|ಗಿರೀಶ್ ಲಿಂಗಣ್ಣ
ಭಾರತೀಯ ಸೇನಾ ದಿನದ ಅಂಗವಾಗಿ ನಡೆಸುವ ಪರೇಡನ್ನು ಪ್ರತಿ ವರ್ಷ ದೆಹಲಿಯಲ್ಲಿ ಆಯೋಜಿಸಲಾಗುತ್ತದೆ. ಇದೇ ಮೊದಲ ಬಾರಿಗೆ ದೆಹಲಿಯ ಹೊರಗಡೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಹತ್ವದ ಆಚರಣೆಗಳನ್ನು ರಾಜಧಾನಿ ದೆಹಲಿಯಿಂದ ಹೊರಗೆ, ದೇಶದ ವಿವಿಧ ಭಾಗಗಳಲ್ಲಿ ಆಚರಿಸಬೇಕು ಎಂಬ ಕೇಂದ್ರ ಸರ್ಕಾರದ ಆಲೋಚನೆಯ ಅನುಸಾರವಾಗಿ ಬೆಂಗಳೂರಿನಲ್ಲಿ ಈ ಆಚರಣೆಯನ್ನು ಕೈಗೊಳ್ಳಲಾಗುತ್ತಿದೆ. ಸರ್ಕಾರ ಈ ಮೂಲಕ ಸೇನಾ ದಿನಾಚರಣೆಯ ಕುರಿತು ಹೆಚ್ಚಿನ ಜನರಿಗೆ ತಿಳಿಯುವಂತೆ ಮಾಡುವ ಮತ್ತು ಯುವಜನರನ್ನು ಆಕರ್ಷಿಸುವ ಉದ್ದೇಶ ಹೊಂದಿದೆ.
ಸೇನಾ ದಿನ ಹಿನ್ನೆಲೆ: 1895ರ ಏಪ್ರಿಲ್ 1ರಂದು ಭಾರತೀಯ ಸೇನೆಯನ್ನು ಅಧಿಕೃತವಾಗಿ ಸ್ಥಾಪಿಸಲಾಯಿತು. ಭಾರತ 1947ರಲ್ಲಿ ಸ್ವತಂತ್ರವಾದರೂ, ತನ್ನ ಮೊದಲ ಸೇನಾ ಮಹಾದಂಡನಾಯಕರನ್ನು 1949ರಲ್ಲಿ ಪಡೆಯಿತು. ಆ ಜನವರಿ 15ರ ಐತಿಹಾಸಿಕ ದಿನದಂದು ಜನರಲ್ ಸರ್ ಫ್ರಾನ್ಸಿಸ್ ಬುಚರ್ ಅವರು ಸೇನಾಧಿಕಾರವನ್ನು ಲೆಫ್ಟಿನೆಂಟ್ ಜನರಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಹಸ್ತಾಂತರಿಸಿದರು.
1947ರಲ್ಲಿ ಪಶ್ಚಿಮದ ಗಡಿಯಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಕಾರ್ಯಪ್ಪ ಅವರು ಭಾರತೀಯ ಸೇನೆಯನ್ನು ಮುನ್ನಡೆಸಿದ್ದರು. 1986ರ ಜನವರಿ 14ರಂದು ಜನರಲ್ ಕಾರ್ಯಪ್ಪನವರು ಫೀಲ್ಡ್ ಮಾರ್ಷಲ್ ಪದವಿಗೆ ಬಡ್ತಿ ಪಡೆದಾಗ ಈ ಅತ್ಯುನ್ನತ ಪದವಿ ಪಡೆದ ಎರಡನೇ ಯೋಧರಾದರು. ಸ್ಯಾಮ್ ಮಾಣಿಕ್ ಶಾ 1973ರಲ್ಲಿ ಈ ಪದವಿ ಪಡೆದಿದ್ದರು.
ಪರೇಡಿನ ಮಹತ್ವ: 2022ರಲ್ಲಿ ಭಾರತೀಯ ವಾಯು ದಿನ ಪರೇಡನ್ನು ಚಂಡೀಗಢದಲ್ಲಿ ಆಯೋಜಿಸಲಾಗಿತ್ತು. ಅದನ್ನು ಹಿಂಡನ್ ವಾಯುನೆಲೆಯಿಂದ ಸ್ಥಳಾಂತರಿಸಲಾಗಿತ್ತು. ಈ ಬಾರಿಯ ಸೇನಾ ದಿನಾಚರಣೆಯ ಪರೇಡನ್ನು ಮದ್ರಾಸ್ ಇಂಜಿನಿಯರ್ ಸೆಂಟರ್ ಯುದ್ಧ ಸ್ಮಾರಕದಲ್ಲಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆಯವರು ಹುತಾತ್ಮ ವೀರಯೋಧರನ್ನು ಸ್ಮರಿಸಿ, ಗೌರವಿಸುವ ಮೂಲಕ ಆರಂಭವಾಗುತ್ತದೆ. ದಕ್ಷಿಣ ಕಮಾಂಡಿನ ಪ್ರದೇಶದಲ್ಲಿ ಆಯೋಜಿಸಲಾಗುವ ಪರೇಡಿನಲ್ಲಿ ಸೈನಿಕರು ನೂತನ ಸಮವಸ್ತ್ರ ಧರಿಸಿ ಪಾಲ್ಗೊಳ್ಳಲಿದ್ದಾರೆ. ದಕ್ಷಿಣ ಕಮಾಂಡ್ 1895ರ ಏಪ್ರಿಲ್ 1ರಂದು ಚಾಲ್ತಿಗೆ ಬಂತು. ಇದರ ಮುಖ್ಯ ಕಚೇರಿ ಪುಣೆಯಲ್ಲಿದೆ. ಭಾರತದ 11 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳು ಈ ಕಮಾಂಡಿನಡಿ ಬರುತ್ತವೆ.
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 8 =
Remember me
