ಕೇರಳ:ಕೇರಳದ ಕಣ್ಣರೂ ಜಿಲ್ಲೆಯ ಪಯ್ಯನೂರು ಬಳಿಯ ಮಡಾಯಿ ಎನ್ನುವ ಸ್ಥಳದಲ್ಲಿ ನೆಲೆಸಿರುವ ಮಡಾಯು ಕಾವು ದೇವಸ್ಥಾನ ಪ್ರಸಿದ್ಧವಾಗಿದೆ. ಶ್ರೀ ತಿರುವರ್ಕ್ಕಟ್ಟು ಕಾವು ಭಗವತಿ ದೇವಸ್ಥಾನವು ಭಕ್ತರಿಗೆ ಕೋಳಿ ಭಕ್ಷ್ಯವನ್ನು ಪ್ರಸಾದವಾಗಿ ನೀಡುವ ರೂಢಿಯನ್ನು ಮುಂದುವರೆಸಿಕೊಂಡು ಬಂದಿದೆ.
ಈ ಹಿಂದೆ ದೇವಾಲಯದಲ್ಲಿ ಪ್ರಾಣಿ ಬಲಿಯನ್ನು ನೀಡಲಾಗುತ್ತಿತ್ತು. ಆದರೆ ಕಾನೂನಿನಿಂದ ನಿಷೇಧ ನಂತರ ಇಂದಿನ ದಿನದವರೆಗೂ ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯವಾಗಿ ಕೋಳಿ ಮಾಂಸವನ್ನು ಹರಕೆಯಾಗಿ ಬಲಿ ನೀಡಲಾಗುತ್ತದೆ, ಮತ್ತೆ ಅದನ್ನೆ ಭಕ್ತರಿಗೆ ವಿತರಿಸಲಾಗುತ್ತದೆ ಎಂದು ದೇವಾಲಯದ ಅಧಿಕಾರಿಯೊಬ್ಬರು ಹೇಳಿದರು.
ಈ ಹಿಂದೆ ದೇವಾಲಯದಲ್ಲಿ ಪ್ರಾಣಿ ಬಲಿಯನ್ನು ಕಾನೂನಿನಿಂದ ನಿಷೇಧಿಸುವವರೆಗೆ ನಡೆಸಲಾಗುತ್ತಿತ್ತು. ಈಗ ಮಲಬಾರ್ ದೇವಸ್ವಂ ನಿರ್ವಹಿಸುತ್ತಿರುವ ದೇವಾಲಯವು ಶತಮಾನಗಳಷ್ಟು ಹಳೆಯದು ಎಂದು ನಂಬಲಾಗಿದೆ.  ಪುರೋಹಿತರು ದೇವಾಲಯದ ಒಳಗೆ ಕೋಳಿ ಭಕ್ಷ್ಯವನ್ನು ದೇವರಿಗೆ ನೈವೇದ್ಯವಾಗಿ ಬೇಯಿಸುತ್ತಾರೆ. ಇದನ್ನು ಬೇಯಿಸಿದ ಹಸಿಬೇಳೆಯೊಂದಿಗೆ ಭಕ್ತರಿಗೆ ವಿತರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೋಳಿಯನ್ನು ‘ಪ್ರಸಾದ’ವಾಗಿ ನೀಡುವ ದೇವಾಲಯದ ಸಂಪ್ರದಾಯವು ಹೆಚ್ಚು ಗಮನ ಸೆಳೆಯುತ್ತಿದೆ.
Went to our ancestral temple at Madayi Kavu. The Shakti temple is famous for its prasad which has chicken in it.pic.twitter.com/psSsRL3JVI
— Nandagopal Rajan (@nandu79)October 31, 2021

ಈ ದೇವಾಲಯದ ಭಕ್ತರಲ್ಲಿ ಬಿಜೆಪಿ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಸೇರಿದ್ದಾರೆ. 2016ರಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಯಡಿಯೂರಪ್ಪ ಅವರು 2009ರ ಡಿಸೆಂಬರ್ 26ರಂದು ‘ಅಮೃತದಯಾನಿ ಊಟುಪುರ’ ಎಂಬ ಭೋಜನಶಾಲೆಯನ್ನೂ ಉದ್ಘಾಟಿಸಿದ್ದರು. ಈ ಪ್ರದೇಶದಲ್ಲಿ ಕನಿಷ್ಠ ಮೂರು ದೇವಾಲಯಗಳು ಕೋಳಿಯನ್ನು ‘ಪ್ರಸಾದ’ವಾಗಿ ವಿತರಿಸುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿವೆ ಎನ್ನಲಾಗಿದೆ.
ಹಲವು ಗಣ್ಯರು, ರಾಜಕಾರಣಿಗಳು, ಬಿಜೆಪಿ ರಾಜ್ಯ ನಾಯಕರು ಕೂಡ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಉತ್ತರ ಕೇರಳದ ಎಲ್ಲಾ ಭದ್ರಕಾಳಿ ದೇವಾಲಯಗಳ ತಾಯಿ ಎಂದು ಪರಿಗಣಿಸಲ್ಪಟ್ಟಿರುವ ದೇವಾಲಯದ ಪ್ರಮುಖ ಭಕ್ತರು ಕನ್ನಡಿಗರು. ಕೋಳಿ ಮಾಂಸವನ್ನು ಪ್ರಸಾದವಾಗಿ ನೀಡುವ ಕಾರಣಗಳಿಗಾಗಿ, ದೇವಾಲಯದ ಅರ್ಚಕರು ಹೊಸ ಬೆಳವಣಿಗೆಯು ಅನಾದಿ ಕಾಲದಿಂದಲೂ ಅನುಸರಿಸುತ್ತಿರುವ ಆಚರಣೆಗೆ ಏನಾದರೂ ಕಡಿವಾಣಕ್ಕೆ ಕಾರಣವಾಗಬಹುದೇ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಪತ್ನಿಯಿಂದ ನಾಗಚೈತನ್ಯ ದೂರವಾಗಲೂ ಇವಳೇ ಕಾರಣನಾ? ಅನುಮಾನಕ್ಕೆ ಕಾರಣವಾಯ್ತು ಈ ಒಂದು ಫೋಟೋ…

ನಡುರಸ್ತೆಯಲ್ಲಿ ಜುಟ್ಟು ಹಿಡಿದು ಕಿತ್ತಾಡಿಕೊಂಡ ಯುವತಿಯರು; ಓ..ಹೆಣ್ಮಗು ಹೆಣ್ಣು ಮಗು ಎಂದ್ರು ನೆಟ್ಟಿಗರು

ಮಾಜಿ ಸಚಿವ ಮಾಧುಸ್ವಾಮಿ ಕಾರು ಅಪಘಾತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
