ನವದೆಹಲಿ:ಇಂದು ಲೋಕಸಭಾ ಚುನಾವಣೆ ಕುರಿತು ಜನರನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​, ಇವರು ನಮ್ಮನ್ನು ಕೇಳ್ತಾರೆ ಇಂಡಿಯಾ ಮೈತ್ರಿಕೂಟ ಗೆದ್ದರೆ ಯಾರನ್ನು ಪ್ರಧಾನಿ ಮಾಡುತ್ತೀರಿ ಎಂದು. ಆದ್ರೆ, ನನ್ನ ಪ್ರಶ್ನೆ, ಬಿಜೆಪಿ ಗೆಲುವು ಸಾಧಿಸಿದರೆ, ಯಾರನ್ನು ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡುತ್ತದೆ ಅಂತ? ಇದೇ ಸೆ.17 ಬಂದ್ರೆ ನರೇಂದ್ರ ಮೋದಿ ಅವರಿಗೆ 75 ವರ್ಷ ಆಗುತ್ತದೆ. ಅಂದಮೇಲೆ ಮೋದಿ ಮುಂದಿನ ಬಾರಿಯೂ ಪ್ರಧಾನಿ ಆಗೋದಿಲ್ಲ. ಹಾಗಿದ್ರೆ, ಅವರ ಬದಲಿಗೆ ಅಮಿತ್​ ಶಾ ಆಗ್ತಾರೆ ಅನಿಸುತ್ತದೆ ಎಂದು ಲೇವಡಿ ಮಾಡಿದ್ದರು.
ಇದನ್ನೂ ಓದಿ:ಮೋದಿ ಅವರೇ ಪ್ರಧಾನಿಯಾಗುತ್ತಾರೆ ಎಂದು ಅಮಿತ್ ಶಾ; ಕೇಜ್ರಿವಾಲ್​ ಸತ್ಯವನ್ನೇ ಹೇಳಿದ್ದಾರೆಂದ ಬಿಜೆಪಿ ವಕ್ತಾರ
ಪಾರ್ಟಿಯಲ್ಲಿರುವ ನಾಯಕರು 75 ಆಗುತ್ತಿದ್ದಂತೆ ಅವರಿಗೆ ನಿವೃತ್ತಿ ಘೋಷಣೆ ಮಾಡುವ ಪ್ರಕ್ರಿಯೆ ಇವರಲ್ಲಿದೆ. ಎಲ್​.ಕೆ. ಅಡ್ವಾಣಿ, ಮುರುಳಿ ಮನೋಹರ್​ ಜೋಶಿ, ಸುಮಿತ್ರಾ ಮಹಾಜನ್​ ಮತ್ತು ಯಶ್ವಂತ್ ಸಿನ್ಹಾ ಇವರೆಲ್ಲರೂ ನಿವೃತ್ತಿ ಪಡೆದರು. ಈಗ ಮೋದಿ ಸರದಿ. ಚುನಾವಣೆಯಲ್ಲಿ ಗೆದ್ದು, ಸರ್ಕಾರ ರಚನೆ ಆದರೆ, ಬಿಜೆಪಿ ಮೊದಲು ಯೋಗಿ ಆದಿತ್ಯನಾಥ್​ರನ್ನು ತೆಗೆದುಹಾಕಿ, ಆನಂತರ ಅಮಿತ್ ಶಾ ಅವರನ್ನು ದೇಶದ ಪ್ರಧಾನಿಯಾಗಿ ಮಾಡುತ್ತದೆ ಎಂದು ಹೇಳಿದ್ದರು. ಸದ್ಯ ಕೇಜ್ರಿವಾಲ್​ರ ಈ​ ಹೇಳಿಕೆಗೆ ಕೇಂದ್ರ ಗೃಹ ಸಚಿವರು ಟಾಂಗ್ ಕೊಟ್ಟಿದ್ದಾರೆ.
“ಈ ದೇಶದ ಮೂಲೆ ಮೂಲೆಯಲ್ಲಿರುವ ಜನರು ನರೇಂದ್ರ ಮೋದಿ ಅವರೊಂದಿಗೆ ನಿಂತಿದ್ದಾರೆ. ಇಂಡಿಯಾ ಮೈತ್ರಿಕೂಟದ ಎಲ್ಲಾ ನಾಯಕರಿಗೂ ನಾವು 400 ಸೀಟ್​ಗಳನ್ನು ಗೆಲುತ್ತೇವೆ ಮತ್ತು ಮೂರನೇ ಬಾರಿಗೆ ಮೋದಿಯವರು ಪ್ರಧಾನಿ ಆಗುತ್ತಾರೆ ಎಂಬ ವಿಷಯ ಚೆನ್ನಾಗಿಯೇ ಗೊತ್ತಿದೆ. ಅದನ್ನು ಮರೆಮಾಚಲು ಇಂತಹ ಕೆಲಸಕ್ಕೆ ಮುಂದಾಗಿದ್ದಾರೆ” ಎಂದರು.
ಇದನ್ನೂ ಓದಿ:ಮೋದಿ ನಿವೃತ್ತಿ, ಅಮಿತ್​ ಶಾ ಪ್ರಧಾನಿ: ಯೋಗಿ ಆದಿತ್ಯನಾಥ್‌ಗೆ ಅರವಿಂದ್ ಕೇಜ್ರಿವಾಲ್ ನೀಡಿದ ಎಚ್ಚರಿಕೆ ಏನು?
#WATCH| On Delhi CM Arvind Kejriwal's 'Amit Shah will be the PM, if BJP wins' remark, Union Home Minister Amit Shah says, "The people of this country, be it from East, West, North, South or Northeast, they are standing with Modi. All the leaders of the INDI alliance know that we…https://t.co/eJgCHox2Q7pic.twitter.com/mmeuL9Uq01
— ANI (@ANI)May 11, 2024

“ಅವರು ಹೇಳಿದಂತೆ ಬಿಜೆಪಿಯಲ್ಲಿ ಆ ರೀತಿಯ ಯಾವ ನಿರ್ಧಾರವನ್ನು ಕೈಗೊಂಡಿಲ್ಲ. 2029ರವರೆಗೂ ಮೋದಿಯವರೇ ಸರ್ಕಾರವನ್ನು ಮುನ್ನಡೆಸಲಿದ್ದು, ಮುಂಬರುವ ಚುನಾವಣೆಯಲ್ಲಿಯೂ ಇರಲಿದ್ದಾರೆ. ಇದು ಇಂಡಿಯಾ ಮೈತ್ರಿಕೂಟಕ್ಕೆ ಶುಭಸುದ್ದಿ ಅಲ್ಲವೇ ಅಲ್ಲ ಬಿಡಿ” ಎಂದು ತಿರುಗೇಟು ನೀಡಿದ್ದಾರೆ,(ಏಜೆನ್ಸೀಸ್).
ಅಂದು ಆರ್​ಸಿಬಿ ಪ್ಲೇಆಫ್​ ಕನಸಿನ ಬಗ್ಗೆ ವಿಲ್​ ಜ್ಯಾಕ್ಸ್​ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?

ಪಂದ್ಯದ ಮಧ್ಯೆ ತನ್ನ ಪಾದ ಸ್ಪರ್ಶಿಸಿದ ಫ್ಯಾನ್​ಗೆ ಧೋನಿ ಹೇಳಿದ ಕಿವಿಮಾತಿದು; ನೀವಿಲ್ಲದ ಐಪಿಎಲ್​ ಏನೇನೂ ಅಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 7 =
Remember me
