ಅಯೋಧ್ಯೆ:ಅಯೋಧ್ಯೆಯ ರಾಮಮಂದಿರದಲ್ಲಿ ಜ.22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ಬಳಿಕ ರಾಮನ ಮೂರ್ತಿಯನ್ನು ಕೆತ್ತಿದ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಅವರು ಪ್ರತಿಮೆಯನ್ನು ಕೆತ್ತಿದ ಶ್ರದ್ಧೆ ಮತ್ತು ಶ್ರಮದ ಬಗ್ಗೆ ಕಥೆಗಳು ಬೆಳಕಿಗೆ ಬರುತ್ತಿವೆ.
ವರದಿಗಳ ಪ್ರಕಾರ, ಶಿಲ್ಪವನ್ನು ಕೆತ್ತುತ್ತಿರುವಾಗ ಅದನ್ನು ವೀಕ್ಷಿಸಿದ ಸಂಸ್ಕೃತ ಮತ್ತು ಸಂಗೀತ ವಿದ್ವಾಂಸ ಸುಮಧುರ್ ಶಾಸ್ತ್ರಿ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅರುಣ್ ಯೋಗಿರಾಜ್ ಅವರು ಕಳೆದ ಏಳು ತಿಂಗಳಲ್ಲಿ ಹಲವಾರು ಬಾರಿ ಮಧ್ಯರಾತ್ರಿಯಲ್ಲಿ ಅವರನ್ನು ಎಬ್ಬಿಸಿದರಂತೆ. ‘ರಾಮಲಲ್ಲಾ ಬುಲಾ ರಹೇ’ ಎಂದು ತನ್ನೊಂದಿಗೆ ಹೋಗುವಂತೆ ಕೇಳಿಕೊಂಡಿದ್ದರೆಂದು ಸುಮಧುರ್ ಶಾಸ್ತ್ರಿ ಹೇಳಿದರು.
ಆರಂಭದಲ್ಲಿ ಸತ್ಯನಾರಾಯಣ ಪಾಂಡೆ ಅವರು ಗರ್ಭಗುಡಿಗೆ ರಾಮಲಲ್ಲಾ ವಿಗ್ರಹವನ್ನು ಮಾಡಲು ಬಂದರು. ನಂತರ ಜಿಎಲ್ ಭಟ್ ಅವರ ಹೆಸರು ಬಂದಿತು ಎಂದು ಸುಮಧುರ್ ಶಾಸ್ತ್ರಿ ಹೇಳಿದರು. ಅಂತಿಮವಾಗಿ ಈ ಕೆಲಸಕ್ಕೆ ಅರುಣ್ ಯೋಗಿರಾಜ್ ಆಯ್ಕೆಯಾದರು.
ರಾಮಲಲ್ಲಾ ವಿಗ್ರಹವು ಮಗುವಿನ ರೂಪದಲ್ಲಿರಬೇಕು. ಅದರ ಎತ್ತರ 51 ಇಂಚು ಇರಬೇಕು ಮತ್ತು ಕೂದಲು ಮತ್ತು ವೈಶಿಷ್ಟ್ಯಗಳ ವಿವರಗಳಿಗೆ ವಿಶೇಷ ಗಮನ ನೀಡಬೇಕು ಎಂದು ದೇವಾಲಯದ ಟ್ರಸ್ಟ್ ಸ್ಪಷ್ಟ ಸೂಚನೆಗಳನ್ನು ನೀಡಿತ್ತು ಎಂದು ಸುಮಧುರ್ ಶಾಸ್ತ್ರಿ ಹೇಳಿದರು. ಎಲ್ಲಾ ದೈವಿಕ ಗುಣಗಳ ಬಗ್ಗೆ ವಿವರವಾದ ಚರ್ಚೆ ನಡೆಯಿತು.
ವರದಿಯ ಪ್ರಕಾರ, ಅರುಣ್ ಯೋಗಿರಾಜ್ ಸ್ವಲ್ಪ ವಿಳಂಬದಿಂದ ತಮ್ಮ ಕೆಲಸವನ್ನು ಪ್ರಾರಂಭಿಸಿದರು ಎಂದು ಸುಮಧುರ್ ಶಾಸ್ತ್ರಿ ಹೇಳಿದ್ದಾರೆ. ಆರಂಭದಲ್ಲಿ ತಮ್ಮ ಮತ್ತು ಯೋಗಿರಾಜ್ ನಡುವೆ ಸಂವಹನದಲ್ಲಿ ಸವಾಲು ಇತ್ತು. ಆದರೆ ನಂತರ ಬ್ರೋಕನ್ ಇಂಗ್ಲಿಷ್‌ನಲ್ಲಿ ಮಾತನಾಡುವ ಮೂಲಕ ಸಂಹವನ ಮಾರ್ಗವನ್ನು ಕಂಡುಕೊಂಡರು ಎಂದು ಶಾಸ್ತ್ರಿ ಹೇಳಿದರು.
ರಾಮಲಲ್ಲಾ ಅವರ ಉತ್ತರ ಭಾರತದ ರೂಪವನ್ನು ಅರ್ಥಮಾಡಿಕೊಳ್ಳಲು, ಅವರು ಸ್ವಾಮಿ ನಾರಾಯಣ ಛಪ್ಪಯ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು ಮತ್ತು ನೈಮಿಶಾರಣ್ಯದಲ್ಲಿನ ದೇವಾಲಯಗಳನ್ನು ನೋಡಿದರು ಎಂದು ಶಾಸ್ತ್ರಿ ಹೇಳಿದರು. ವಿಗ್ರಹದ ಸ್ವರೂಪವನ್ನು ಸಂತರೊಂದಿಗೆ ಚರ್ಚಿಸಲಾಗಿದೆ ಮತ್ತು ದೈವಿಕ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ರಾಮಾಯಣದ ಗ್ರಂಥಗಳು ಮತ್ತು ಶ್ಲೋಕಗಳನ್ನು ಆಳವಾಗಿ ಅಧ್ಯಯನ ಮಾಡಲಾಗಿದೆ. ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ಕಾಲಕಾಲಕ್ಕೆ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದರು ಎಂದರು.
ರಾಮಲಲ್ಲಾ ವಿಗ್ರಹದಲ್ಲಿ ನೇತ್ರಗಳನ್ನು ಮಾಡುವ ಪ್ರಕ್ರಿಯೆ ವಿಶೇಷವಾಗಿದೆ ಎಂದು ಸುಮಧುರ್ ಶಾಸ್ತ್ರಿ ತಿಳಿಸಿದರು. ಇದಕ್ಕಾಗಿ ಚಿನ್ನದ ಉಳಿ ಮತ್ತು ಬೆಳ್ಳಿಯ ಸುತ್ತಿಗೆಯನ್ನು ಅತ್ಯಂತ ಸೂಕ್ಷ್ಮವಾಗಿ ಬಳಸಲಾಗಿದೆ. ರಾಮಲಲ್ಲಾ ದರ್ಶನವಾದಾಗ ಎಲ್ಲರೂ ದೇವರ ದರ್ಶನ ಪಡೆದ ಭಾವ ಮೂಡಬೇಕು ಎಂದು ಕಣ್ಣುಗಳನ್ನು ಕಟ್ಟುವಾಗ ವಿಶೇಷ ಗಮನ ಹರಿಸಲಾಗಿದೆ ಎಂದರು.
ಅಯೋಧ್ಯೆ ರಾಮ ಮಂದಿರಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದವರು ದೊಡ್ಡ ಉದ್ಯಮಿ ಅಲ್ಲವೇ ಅಲ್ಲ, ಮತ್ಯಾರು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 − 5 =
Remember me
