ನವದೆಹಲಿ: ರೇಡಿಯೊ ತರಂಗಾಂತರವೇ ಇದರ ಗುರಿ, ರೇಡಿಯೇಷನ್​ ವಿರುದ್ಧ ಇದು ರುದ್ರ ಭಯಂಕರ. ಅಸಲಿಗೆ ಇದರ ಹೆಸರೇ ರುದ್ರಂ. ಇದು ಇಂದು ಆಕಾಶದಲ್ಲಿ ಹಾರಾಟ ನಡೆಸಿದ್ದಲ್ಲದೆ ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ.
ಇದು ಸ್ವದೇಶಿ ನಿರ್ಮಿತ ಆ್ಯಂಟಿ ರೇಡಿಯೇಷನ್​ ಮಿಸ್ಸೈಲ್​ ರುದ್ರಂ ಕುರಿತ ಮಾತು. ವಾಯುಸೇನೆಗೆಂದು ರೂಪಿಸಲಾಗಿರುವ ದೇಶದ ಪ್ರಥಮ ಆ್ಯಂಟಿ ರೇಡಿಯೇಷನ್​ ಕ್ಷಿಪಣಿ ರುದ್ರಂ 1ರ ಪ್ರಾಯೋಗಿಕ ಹಾರಾಟ ಶುಕ್ರವಾರ ಯಶಸ್ವಿಯಾಗಿ ನಡೆದಿದ್ದು, ಇದರ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೊಸ ಪೀಳಿಗೆಯ ರೇಡಿಯೇಷನ್​ ನಿರೋಧಕ ಕ್ಷಿಪಣಿ ರುದ್ರಂ ಒಡಿಶಾದ ಕರಾವಳಿಯ ದ್ವೀಪ ಪ್ರದೇಶದಲ್ಲಿನ ದ್ವಿಚಕ್ರ ವಾಹನದಲ್ಲಿರಿಸಿದ್ದ ರೇಡಿಯೇಷನ್​ ಗುರಿಯನ್ನು ಪತ್ತೆ ಹಚ್ಚಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಇದನ್ನು ಎಸ್​ಯು-30 ಎಂಕೆಐ ಯುದ್ಧವಿಮಾನ ಮೂಲಕ ಉಡಾಯಿಸಲಾಗಿದೆ ಎಂದು ಡಿಆರ್​ಡಿಒ ತಿಳಿಸಿದೆ.
ಈ ಮೂಲಕ ಶತ್ರು ದೇಶಗಳ ರಾಡಾರ್, ಕಮ್ಯುನಿಕೇಷನ್​ ಸೈಟ್ಸ್​ ಮತ್ತು ರೇಡಿಯೋ ತರಂಗಾಂತರದ ಇತರ ಗುರಿಗಳ ವಿರುದ್ಧ ದೇಶದ ತನ್ನದೇ ಆದ ಆ್ಯಂಟಿ ರೇಡಿಯೇಷನ್​ ಕ್ಷಿಪಣಿಯನ್ನು ಹೊಂದಿದಂತಾಗಿದೆ ಎಂದು ಡಿಆರ್​ಡಿಒ ಹೇಳಿಕೊಂಡಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
