ಗುವಾಹಟಿ:“ಗಾಂಧಿ ಕುಟುಂಬ ದೇಶವನ್ನು ಒಡೆಯಲು ಕೆಲಸ ಮಾಡುತ್ತಿದೆ” ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆರೋಪಿಸಿದ್ದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು “ಗಾಂಧಿ ಹೆಸರನ್ನು ಬಿಟ್ಟು ಬಿಡಿ” ಎಂದು ಒತ್ತಾಯಿಸಿದ್ದಾರೆ.
ಗಾಂಧಿ ಕುಟುಂಬವು “ನಕಲಿ ಸರ್ದಾರ್” ಆಗಿದ್ದು ಅವರು “ಅನೇಕ ಹಗರಣಗಳನ್ನು” ಮಾಡಿದ್ದಾರೆ ಎಂದು ಅಸ್ಸಾಂ ಸಿಎಂ ಆರೋಪಿಸಿದರು. “ಅವರ ಮೊದಲ ಹಗರಣ, ಗಾಂಧಿ ಎಂಬ ಹೆಸರಿನೊಂದಿಗೆ ಪ್ರಾರಂಭವಾಯಿತು. ಅವರು ಕೇವಲ ಪರಿವಾರವಾದದ ಜತೆಜತೆಗೆ ದೇಶವನ್ನು ಒಡೆಯುವ ಕೆಲಸ ಮಾಡಿದರು. ಗಾಂಧಿ ಬಿರುದು ಬಿಡುವಂತೆ ನಾನು ರಾಹುಲ್ ಗಾಂಧಿಯನ್ನು ವಿನಂತಿಸುತ್ತೇನೆ” ಎಂದು ಗುವಾಹಟಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹೇಳಿದರು.
ದೆಹಲಿಯಲ್ಲಿ ನಡೆದ ಜಿ 20 ನಾಯಕರ ಶೃಂಗಸಭೆಯಲ್ಲಿ ಅಂಗೀಕರಿಸಲಾದ ‘ದೆಹಲಿ ಘೋಷಣೆ’ ಗಾಗಿ ಮುಖ್ಯಮಂತ್ರಿ ಶರ್ಮಾ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದರು.
“ಮುಂದಿನ ಎರಡು ವರ್ಷಗಳಲ್ಲಿ ಕಾಮಾಕ್ಯ ಕಾರಿಡಾರ್ ವಾಸ್ತವಕ್ಕೆ ಬರಲಿದೆ. ಪ್ರಧಾನಿ ಮೋದಿಯವರ ಕಾರಣದಿಂದಾಗಿ, ಉಕ್ರೇನ್, ರಷ್ಯಾ ಯುದ್ಧದ ನಡುವೆ ದೆಹಲಿ ಘೋಷಣೆ ಸಂಭವಿಸಿದೆ. ಕಾಂಗ್ರೆಸ್ ದೇಶದ ಸ್ವಾತಂತ್ರ್ಯದ 25 ವರ್ಷಗಳು ಅಥವಾ 50 ವರ್ಷಗಳನ್ನು ಆಚರಿಸಲಿಲ್ಲ. ಆದರೆ, ಮೋದಿ ಅವರು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಿದರು ಮತ್ತು ಎಲ್ಲರೂ ನಾವು ಭಾರತೀಯರು ಎಂದು ಭಾವಿಸುತ್ತಾರೆ. ಮಹಾನ್ ಸುಧಾರಕ ಮಹಾಪುರುಷ ಶಂಕರದೇವ ಅವರು 500 ವರ್ಷಗಳ ಹಿಂದೆ ಭಾರತ ಭೂಮಿಯ ಬಗ್ಗೆ ಬರೆದಿದ್ದಾರೆ, ಇದು ನಮ್ಮ ಭಾರತ ಭೂಮಿ” ಎಂದು ಶರ್ಮಾ ಹೇಳಿದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + seven =
Remember me
