ಗುವಾಹಟಿ:ಅಸ್ಸಾಂನಲ್ಲಿ ಸರ್ಕಾರಿ ವೆಚ್ಚದಲ್ಲಿ ನಡೆಯುತ್ತಿರುವ ಎಲ್ಲ ಮದರಸಾಗಳನ್ನು ಒಂದೋ ಸಾಮಾನ್ಯ ಶಾಲೆಗಳನ್ನಾಗಿ ಪರಿವರ್ತಿಸಲಾಗುವುದು ಇಲ್ಲವೇ ಮುಚ್ಚಲಾಗುವುದು. ಒಂದೊಮ್ಮೆ ಮುಚ್ಚಿದರೆ ಅಂತಹ ಮದರಸಾಗಳ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ವರ್ಗಾಯಿಸಲಾಗುವುದು. ಈ ಕುರಿತ ಅಧಿಸೂಚನೆಯನ್ನು ಸರ್ಕಾರ ಮುಂದಿನ ತಿಂಗಳು ಹೊರಡಿಸಲಿದೆ ಎಂದು ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಎಎನ್​ಐ ವರದಿ ಪ್ರಕಾರ ಶರ್ಮಾ ಅವರು ಹೇಳಿರುವುದಿಷ್ಟು – ನನ್ನ ಅಭಿಪ್ರಾಯದಂತೆ, ಸರ್ಕಾರಿ ವೆಚ್ಚದಲ್ಲಿ ಖುರಾನ್​ ಕಲಿಸುವುದಕ್ಕಾಗದು. ಒಂದೊಮ್ಮೆ ನಾವು ಆ ರೀತಿ ಮಾಡ್ತೇವೆ ಎಂದಾದರೆ ಬೈಬಲ್ ಮತ್ತು ಭಗವದ್ಗೀತೆಯನ್ನೂ ನಾವು ಕಲಿಸಬೇಕು. ಆದ್ದರಿಂದ, ನಾವು ಈ ಅಭ್ಯಾಸವನ್ನು ನಿಲ್ಲಿಸಿ ಸಮಾನತೆ ತರಲು ಹೊರಟಿದ್ದೇವೆ ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ:ನ್ಯಾಯಮೂರ್ತಿ ರಮಣ ವಿರುದ್ಧ ಆಂಧ್ರ ಸಿಎಂ ದೂರು; ಸುಪ್ರೀಂಕೋರ್ಟ್ ಮುಂದಿರುವ ಆಯ್ಕೆಗಳೇನು?
ಹಿಂದುಸ್ತಾನ್ ಟೈಮ್ಸ್ ವರದಿ ಪ್ರಕಾರ, ಮದರಸಾಗಳ ಜತೆಗೆ ಸ್ವಾತಂತ್ರ್ಯಪೂರ್ವದಿಂದಲೂ ಅಸ್ತಿತ್ವದಲ್ಲಿರುವ ಸಂಸ್ಕೃತ ಪಾಠಶಾಲೆಗಳನ್ನೂ ಅಸ್ಸಾಂ ಸರ್ಕಾರ ಮುಚ್ಚಲು ತೀರ್ಮಾನಿಸಿದೆ. ಅಳಿವಿನಂಚಿನಲ್ಲಿರುವ ಸಂಸ್ಕೃತವನ್ನು ಕಲಿಸುವುದಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಕೃತ ಪಾಠಶಾಲೆಗಳ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಇಂತಹ ಅಂದಾಜು 100 ಸಂಸ್ಕೃತ ಪಾಠಶಾಲೆಗಳನ್ನು ಸರ್ಕಾರ ಮುಚ್ಚಲಿದೆ ಎಂದು ಸಚಿವ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ:ಸಂಪಾದಕೀಯ: ಜಿಲ್ಲಾಡಳಿತದ ಬಳಿ ಇರುವ ತುರ್ತು ನಿಧಿಯ ಸದ್ಬಳಕೆ ಈಗ ಆಗಲಿ…
ರಾಜ್ಯ ಮದರಸಾ ಶಿಕ್ಷಣ ಮಂಡಳಿಯ ಡೇಟಾ ಪ್ರಕಾರ, ಅಸ್ಸಾಂನಲ್ಲಿ 614 ನೋಂದಾಯಿತ ಮದರಸಾಗಳಿವೆ. ಈ ಪೈಕಿ 400 ಹೈ ಮದರಸಾಗಳಾದರೆ, 112 ಜ್ಯೂನಿಯರ್ ಮದರಸಾಗಳು. ಇನ್ನುಳಿದ 102 ಮದರಸಾಗಳು ಸೀನಿಯರ್ ಗ್ರೇಡ್​ನವು. ಒಟ್ಟು ನೋಂದಾಯಿತ ಮದರಸಾಗಳ ಪೈಕಿ 57 ಹುಡುಗಿಯರದ್ದಾದರೆ, 3 ಹುಡುಗರದ್ದು. ಇನ್ನುಳಿದ 554 ಸಹಶಿಕ್ಷಣದ್ದು. 17 ಮದರಸಾಗಳು ಉರ್ದು ಮಾಧ್ಯಮದವು.
‘ಹಿಂದು ಹೆಸ್ರಲ್ಲಿ ಫೇಸ್​ಬುಕ್​ ಅಕೌಂಟ್ ಕ್ರಿಯೇಟ್ ಮಾಡಿ, ಮದುವೆ ಆಗುವ ವಿಶ್ವಾಸ ವಂಚಕ ಮುಸ್ಲಿಂ ಹುಡುಗರ ವಿರುದ್ಧ ಕಠಿಣ ಕ್ರಮ ತಗೊಳ್ತೇವೆ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
