ಮುಂಬೈ:ಷೇರು ಮಾರುಕಟ್ಟೆಯ ಕಾರ್ಯಚಟುವಟಿಕೆಯಲ್ಲಿ ಮೋದಿ ಷೇರುಗಳ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಪಕ್ರಮಗಳಿಂದಾಗಿ ಮಾರುಕಟ್ಟೆ ಬಂಡವಾಳೀಕರಣ ಹೆಚ್ಚಾಗುವ ನಿರೀಕ್ಷೆಯಿರುವ ಪಿಎಸ್​ಯು (ಸರ್ಕಾರಿ ವಲಯದ) ಕಂಪನಿಗಳು ಮತ್ತು ಮೂಲಸೌಕರ್ಯ ಕಾರ್ಯದಲ್ಲಿ ತೊಡಗಿರುವ ಕಂಪನಿಗಳ ಷೇರುಗಳನ್ನು ಮೋದಿ ಷೇರುಗಳು ಎಂದು ಗುರುತಿಸಲಾಗುತ್ತದೆ. ಇತ್ತೀಚೆಗಷ್ಟೇ ಆಂಧ್ರಪ್ರದೇಶ ಮುಖ್ಯಮಂತ್ರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಚಂದ್ರಬಾಬು ನಾಯ್ಡು ಅವರಿಗೆ ಥಳಕು ಹಾಕಿಕೊಂಡಿರುವ ಕಂಪನಿಗಳ ಷೇರುಗಳ ಬೆಲೆ ಕೇವಲ ಎಂಟು ವಹಿವಾಟು ದಿನಗಳಲ್ಲಿ 20,000 ಕೋಟಿ ರೂಪಾಯಿ ಏರಿಕೆಯಾಗಿದೆ. ಈಗ ಆಂಧ್ರ ಸ್ಟಾಕ್ ಮತ್ತು ನಾಯ್ಡು ಷೇರುಗಳು ಪಿಎಸ್‌ಯು ಮತ್ತು ಮೋದಿ ಷೇರುಗಳನ್ನು ಸೋಲಿಸುತ್ತಿವೆ ಎನ್ನಲಾಗುತ್ತಿದೆ.
ಮೋದಿ ಸ್ಟಾಕ್​ಗಳ ವ್ಯಾಪ್ತಿ ವಿಸ್ತಾರ ಮತ್ತು ದೀರ್ಘವಾಗಿರಬಹುದು. ಆದರೆ, ಈ ಸಮಯದಲ್ಲಿ ನಾಯ್ಡು ಷೇರು ಮತ್ತು ಆಂಧ್ರ ಷೇರುಗಳ ವೇಗವು ವ್ಯಾಪಾರಿಗಳನ್ನು ಶ್ರೀಮಂತರನ್ನಾಗಿಸುತ್ತಿದೆ ಎಂದು ಷೇರು ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದಲಾಲ್ ಸ್ಟ್ರೀಟ್‌ನ ಅಚ್ಚುಮೆಚ್ಚಿನ ರಾಜಕಾರಣಿ. ನಾಯ್ಡು ಅವರು ಕೂಡ ತಮ್ಮದೆಯಾದ ಅಭಿಮಾನಿಗಳನ್ನು ಹೊಂದಿದ್ದಾರೆ.
ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಉದ್ಯಮ ಸ್ನೇಹಿ ಮತ್ತು ಐಟಿ ಸ್ನೇಹಿ ರಾಜಕಾರಣಿ ಎಂದು ಪರಿಗಣಿಸಲಾಗಿದೆ. ಆಂಧ್ರಪ್ರದೇಶದಲ್ಲಿ ಹಲವು ಸುಧಾರಣೆಗಳ ಮೂಲಕ ನಾಯ್ಡು ಅವರು ತಮ್ಮ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ, ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಅವರ ವಿಜಯದ ನಂತರ ಬಂಪರ್ ಬೆಳವಣಿಗೆಯನ್ನು ದಾಖಲಿಸುತ್ತಿರುವ 24 ಕಂಪನಿಗಳ ಷೇರುಗಳು ಹೂಡಿಕೆದಾರರ ದೃಷ್ಟಿಯಲ್ಲಿವೆ.
ಅಂಜಲಿ ಫುಡ್ ಮತ್ತು ಕ್ರೇನ್ ಇನ್‌ಫ್ರಾಸ್ಟ್ರಕ್ಚರ್‌ನಂತಹ ಮೈಕ್ರೋ ಕ್ಯಾಪ್ ಕಂಪನಿಗಳ ಷೇರುಗಳು ಸಹ ಇದರಲ್ಲಿ ಸೇರಿವೆ. ಈ ಷೇರುಗಳು ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳ ನಂತರ ಬಂಪರ್ ಏರಿಕೆಯನ್ನು ತೋರಿಸಿವೆ. ಈ ಷೇರುಗಳು ಕೇವಲ ಎಂಟು ದಿನಗಳಲ್ಲಿ ಹೂಡಿಕೆದಾರರಿಗೆ ಕ್ರಮವಾಗಿ 69 ಮತ್ತು 53 ಪ್ರತಿಶತದಷ್ಟು ಲಾಭವನ್ನು ನೀಡಿವೆ. ಹೆರಿಟೇಜ್ ಫುಡ್ ಕಂಪನಿಯು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರಿಂದ ಪ್ರಚಾರ ಮಾಡಲ್ಪಟ್ಟಿದೆ, ಇದರ ಷೇರುಗಳು ಜೂನ್ 4 ರಿಂದ ಹೂಡಿಕೆದಾರರಿಗೆ ಶೇಕಡಾ 40 ರಷ್ಟು ಲಾಭವನ್ನು ನೀಡಿವೆ. ಇತರ ಷೇರುಗಳಲ್ಲಿ ಕೆಸಿಪಿ, ಆಂಧ್ರ ಶುಗರ್, ಪೆನ್ನಾರ್ ಇಂಡಸ್ಟ್ರೀಸ್, ಎನ್‌ಸಿಎಲ್ ಇಂಡಸ್ಟ್ರೀಸ್, ಕೆಎನ್‌ಆರ್ ಕನ್‌ಸ್ಟ್ರಕ್ಷನ್, ಅಮರ ರಾಜ ಬ್ಯಾಟರಿ ಮತ್ತು ಸಿಮೆಂಟ್ ಕಂಪನಿಗಳ ಸ್ಟಾಕ್​ಗಳಿದ್ದು, ಇವು ಕೇವಲ ಎಂಟು ದಿನಗಳಲ್ಲಿ ಹೂಡಿಕೆದಾರರಿಗೆ ಎರಡಂಕಿಯ ಲಾಭವನ್ನು ನೀಡಿವೆ.
ಆಂಧ್ರ ಮತ್ತು ನಾಯ್ಡು ಅವರಿಗೆ ಥಳಕು ಹಾಕಿಕೊಂಡಿರುವ ಈ ಎಲ್ಲ 24 ಷೇರುಗಳ ಮಾರುಕಟ್ಟೆ ಮೌಲ್ಯವು 8 ದಿನಗಳಲ್ಲಿ 20198 ಕೋಟಿ ರೂಪಾಯಿಗಳಷ್ಟು ಏರಿಕೆಯಾಗಿದೆ. ಕಳೆದ 8 ದಿನಗಳಲ್ಲಿ ಈ ಎಲ್ಲ ಕಂಪನಿಗಳ ಷೇರುಗಳ ಬೆಲೆಯಲ್ಲಿ ಬಂಪರ್ ಏರಿಕೆ ದಾಖಲಾಗಿದೆ.
ನಾಯ್ಡು ಅವರ ಚಿತ್ರಣವು ಬೆಳವಣಿಗೆ ಮತ್ತು ಅಭಿವೃದ್ಧಿ ಆಧಾರಿತ ನಾಯಕನದ್ದಾಗಿದೆ ಎಂದು ಎಸ್‌ಬಿಐ ಸೆಕ್ಯುರಿಟೀಸ್‌ನ ಫಂಡಾಮೆಂಟಲ್ ಇಕ್ವಿಟಿ ರಿಸರ್ಚ್ ಮುಖ್ಯಸ್ಥ ಸನ್ನಿ ಅಗರ್ವಾಲ್ ಹೇಳುತ್ತಾರೆ. ಎನ್‌ಡಿಎ ಸರ್ಕಾರದ ಮಿತ್ರರಾದ ನಂತರ, ಮೋದಿ ಮತ್ತು ನಾಯ್ಡು ಅವರ ಸಂಯೋಜನೆಯಿಂದಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಕಾರ್ಯನಿರ್ವಹಣೆಯ ನಡುವೆ ಈ ಕಂಪನಿಗಳ ಆದಾಯ ಮತ್ತು ಲಾಭ ಹೆಚ್ಚಾಗಲಿದೆ ಎಂಬ ವಿಶ್ವಾಸ ಹೂಡಿಕೆದಾರದ್ದಾಗಿದೆ.
ಸೌದಿ ಜತೆಗಿನ ಪೆಟ್ರೋಡಾಲರ್ ಒಪ್ಪಂದ ಅಂತ್ಯ: ಅಮೆರಿಕ ಡಾಲರ್​ ಪ್ರಭಾವ ಕುಸಿತ ಸಾಧ್ಯತೆ ಏಕೆ?

ಸಗಟು ಬೆಲೆ ಸೂಚ್ಯಂಕ ಮೇ ತಿಂಗಳಲ್ಲಿ ಏರಿಕೆ: ಆಹಾರ, ಇಂಧನ ಬೆಲೆಗಳಲ್ಲಿ ಹೆಚ್ಚಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
