ಯೋಜನೆಗಳು.
ಈ ಷೇರುಗಳ ಬೆಲೆಯಲ್ಲಿ ಕುಸಿತ: ಖರೀದಿಸಿ ಉತ್ತಮ ಲಾಭ ಮಾಡಿಕೊಳ್ಳಲು ಅವಕಾಶ

ಈ 6 ಷೇರುಗಳಲ್ಲಿ ಬೇರಿಶ್ ಮೂವಿಂಗ್ ಎವರೇಜ್​ ಕ್ರಾಸ್ಓವರ್: ಯಾಮಾರಿದರೆ ನಷ್ಟ ಖಚಿತ

ಟಾಟಾ ಗ್ರೂಪ್​ನ ಈ ಎರಡು ಸ್ಟಾಕ್ ಖರೀದಿಸಿ: ತಜ್ಞರು ಹೀಗೇಕೆ ಹೇಳುತ್ತಿದ್ದಾರೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + twenty =
Remember me
